ಮಹಾತ್ತೋಭಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ಆದಿ ಶಂಕರರ ಕಾಲದಿಂದ ಸ್ಥಾನಿಕ ಸ್ಮಾರ್ತ ಮೊರೋಜ(ಮೋರ-ಮೈಯೂರ ಓಜಜಾಚಾರ್ಯ) ಮನೆತನದ ಆಡಳಿಕೆ ಒಳಪಟ್ಟಿದ್ದ ದೇವಾಲಯವಾಗಿದೆ. ಹಿಂದೆ ಸ್ಮಾರ್ತ ಬ್ರಾಹ್ಮಣರಿಂದ ಪೂಜೆಗೊಳ್ಳುತ್ತಿದ್ದ ಸುಬ್ರಹ್ಮಣ್ಯ (Kukke Subrahmanya) ಈಗ ಮಾಧ್ವ ಬ್ರಾಹ್ಮಣರ ಪೂಜಾಧೀನದಲ್ಲಿ ಈ ದೇವಾಲಯವಿದೆ ಸದ್ಯ ಈಗ ಕರ್ನಾಟಕ ಸರಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದೆ. ಸುಬ್ರಹ್ಮಣ್ಯ ಗ್ರಾಮವು ಸುಳ್ಯ ತಾಲೂಕುದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.
ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ (Kukke Subrahmanya Temple) ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟ್, ಬನಿಯಾನುಗಳನ್ನು ತೆಗೆಯಬೇಕಾಗುವುದು.
ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯವು ಮೊದಲು ‘ಕುಕ್ಕೆಪಟ್ಟಣ’ ವಾಗಿತ್ತು. ಈ ಕುಕ್ಕೆಪಟ್ಟಣವು ಬಲ್ಲಾಳರಾಜನ ಆಡಳಿತಕ್ಕೆ ಒಳಪಟ್ಟಿತ್ತು. ಆದ್ದರಿಂದ ಬಲ್ಲಾಳ ರಾಜನ ಮೂರ್ತಿಯು ಈಗಲೂ ದೇವಸ್ಥಾನದಲ್ಲಿ ಗೌರವವನ್ನು ಪಡೆಯುತ್ತಿದೆ. ಕುಲ್ಕುಂದ ಹತ್ತಿರ ರಾಜನ ಅರಮನೆ ಇರುವ ಅಡಿಸ್ಥಳವನ್ನು ಈಗಲೂ ಕಾಣಬಹುದು.
ಕುಕ್ಕೆ ಪಟ್ಟಣದಲ್ಲಿ ಬ್ರಾಹ್ಮಣರು ವಾಸಿಸುವ ಬೀದಿಯನ್ನು ಅಗ್ರಹಾರವೆಂದು, ವಾಲಗದವರು ವಾಸಿಸುವ ಪ್ರದೇಶವನ್ನು ವಾಲಗಕೇರಿಯೆಂದು, ಅರಮನೆಯ ಕುದುರೆಗಳನ್ನು ಕಟ್ಟುವ ಲಾಯಗಳಿರುವ ಪ್ರದೇಶವನ್ನು ಕುದುರೆ ಮಜಲು ಎಂದು, ಆನೆಗಳನ್ನು ಸಾಕುತ್ತಿರುವ ಪ್ರದೇಶವನ್ನು ಆನೆಗುಂಡಿಯೆಂದು, ಮಲ್ಲಿಗೆ ಬೆಳೆಯುತ್ತಿದ್ದ ಪ್ರದೇಶವನ್ನು ಮಲ್ಲಿಗೆ ಮಜಲು ಎಂದು, ಕುಸ್ತಿ ನಡೆಯುತ್ತಿದ್ದ ಪ್ರದೇಶವನ್ನು ಗರಡಿ ಬಯಲು ಎಂದು, ಎತ್ತಿನ ಗಾಡಿಗಳನ್ನು ನಿಲ್ಲಿಸುತ್ತಿದ್ದ ಪ್ರದೇಶವನ್ನು ಬಂಡಿಮಾಳವೆಂದು, ಒಂಟೆಗಳನ್ನು ಕಟ್ಟುತ್ತಿದ್ದ ಜಾಗವನ್ನು ಒಂಟೆಗುಂಡಿ ಎಂದು ಕರೆಯುತ್ತಿದ್ದರು.
ಇವುಗಳಲ್ಲಿ ಹೆಚ್ಚಿನ ಪ್ರದೇಶಗಳು ಈಗಲೂ ಅದೇ ಹೆಸರಿನಿಂದ ಕರೆಯಲ್ಪಡುತ್ತವೆ. ಗ್ರಾಮದಲ್ಲಿ ಅನೇಕ ಕಡೆ ಕುಕ್ಕೆಪಟ್ಟಣ ಇದ್ದ ಬಗ್ಗೆ ಹಾಗೂ ಜನವಸತಿ ಇದ್ದ ಬಗ್ಗೆ ಕುರುಹುಗಳು ಈಗಲೂ ದೊರೆಯುತ್ತಿವೆ. ಆದರೆ ಕುಕ್ಕೆ ಪಟ್ಟಣ ಯಾವ ರೀತಿಯಲ್ಲಿ ನಾಶ ಹೊಂದಿದೆ ಎಂಬುದರ ಬಗ್ಗೆ ಯಾರಿಗೂ ಖಚಿತ ಮಾಹಿತಿ ತಿಳಿದಿಲ್ಲ. ಆದರೆ ಒಂದಿಬ್ಬರ ಅಭಿಪ್ರಾಯದ ಪ್ರಕಾರ ಸಿಡುಬುನಂತಹ ಭೀಕರ ರೋಗದಿಂದಾಗಿ ಜನ ಸರ್ವನಾಶವಾಗಿರಬಹುದು ಅಥವಾ ಗುಳೇ ಎದ್ದು ಹೋಗಿರಬಹುದು ಎಂದು ತಿಳಿದು ಬರುತ್ತದೆ.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸುವ ಭಕ್ತಿಗೀತೆಯಲ್ಲಿ ಕುಕ್ಕೆ ಪಟ್ಟಣದ ಪ್ರಸ್ತಾವನ್ನು ನಾವು ಗಮನಸಿಬಹುದು, ಕುಕ್ಕೆ ಪಟ್ಟಣದ ನಾಶವಾದ ನಂತರ ಪುನಃ 1904ರಿಂದ ಇಲ್ಲಿ ಜನ ವಾಸ ಮಾಡಲು ಪ್ರಾರಂಭಿಸಿದರು ಎಂದು ತಿಳಿದು ಬರುತ್ತದೆ. ಅಲ್ಲಿಂದ ನಂತರ ಕುಕ್ಕೆಪಟ್ಟಣದ ಪ್ರದೇಶವು ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲ್ಪಟ್ಟು ಇಂದು ಅತ್ಯಂತ ಪ್ರಸಿದ್ಧಿಯಾದ ಯಾತ್ರಾಸ್ಥಳವಾಗಿದೆ. ನಂತರ ಸುಬ್ರಹ್ಮಣ್ಯ ಶೀಘ್ರ ಪ್ರಗತಿಯಲ್ಲಿ ಬೆಳೆದು ಬಂದಿರುವುದಕ್ಕೆ ಈ ಪ್ರದೇಶದಲ್ಲಿದ್ದ ದೇವಸ್ಥಾನದ ಆಸ್ತಿತ್ವವೇ ಮುಖ್ಯ ಕಾರಣವಾಗಿದೆ.
ಲೇಖನ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








