ಯಾದಗಿರಿ ಜಿಲ್ಲೆಯ ಐತಿಹಾಸಿಕ ಪ್ರಸಿದ್ದ ಶ್ರೀ ಮೈಲಾರಲಿಂಗೇಶ್ವರ ದೇವಾಲಯವು 15ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಹಾಗೂ ಸದರಿ ದೇವಾಲಯದ ವಿಶೇಷತೆಯೆಂದರೆ ದೀಪಾವಳಿ ಹಾಗೂ ಮಕರ ಸಂಕ್ರಾಂತಿಗಳಂದು ಅದ್ಬುತವಾದ ಜಾತ್ರೆ ನಡೆಯುತ್ತದೆ ಅಲ್ಲದೇ ಸದರಿ ಜಾತ್ರೆಯ ನಿಮಿತ್ತ ಪಲ್ಲಕ್ಕಿ ಉತ್ಸವ ಹಾಗೂ ಸರಪಳಿ ಹರಿಯುವ ಕಾರ್ಯಕ್ರಮ ತುಂಬಾ ವಿಶೇಷತೆಯಾಗಿರುತ್ತದೆ. ಆದುದರಿಂದ ಸದರಿ ಶ್ರೀ ಮೈಲಾರಲಿಂಗೇಶ್ವರ ದೇವಾಲಯಕ್ಕೆ ಇನ್ನೊಂದು ಹೆಸರು ಶ್ರೀ ಮೈಲಾರ ಕೋಟಿ ಅಥವಾ ಏಳು ಕೋಟಿ ಮಲ್ಲಯ್ಯ ಎಂದು ಕರೆಯಲಾಗಿರುತ್ತದೆ. ಕೃತಕ ಯುಗದಲ್ಲಿ ಏಳು ಧರ್ಮಪುತ್ರ ಋಷಿಗಳೂ ಮಣಿಚೂರವೆಂಬ ಪರ್ವತದ ಮೇಲೆ ಜಪ, ತಪ, ಯಜ್ಞ ಯುಗಾದಿಗಳನ್ನು ಮಾಡುತ್ತಾ ತಮ್ಮ ಅತ್ಯಂತ ಸುಶೀಲ ಪತ್ನಿ ಪುತ್ರರೊಂದಿಗೆ ಆಶ್ರಮ ಮಾಡಿಕೊಂಡು ಸುಖವಾಗಿ ಕಾಲ ಕಳೆಯುತ್ತಿದ್ದರು. ಎಲ್ಲರೂ ತಮ್ಮ ಕಠೋರ ತಪೋಬಲದಿಂದ ತೇಜಸ್ವಿಯಾಗಿದ್ದರು. ಇದೇ ಮಣಿಚೂರ ಪರ್ವತದ ಸಮೀಪದಲ್ಲಿ ಮಣಿಪೂರ ಎಂಬ ನಗರವಿತ್ತು, ಆ ನಗರ ರಾಜ ಮಲ್ಲಾಸುರ ದೈತ್ಯ (ರಾಕ್ಷಸ)ನೆಂಬುವನು ಉಗ್ರ ತಪಸ್ಸು ಮಾಡಿ ಬ್ರಹ್ಮ ದೇವನ ವರಪ್ರಸಾದದಿಂದ ಅತ್ಯಂತ ಪರಾಕ್ರಮಿಯಾಗಿದ್ದನು ಅವನ ತಮ್ಮನ ಹೆಸರು ಮಣಿಕರ್ಣ ಅವನು ಕೂಡಾ ಪರಾಕ್ರಮಿ, ಮಣಿಪೂರ ನಗರ ಅತಿ ಶೋಭಾಯಮನವಾಗಿತ್ತು. ಇದರ ಮುಂದೆ ಇಂದ್ರದೇವನ ಅಮರಾವತಿ ಕೂಡ ಏನೂ ಅಲ್ಲವಾಗಿತ್ತು. ಮಣಿಪುರ ನಗರದ ಎಲ್ಲಾ ಜನರು ಪ್ರೇಮಭಾವದಿಂದ ಇರುತ್ತಿದ್ದರು. ಇಂಥ ಸುಖಸಂಪನ್ನ ಐಶ್ವರ್ಯಮಾನ, ಮಹಾಪರಾಕ್ರಮಿಯಾದ ಮಲ್ಲ ದೈತ್ಯನ ಬುದ್ಧಿ ಭ್ರಷ್ಟವಾಯಿತು. ಯಾವ ಬ್ರಹ್ಮದೇವನ ವರಪ್ರಸಾದದೀಂದ ಆ ಎಲ್ಲಾ ಐಶ್ವರ್ಯ ಸಿಕ್ಕಿತೋ ಅದರ ವಿರುದ್ಧ ಅವನು ನಡೆಯಲು ಪ್ರಾರಂಭಿಸಿದ ಹೀಗಿರುವಾಗ ಒಮ್ಮೆ ಮಲ್ಲ ದೈತ್ಯನು ಬೇಟೆಗೆಂದು ಅರಣ್ಯದಲ್ಲಿ ಹೋಗುವಾಗ ಅವನ ಕಣ್ಣು ಪರ್ವತದ ಮೇಲಿರುವ ಆ ರಮ್ಯವಾದ ಆಶ್ರಮದ ಕಡೆ ಹೋಯಿತು. ಇಂಥ ಅತ್ಯಂತ ರಮಣೀಯ ಆಶ್ರಮ ನೋಡಿ ಮಲ್ಲ ದೈತ್ಯರಾಜನ ತಲೆ ತಿರುಗಿತು. ದೇವ ಸೇನೆ ಕಾರ್ತಿಕೇಯನ ನೇತೃತ್ವದಲ್ಲಿ ಮಲ್ಲಸೂರನ ಮೇಲೆ ದಾಳಿ ಮಾಡಲು ಮಣಿಚೂರ ಪರ್ವತಕ್ಕೆ ಹೊರಟಿತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಇಂಥಾ ಭೀಕರ ಮಾರ್ತಂಡ ಭೈರವನ ದೇವಸೇನೆ ನೋಡಿದ ಮೆಲ್ಲನೆ ಧೂತರು ಓಡುತ್ತಾ ಹೋಗಿ ಎಲ್ಲಾ ವ್ಯತ್ತಾಂತ ಮಲ್ಲದೈತ್ಯನಿಗೆ ತಿಳಿಸಿದರು. ಆಗ ಮಲ್ಲದೈತ್ಯ ಎತ್ತರ ಪರ್ವತದ ಮೇಲೆ ಬತ್ತಿ ಬರುವ ದೇವ ಸೇನೆ ನೋಡಿ ಇಂತಾ ದೇವ ಸೇನೆ ಸೋಲಿಸುವುದು ನನಗೆ ಕಠಿಣವಿಲ್ಲವೇಂದು ತಿಳಿದು, ಮುಂದಿನ ಯುದ್ಧದ ವಿಚಾರದಲ್ಲಿರುವಾಗ ತಾನು ಕಳುಹಿಸಿದ ಗುಪ್ತ ಧೂತರ ಯುದ್ಧಕ್ಕೆ ಕಾರಣ “ ನೀವು ಸಪ್ತ ಋಷಿಗಳಿಗೆ ಕೊಟ್ಟಿರುವ ಕಷ್ಟನಷ್ಟ ಮತ್ತು ಅವರನ್ನು ಆಶ್ರಮದಿಂದ ಹೊಡೆದು ಓಡಿಸಿದ ಕಾರಣಕ್ಕಾಗಿ ಏಳು ಕೋಟಿ ದೇವಸೇನೆ ನಿಮ್ಮ ಮೇಲೆ ಯುದ್ಧಕ್ಕಾಗಿ ಹೊರಟಿದೆ” ಎಂದು ತಿಳಿಸಿದರು.
ಆಗ ಮಲ್ಲಸುರ ದೈತ್ಯರಾಜ ತನ್ನ ತಮ್ಮನಾದ ಮಣಿಕಾಸುರನ ನೇತೃತ್ವದಲ್ಲಿ ಖಡ್ಗದ್ಯಷ್ಟ ಉಲ್ಮಾಮುಕ, ಕುಂತಲೋಮ ಮತ್ತು ಇನ್ನಿತರ ವೀರದೈತ್ಯರ ಅಪಾರ ಸೇನೆಯೊಂದಿಗೆ ಯುದ್ಧಕ್ಕೆ ಸಿದ್ಧಮಾಡಿಕೊಂಡು ಮಾರ್ತಂಡ ಭೈರವನ ದೇವಸೇನೆಯೊಡನೆ ಯುದ್ಧ ಮಾಡಲು ಹೊರಟಿತು. ಯುದ್ಧ ಪ್ರಾರಂಭ ಮಾರ್ತಂಡ ಭೈರವನ ಏಳುಕೋಟಿ ದೇವ ಸೇನೆ ಅದಕ್ಕಿಂತ ಹೆಚ್ಚು ಮಲ್ಲ ದೈತ್ಯನ ಸೇನೆ ಇದ್ದು ಎರಡು ಸೇನೆಗಳಲ್ಲಿ ಭಯಂಕರ ಘೋರ ಯುದ್ಧಪ್ರಾರಂಭವಾಯಿತು.
ಮೊದಲಿನ ಯುದ್ಧದಲ್ಲಿ ಕಾರ್ತಿಕೇಯ ಖಡ್ಗ ದೈಷ್ಟವನ್ನು ತರುವಾಯ ಗಣಪತಿ ಉಲ್ಕಾಮುಖನನ್ನು ನಂದಿ ಕುಂತಲೋಮನನ್ನನುಕೊಂದು, ಉಲ್ಕಾಮುಖ, ಕುಂತಲೋಮರ ಮರಣದ ಮಾರ್ತೆತಿಳಿದ ಮಣಿದೈತ್ಯನು ರೊಚ್ಚಿಗೆದ್ದು ಮಾಯಾರೂಪಿ ಆಕ್ರಾಳ, ವಿಕ್ರಾಳ ರೂಪ ದಾರಣೆ ಮಾಡಿದೇವ ಸೇನೆಯೊಡನೆ ಪ್ರಚಂಡ ಹೋರಾಟ ನಡೆಸಿದನು. ಈ ಪ್ರಕಾರ ಉಗ್ರ ರೂಪ ತಾಳಿದ ಮಣಿದೈತ್ಯನನ್ನು ನೋಡಿದ ಮಾರ್ತಂಡ ಭೈರವನು ಎಲ್ಲಾ ದೇವ ಸೇನೆಗಳನ್ನು ದೂರ ತಳ್ಳಿ ತಾನೆ ಯುದ್ಧಕ್ಕೆ ಮುಂದೆ ಬಂದನು, ಇದನ್ನು ನೋಡಿ ಮಣಿದೈತು ಹೇಳಿದ “ಹೇ ಭಿಕಾರಿ ಭಿಕ್ಷೆ ಬೇಡುವುದನ್ನು ಬಿಟ್ಟು ಯುದ್ಧಕ್ಕೆ ಬಂದಿರುವೆಯಾ” ಇದನ್ನು ಕೇಳಿದ ಮಾರ್ತಂಡ ಭೈರವ ಅತ್ಯಂತ ಕ್ರೋಧದಿಂದ ಉಗ್ರ ರೂಪ ತಾಳಿ ತನ್ನ ತ್ರಿಶೂಲದಿಂದ ಮಣಿಕನ ಎದೆಯನ್ನು ಸೀಳಿದನು. ಅವನು ನೆಲಕ್ಕೆ ಬೀಳುತ್ತಲೆ ಮೆಟ್ಟಿ ತುಳಿಯಲೆಂದು ಮಣಿಕಾಸುರನ ತಲೆಯ ಮೇಲೆ ತನ್ನ ಪಾದವನಿಟ್ಟನು. ಆಗ ಅಂತ್ಯಗಳಿಗೆಯಲ್ಲಿದ್ದ ಮಣಿಕಾಸುರನಿಗೆ ಶಿವನ ಪಾದಸ್ವರ್ಶವಾಗುತ್ತಲೇ ಜ್ಞಾನೋದಯವಾಯುತು. ಆಗ ಮಣಿಕನು ಶಿವನನ್ನು ನಾನಾ ವಿಧದಲ್ಲಿ ಸ್ತುತಿಸಿದನು. ಅದರಿಂದ ಸಂತೋಷಗೊಂಡ ಶಿವನು ತನ್ನ ನಿಜರೂಪವನ್ನು ತೋರಿ, ನಿನಗೆ ಬೇಕಾದ ವರಬೇಡೆಂದು ಹೇಳಿದ, ಆಗ ಮಣಿಕಾಸುರನು “ದೇವಾ ನನ್ನ ತಲೆಯ ಮೇಲೆ ಇಟ್ಟಿರುವ ಪಾದದಿಂದ ನಾನು ಧನ್ಯನಾದೆ. ಇದೇ ರೀತಿ ಸದಾ ನನ್ನ ತಲೆಯ ಮೇಲೆ ಶಿವನ ಪಾದವಿರಲಿ” ಎಂದರೆ ಸದಾ ನಿಮ್ಮ ಜೊತೆಯಿರಲು ಕುದುರೆ ರೂಪದಲ್ಲಿ ನನ್ನನ್ನು ನಿಮ್ಮ ವಾಹನವಾಗಿ ಸ್ವೀಕರಿಸಬೇಕೆಂದು ಬೇಡಿಕೊಂಡನು, ಅದಕ್ಕೆ ಮಾರ್ತಂಡ ಭೈರವ ಸಮ್ಮತಿಸಿದ. ಈ ರೀತಿ ಮಣಿದೈತ್ಯನು ಮಾರ್ತಂಡ ಭೈರವನ ವಾಹನವಾದನು.
ಮಣಿದೈತ್ಯನ ವರ್ತನೆಯಿಂದ ಸಂತೋಷಗೊಂಡ ಮಾರ್ತಂಡ ಭೈರವನು ಅವನ ಅಣ್ಣನನ್ನು ಉಳಿಸುವ ಉದ್ದೇಶದಿಂದ ಅದನ್ನು ನೋಡಿದ ಸಪ್ತ ಋಷಿಗಳು ಆನಂದ ಭರಿತವಾಗಿ ವಿಷ್ಣುದೇವ “ನಿಮ್ಮ ಭಕ್ತಿಗೆ ಪ್ರಸನ್ನನಾಗಿರುವೆ, ನಿಮಗೇನಾದರೂ ಸಂಕಟ ಇದ್ದರೆ ಹೇಳಿರಿ, ಅದನ್ನು ನಾನು ಅವಶ್ಯ ನಿವಾರಿಸುವೆ” ವಿಷ್ಣುದೇವ ಹೇಳಿದ್ದನ್ನು ಕೇಳಿದ ಸಪ್ತ ಧರ್ಮಪುತ್ರ ಋಷಿಗಳು ಆನಂಧ ಭರಿತರಾಗಿ ಮಲ್ಲದೈತ್ಯ ಕೊಟ್ಟಿರುವ ಕಷ್ಟದ ಬಗ್ಗೆ ಸವಿಸ್ತಾರವಾಗಿ ಹೇಳಿಕೊಂಡರು. ಅದನ್ನೆಲ್ಲ ಕೇಳಿ ವಿಷ್ಣುದೇವ ಹೇಳಿದ. ಅದೆಲ್ಲಾ ಸತ್ಯ ಇದೆ. ಮಲ್ಲಸುರ ಘೋರ ತಪಸ್ಸಿನ ಬಲದಿಂದ ಅಪಾರ ಶಕ್ತಿ ಗಳಿಸಿಕೊಂಡವನು. ಅವನನ್ನು ಸೋಲಿಸಿ ನಾಶಮಾಡುವ ಶಕ್ತಿ ಸಾಮರ್ಥ್ಯ ಕೈಲಾಸವಾಸಿ ಶಂಕರನಿಗೆ ಮಾತ್ರ ಇದೆ. ಅದಕ್ಕಾಗಿ ನಾವೆಲ್ಲರೂ ಕಲೆತು ಹೋಗಿ ಕೈಲಾಸಪತಿ ಶಿವಶಂಕರನ ಹತ್ತಿರ ಮಲ್ಲದೈತ್ಯ ಮಾಡಿರುವ ನೀಚ ಕೃತ್ಯದ ಬಗ್ಗೆ ಹೇಳಿಕೊಳ್ಳೋಣ.
ಕೈಲಾಸ ದರ್ಶನ:- ತರುವಾಯ ವಿಷ್ಣುದೇವ, ನಾರದಮುನಿ ಮತ್ತು ಸಪ್ತ ಋಷಿಗಳು ಕೈಲಾಸ ಪರ್ವತಕ್ಕೆ ಹೋದರು. ಅಲ್ಲಿ ದೇವಾದಿ ದೇವ ಮಹಾದೇವ ಪಾರ್ವತಿ ಸಹಿತ ಆಸನದ ಮೇಲೆ ವಿರಾಜಮಾನವಾಗಿದ್ದ. ಆಗ ಋಷಿಮುನಿಗಳ ಸಹಿತ ವಿಷ್ಣುದೇವನ ಆಗಮನ ನೋಡಿ ಶಿವನು ಅತಿಶಯ ಆನಂದದಿಂದ ಎಲ್ಲರನ್ನು ಬರಮಾಡಿಕೊಂಡನು. ಬಂದಿರುವ ಕಾರಣ ವಿಚಾರಿಸಿದಾಗ ಸಪ್ತ ಋಷಿಗಳು ಶಿವನಿಗೆ ನಾನಾ ಪ್ರಕಾರ ಸ್ತುತಿಸಿ, “ ಹೇ ಶಿವಶಂಕರ ಮಲ್ಲದೈತ್ಯನು ಸೊಕ್ಕಿಗೆದ್ದಿರುವನು ಅವನು ನಮ್ಮ ಆಶ್ರಮ ಯಜ್ಞ ಯುಗಾದಿ ನಾಶ ಮಾಡಿ ನಮ್ಮೆಲ್ಲರನ್ನು ಆಶ್ರಮದಿಂದ ಹೊಡೆದು ಗಾಯಗೊಳಿಸಿ ಓಡಿಸಿರುವನು” ಹೇ ದೇವಾದಿ ದೇವ ನೀನೆ ನಮ್ಮನ್ನು ರಕ್ಷಿಸಿ ಕಾಪಾಡಬೆಕು ಆಗ ಶಿವನು ಹೇಳಿದ “ ಆ ದೈತ್ಯನ ಮರಣ ಸಮೀಪಿಸಿದೆ, ನಾನು ಅವನನ್ನು ಕೊಲ್ಲುವೆನು” ನಿರ್ಭಯದಿಂದ ಇರಲು ಹೇಳಿದ.
ಬಾಗಿಲು ತೆರೆಯುವ ಸಮಯ:
07:30 AM IST – IST
IST – 08:00 PM IST
ಬಾಗಿಲು ಮುಚ್ಚುವ ಸಮಯ:
ಸಾಮಾನ್ಯ ದರ್ಶನ







