ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಪರಮೇಶ್ವರ್ ಕೋಟೆಯಲ್ಲೇ ಮೊಳಗಿದ ಮುನಿಯಪ್ಪ ಸಿಎಂ ಘೋಷಣೆ: ಕಾಂಗ್ರೆಸ್ ಪಡಸಾಲೆಯಲ್ಲಿ ಮತ್ತೆ ಜೋರಾಯ್ತು ಎಡ-ಬಲ ಸಮರ

Muniyappa's CM announcement rang out from Parameshwara Fort itself

Shwetha by Shwetha
December 27, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ತುಮಕೂರು: ರಾಜ್ಯ ರಾಜಕೀಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳದ ಕಿಡಿ ಹೊತ್ತಿಕೊಂಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ತವರು ಜಿಲ್ಲೆ ಹಾಗೂ ರಾಜಕೀಯ ಕರ್ಮಭೂಮಿಯಾದ ತುಮಕೂರಿನಲ್ಲೇ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಮುಂದಿನ ಮುಖ್ಯಮಂತ್ರಿ ಎಂಬ ಜೈಕಾರ ಮೊಳಗಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ದಲಿತರಿಗೆ ಉನ್ನತ ಸ್ಥಾನಮಾನ ನೀಡುವ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ತುಮಕೂರಿನಲ್ಲಿ ನಡೆದ ಈ ಘಟನೆ ಕಾಂಗ್ರೆಸ್ ಪಾಳಯದ ಎಡ ಮತ್ತು ಬಲ ಗುಂಪುಗಳ ನಡುವಿನ ಶೀತಲ ಸಮರವನ್ನು ಬೀದಿಗೆ ತಂದಂತಾಗಿದೆ.

Related posts

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

August 25, 2026
ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

August 25, 2026

ತುಮಕೂರಿನಲ್ಲಿ ಮಾಜಿ ಶಾಸಕ ಗಂಗಹನುಮಯ್ಯ ಅವರ ನಿವಾಸಕ್ಕೆ ಹಿರಿಯ ನಾಯಕ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಜಮಾಯಿದ್ದ ಮುನಿಯಪ್ಪ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಅತ್ಯುತ್ಸಾಹದಿಂದ ಮುಂದಿನ ಮುಖ್ಯಮಂತ್ರಿ ಕೆ.ಹೆಚ್. ಮುನಿಯಪ್ಪ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಪರಮೇಶ್ವರ್ ಅವರ ಹಿಡಿತವಿರುವ ಜಿಲ್ಲೆಯಲ್ಲೇ ಮುನಿಯಪ್ಪ ಪರ ಈ ಮಟ್ಟದ ಬೆಂಬಲ ವ್ಯಕ್ತವಾಗಿರುವುದು ಪರಮೇಶ್ವರ್ ಬಣಕ್ಕೆ ಮುಜುಗರ ಉಂಟುಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಡ-ಬಲ ಸಮುದಾಯಗಳ ಪ್ರತಿಷ್ಠೆಯ ಕಣ

ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲಾ ಕಾಂಗ್ರೆಸ್‌ನಲ್ಲಿ ಒಳಪಂಗಡಗಳ ಪೈಪೋಟಿ ಸಹಜವಾಗಿ ಎದುರಾಗುತ್ತದೆ. ಸದ್ಯ ಬಲಗೈ ಸಮುದಾಯವನ್ನು ಪ್ರತಿನಿಧಿಸುವ ಡಾ. ಜಿ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಮತ್ತು ಸ್ವಾಮೀಜಿಗಳು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಸೆಡ್ಡು ಹೊಡೆಯುವಂತೆ, ಎಡಗೈ ಸಮುದಾಯದ ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಅವರಿಗೆ ಪಟ್ಟ ಕಟ್ಟಬೇಕು ಎಂಬ ಕೂಗು ಈಗ ಜೋರಾಗಿದೆ. ತುಮಕೂರಿನಲ್ಲಿ ನಡೆದ ಘಟನೆ ಈ ಪೈಪೋಟಿಗೆ ತುಪ್ಪ ಸುರಿದಂತಾಗಿದೆ.

ಪರಮೇಶ್ವರ್ ತವರಲ್ಲಿ ಶಕ್ತಿ ಪ್ರದರ್ಶನವೇ?

ತುಮಕೂರು ಡಾ. ಜಿ. ಪರಮೇಶ್ವರ್ ಅವರ ಭದ್ರಕೋಟೆ. ಇಲ್ಲಿ ಬಂದು ಮುನಿಯಪ್ಪ ಬೆಂಬಲಿಗರು ಸಿಎಂ ಘೋಷಣೆ ಕೂಗಿರುವುದು ಕೇವಲ ಅಭಿಮಾನದ ಪ್ರದರ್ಶನವಲ್ಲ, ಬದಲಾಗಿ ಇದೊಂದು ರಾಜಕೀಯ ಸಂದೇಶ ಎಂದೇ ಭಾವಿಸಲಾಗುತ್ತಿದೆ. ದಲಿತ ಸಿಎಂ ರೇಸ್‌ನಲ್ಲಿ ನಾನೇನು ಕಮ್ಮಿಯಿಲ್ಲ ಎಂಬುದನ್ನು ಮುನಿಯಪ್ಪ ಪರೋಕ್ಷವಾಗಿ ತಮ್ಮ ಎದುರಾಳಿ ಬಣಕ್ಕೆ ರವಾನಿಸಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಕಾಂಗ್ರೆಸ್‌ಗೆ ಹೊಸ ತಲೆನೋವು

ಈಗಾಗಲೇ ಮುಖ್ಯಮಂತ್ರಿ ಬದಲಾವಣೆ, ಡಿಸಿಎಂ ಹುದ್ದೆ ಸೃಷ್ಟಿ ಸೇರಿದಂತೆ ಹಲವು ಗೊಂದಲಗಳಲ್ಲಿರುವ ಕಾಂಗ್ರೆಸ್ ಹೈಕಮಾಂಡ್‌ಗೆ, ದಲಿತ ನಾಯಕರ ನಡುವಿನ ಈ ಒಳಜಗಳ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರ ಮಟ್ಟದಲ್ಲಿ ನಡೆಯುತ್ತಿರುವ ಈ ಎಡ-ಬಲ ಬಡಿದಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ShareTweetSendShare
Join us on:

Related Posts

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

by Shwetha
August 25, 2026
0

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ನಲ್ಲಿ SIR-2026,...

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

by Shwetha
August 25, 2026
0

ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಡಳಿತ ವೈಖರಿ ಮತ್ತು ನಡವಳಿಕೆ ವಿರುದ್ಧ ಮಾಜಿ ಸಚಿವ ಹಾಗೂ ಹಾಸನ ಶಾಸಕ ಹೆಚ್.ಡಿ. ರೇವಣ್ಣ ಅವರು ಯುದ್ಧ ಸಾರಿದ್ದಾರೆ....

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮದ ನಡುವೆ ದೇಶವಿರೋಧಿ ಕೃತ್ಯ: ಟಿಪ್ಪು ಕಟೌಟ್ ಮುಂದೆ ಪಾಕಿಸ್ತಾನಿ ಹಾಡು ಬಳಸಿ ರೀಲ್ಸ್ ಮಾಡಿದ ಯುವಕ ಅರೆಸ್ಟ್.

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮದ ನಡುವೆ ದೇಶವಿರೋಧಿ ಕೃತ್ಯ: ಟಿಪ್ಪು ಕಟೌಟ್ ಮುಂದೆ ಪಾಕಿಸ್ತಾನಿ ಹಾಡು ಬಳಸಿ ರೀಲ್ಸ್ ಮಾಡಿದ ಯುವಕ ಅರೆಸ್ಟ್.

by Shwetha
August 25, 2026
0

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮದ ನಡುವೆಯೇ ಕಿಡಿಗೇಡಿಗಳ ಅತಿರೇಕದ ವರ್ತನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ ಕಟೌಟ್ ಮುಂದೆ ಪಾಕಿಸ್ತಾನಿ...

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

by Shwetha
August 25, 2026
0

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿಸ್ತರಿಸುವುದರ ಜೊತೆಗೆ,...

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

by Shwetha
August 25, 2026
0

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram