ADVERTISEMENT
Monday, February 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

admin by admin
December 14, 2025
in Newsbeat, Sports, ಕ್ರಿಕೆಟ್
Playing a cricket match.. but no handshake..!

Playing a cricket match.. but no handshake..!

Share on FacebookShare on TwitterShare on WhatsappShare on Telegram

2025 ಭಾರತ – ಪಾಕ್ ನಡುವಿನ ಪುರುಷರ t-20 ಏಷ್ಯಾಕಪ್ ಕ್ರಿಕೆಟ್ ಟೂರ್ನಿ – ನೋ ಹ್ಯಾಂಡ್ ಶೇಕ್..!
2025 ಭಾರತ – ಪಾಕ್ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ – ನೋ ಹ್ಯಾಂಡ್ ಶೇಕ್..!
2025 ಭಾರತ – ಪಾಕ್ ನಡುವಿನ 19 ವಯೋಮಿತಿ ಏಕದಿನ ಏಷ್ಯಾಕಪ್ ಟೂರ್ನಿ – ನೋ ಹ್ಯಾಂಡ್ ಶೇಕ್…!
ಇದು ಎಷ್ಟು ದಿನ ಹೀಗೆ ಮುಂದುವರಿಯುತ್ತೆ.. ಗೊತ್ತಿಲ್ಲ… ಉಭಯ ದೇಶಗಳ ನಡುವಿನ ರಾಜಕೀಯ ಕದನಕ್ಕೆ ಮೈದಾನದಲ್ಲಿ ಇಂಡೋ ಪಾಕ್ ಆಟಗಾರರು ಒಬ್ಬರೊನ್ನೊಬ್ಬರು ದಿಟ್ಟಿಸಿ ಕೂಡ ನೋಡುತ್ತಿಲ್ಲ. ಆಟಗಾರರ ನಡುವೆ ಮಾತಿಲ್ಲ.. ಮುಖದಲ್ಲಿ ನಗುವಿಲ್ಲ. ಎಲ್ಲವೂ ಪೂರ್ವ ನಿರ್ಧಾರದಂತೆ ನಡೆದಿದೆ. ಮೈದಾನದಲ್ಲಿ ಮುಜುಗರವಾಗಬಾರದು ಎಂಬ ಕಾರಣಕ್ಕೆ ಐಸಿಸಿ ಮೊದಲೇ ಸೂಚನೆ ನೀಡಿತ್ತು. ಹ್ಯಾಂಡ್ ಶೇಕ್ ಮಾಡುತ್ತಿಲ್ಲ ಎಂಬುದನ್ನು ಮೊದಲೇ ಹೇಳಬೇಕು ಎಂದು ಹೇಳಿತ್ತು. ಹಾಗೇ ಕ್ರಿಕೆಟ್ ಆಟದಲ್ಲಿ ರಾಜಕೀಯ ಬೇಡ ಎಂಬ ಸಂದೇಶವನ್ನು ಬಿಸಿಸಿಐ ತಿರಸ್ಕರಿಸಿದೆ. ಹೀಗಾಗಿ ಹ್ಯಾಂಡ್‍ಶೇಕ್ ವಿಚಾರ ಮುಂದಿನ ದಿನಗಳಲ್ಲಿ ಐಸಿಸಿಗೆ ಧರ್ಮ ಸಂಕಟವಾಗಿ ಪರಿಣಮಿಸಲಿದೆ.
ಇಂಡೋ ಪಾಕ್ ಮ್ಯಾಚ್ ಅಂದ್ರೆ ಅದು ಹೈವೋಲ್ಟೇಜ್ ಪವರ್ ಇದ್ದಂಗೆ. ನಿಜ, ಉಭಯ ದೇಶಗಳ ನಡುವೆ ಈ ಹಿಂದೆ ಮೈದಾನದಲ್ಲಿ ಸಾಕಷ್ಟು ವಾಕ್ಸಮರಗಳು ನಡೆದಿವೆ. ಆಟಗಾರರು ಕಿತ್ತಾಡಿಕೊಂಡಿದ್ದಾರೆ. ಹೊಡೆದಾಟಕ್ಕೂ ಮುಂದಾಗಿದ್ದಾರೆ. ಹಾಗೇ ಮೈದಾನದ ಹೊರಗಡೆಯೂ ಅಭಿಮಾನಿಗಳ ನಡುವೆ ಅಷ್ಟೇ ಕಿತ್ತಾಟಗಳು ನಡೆದಿವೆ. ಆದ್ರೆ ಪಂದ್ಯ ಮುಗಿದ ಮೇಲೆ ಉಭಯ ದೇಶಗಳ ನಡುವಿನ ಆಟಗಾರರ ನಡುವೆ ಆತ್ಮೀಯತೆ ಇರುತ್ತಿತ್ತು. ಭಾರತದ ವಿರುದ್ಧ ಸದಾ ಟೀಕೆ ಮಾಡುತ್ತಿರುವ ಶಾಹೀದ್ ಆಫ್ರಿದಿ 2004ರಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಮನೆಗೆ ಕರೆದು ಆತಿಥ್ಯ ನೀಡಿದ್ದರು ಎಂಬುದನ್ನು ಮರೆಯುವ ಹಾಗಿಲ್ಲ. ಅಲ್ಲದೆ, 2004ರ ಸೌಹಾರ್ದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಉಭಯ ದೇಶಗಳು ದ್ವೇಷವನ್ನು ಮರೆತು ಕ್ರಿಕೆಟ್ ಆಟವನ್ನು ಎಂಜಾಯ್ ಮಾಡಿದ್ರು.
ಆದ್ರೆ ಪಾಕ್‍ನ ರಾಜಕೀಯ ನಾಯಕರ ಅಧಿಕಾರ ದಾಹ.. ಸೇನೆಯ ಕಪಟ ನಾಟಕ..ನರಹಂತಕ ರಕ್ಕಸರ ಆರ್ಭಟಕ್ಕೆ ಇಂಡೋ ಪಾಕ್ ನಡುವಿನ ರಾಜಕೀಯ, ಆರ್ಥಿಕ ವಹಿವಾಟು ಮಾತ್ರ ಸ್ಥಗಿತಗೊಂಡಿಲ್ಲ. ಜೊತೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಮ್ಯಾಚ್ ನಿಂತೋಗಿದೆ. ಇದೀಗ ಐಸಿಸಿ ಟೂರ್ನಿಗಳನ್ನು ತಟಸ್ಥ ತಾಣಗಳಲ್ಲಿ ಆಡುತ್ತಿದ್ದು, ಮುಂದೊಂದು ದಿನ ಇದು ಕೂಡ ಸ್ಥಗಿತಗೊಂಡ್ರೆ ಅಚ್ಚರಿ ಏನಿಲ್ಲ..!
ಯಾಕಂದ್ರೆ ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿ ಪಾಕ್ ಜೊತೆ ನೆಂಟಸ್ತಿಕೆ ಮಾಡೋ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಮೋದಿ ಅವರು, ಅಟಲ್‍ಬಿಹಾರಿ ವಾಜಪೇಯಿಯಂತೆ ಸ್ನೇಹಜೀವಿಯೂ ಅಲ್ಲ.. ಮನಮೋಹನ್ ಸಿಂಗ್‍ನಂತೆ ಉದಾರವಾದಿಯೂ ಅಲ್ಲ.. ಏನಿದ್ರೂ ಭಯೋತ್ಪಾದನೆ ನಿಲ್ಲೋ ತನಕ ಪಾಕಿಸ್ತಾನದ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಅಷ್ಟೇ ಅಲ್ಲ.. ಕ್ರಿಕೆಟ್‍ನಿಂದ ಭಾರತ – ಪಾಕ್ ನಡುವೆ ಸ್ನೇಹ ಬೆಳೆಯುತ್ತೆ ಎಂಬುದು ಪೇಪರ್ ಮೇಲೆ ಬರೆಯುವ ಪದಗಳಷ್ಟೇ ಎಂಬುದು ಗೊತ್ತಿರುವ ವಿಚಾರವೇ..! ಈ ಹಿಂದೆ ಎರಡು ಮೂರು ಬಾರಿ ಸ್ನೇಹ ಹಸ್ತಚಾಚಿದ್ರೂ ಭಾರತದ ಬೆನ್ನಿಗೆ ಚೂರಿ ಹಾಕಿರುವ ಪಾಕಿಸ್ತಾನದ ನರಿಬುದ್ದಿಯನ್ನು ಈಗ ಅಷ್ಟು ಇಝಿಯಾಗಿ ನಂಬುವ ಸ್ಥಿತಿಯಲ್ಲಿ ಇಲ್ವೇ ಇಲ್ಲ.. ಸೋ.. ಸದ್ಯ ನೋ ಹ್ಯಾಂಡ್‍ಶೇಕ್.. ಮುಂದೊಂದು ದಿನ ನೋ ಕ್ರಿಕೆಟ್ ಮ್ಯಾಚ್..?

ಸನತ್ ರೈ

Related posts

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್ ಶಾಕ್: ಈ ಸಣ್ಣ ತಪ್ಪು ಮಾಡಿದರೆ ರದ್ದಾಗಲಿದೆ ಗ್ಯಾಸ್ ಕನೆಕ್ಷನ್!

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್ ಶಾಕ್: ಈ ಸಣ್ಣ ತಪ್ಪು ಮಾಡಿದರೆ ರದ್ದಾಗಲಿದೆ ಗ್ಯಾಸ್ ಕನೆಕ್ಷನ್!

February 9, 2026
ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

February 9, 2026
Source: Playing a cricket match.. but no handshake..!
Via: Playing a cricket match.. but no handshake..!
Tags: #nohandshek#saakshatv#under19asiacupCricketPakistanteamindia
ShareTweetSendShare
Join us on:

Related Posts

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್ ಶಾಕ್: ಈ ಸಣ್ಣ ತಪ್ಪು ಮಾಡಿದರೆ ರದ್ದಾಗಲಿದೆ ಗ್ಯಾಸ್ ಕನೆಕ್ಷನ್!

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್ ಶಾಕ್: ಈ ಸಣ್ಣ ತಪ್ಪು ಮಾಡಿದರೆ ರದ್ದಾಗಲಿದೆ ಗ್ಯಾಸ್ ಕನೆಕ್ಷನ್!

by Shwetha
February 9, 2026
0

ಬೆಂಗಳೂರು: ನೀವು ಅಡುಗೆ ಅನಿಲ ಅಥವಾ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಾಗಿದ್ದರೇ ನಿಮಗೊಂದು ಅತ್ಯಂತ ಮಹತ್ವದ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಕಠಿಣ ಸೂಚನೆಯೊಂದನ್ನು ರವಾನಿಸಿದ್ದು,...

ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

ಆಸ್ತಿ ಖರೀದಿಸುವ ಮುನ್ನ ಎಚ್ಚರ! ಜಮೀನಿನ ಜಾತಕ ಜಾಲಾಡಲು ಬಂದಿದೆ ದಿಶಾಂಕ್, ಮೊಬೈಲ್ ನಲ್ಲೇ ಚೆಕ್ ಮಾಡಿ ಅಸಲಿ ಕತೆ

by Shwetha
February 9, 2026
0

ಬೆಂಗಳೂರು: ಜಮೀನು ಅಥವಾ ನಿವೇಶನ ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ ಕಷ್ಟಪಟ್ಟು ದುಡಿದ ಹಣವನ್ನು ಆಸ್ತಿ ಮೇಲೆ ಹೂಡಿಕೆ ಮಾಡುವಾಗ ಆ ಜಾಗದ ಬಗ್ಗೆ ಸರಿಯಾದ ಮಾಹಿತಿ...

ಜೆಮಿಮಾಗೆ ಜೀಸಸ್ ನೆರವಾಗಲಿಲ್ಲ ಸ್ಮೃತಿಯನ್ನು ತಿಮ್ಮಪ್ಪ ಕೈಬಿಡಲಿಲ್ಲ: ವಿಕೃತ ಟ್ರೋಲ್ ಗೆ ಪ್ರಕಾಶ್ ರಾಜ್ ಗರಂ

ಜೆಮಿಮಾಗೆ ಜೀಸಸ್ ನೆರವಾಗಲಿಲ್ಲ ಸ್ಮೃತಿಯನ್ನು ತಿಮ್ಮಪ್ಪ ಕೈಬಿಡಲಿಲ್ಲ: ವಿಕೃತ ಟ್ರೋಲ್ ಗೆ ಪ್ರಕಾಶ್ ರಾಜ್ ಗರಂ

by Shwetha
February 9, 2026
0

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೋಮು ಭಾವನೆಯ ಪೋಸ್ಟ್ ಒಂದರ ವಿರುದ್ಧ ಬಹುಭಾಷಾ ನಟ ಪ್ರಕಾಶ್...

ಮೆಟ್ರೋ ವಿಸ್ತರಣೆಗೆ ಮೋದಿ ಕಾರಣ, ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆಯೇ? ಬಿಜೆಪಿ ದ್ವಂದ್ವ ನೀತಿಯ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಮೆಟ್ರೋ ವಿಸ್ತರಣೆಗೆ ಮೋದಿ ಕಾರಣ, ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆಯೇ? ಬಿಜೆಪಿ ದ್ವಂದ್ವ ನೀತಿಯ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

by Shwetha
February 9, 2026
0

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆಯೇ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದತ್ತ ಬೆರಳು...

ಸಿದ್ದರಾಮಯ್ಯ ಸುಳ್ಳಿನ ಸರದಾರ, ರೈಲ್ವೆ ಯೋಜನೆಗೆ ಸಹಕರಿಸದಿದ್ದರೆ ಕಾನೂನು ಕ್ರಮ: ಕೇಂದ್ರ ಸಚಿವ ವಿ ಸೋಮಣ್ಣ ಎಚ್ಚರಿಕೆ

ಸಿದ್ದರಾಮಯ್ಯ ಸುಳ್ಳಿನ ಸರದಾರ, ರೈಲ್ವೆ ಯೋಜನೆಗೆ ಸಹಕರಿಸದಿದ್ದರೆ ಕಾನೂನು ಕ್ರಮ: ಕೇಂದ್ರ ಸಚಿವ ವಿ ಸೋಮಣ್ಣ ಎಚ್ಚರಿಕೆ

by Shwetha
February 9, 2026
0

ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದ್ದು, ಸ್ವತಃ ಮುಖ್ಯಮಂತ್ರಿಗಳೇ ಸುಳ್ಳು ಹೇಳುವುದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram