ಹಗಲು ರಾತ್ರಿ ತಮ್ಮ ಜೀವವನ್ನ ಪuಕ್ಕಿಟ್ಟು ದೇಶ ಕಾಯುವ ವೀರ ಯೋಧರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ೧೦ ವರ್ಷಗಳಿಗಿಂತ ಕಡಿಮೆ ಅರ್ಹತಾ ಸೇವೆಯನ್ನು ಹೊಂದಿರುವ ಸಶಸ್ತç ಪಡೆಗಳ ಸಿಬ್ಬಂದಿಗೆ ಸರ್ಕಾರದಿಂದ ಅಮಾನ್ಯ ಪಿಂಚಣಿಯನ್ನು ನೀಡಲು ನಿರ್ಧಾರ ಮಾಡಲಾಗಿದೆ. ಅಂದ್ರೆ ಅಂಗವೈಕಲ್ಯದಿAದಾಗಿ ಸೇವೆಯಿಂದ ದೂರ ಉಳಿದಿರುವ ಸಿಬ್ಬಂದಿಗೆ ಈ ಪಿಂಚಣಿಯನ್ನ ಒದಗಿಸಲಾಗುತ್ತೆ. ಇನ್ನೂ ಈ ಹಿಂದೆ ಅಮಾನ್ಯ ಪಿಂಚಣಿ ಪಡೆಯಲು ಕನಿಷ್ಠ ಸೇವಾವಧಿಯ ಅವಶ್ಯಕತೆ ಇತ್ತು. ಆದರೆ ಹೊಸ ನೀತಿ ಅನ್ವಯ ೧೦ ವರ್ಷಗಳಿಗಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿರುವ ಹಾಗೂ ದೈಹಿಕ ಅಥವ ಮಾನಸಿಕ ದೌರ್ಬಲ್ಯತೆಯಿಂದ ಸೇವೆಯಿಂದ ದೂರ ಉಳಿದಿರುವ ಸಶಸ್ತç ಪಡೆಗಳಿಗೆ ಪ್ರಯೋಜನವಾಗಲಿದೆ. ಈ ಕುರಿತು ರಕ್ಷಣಾ ಸಚಿವಾಲಯ ತಿಳಿಸಿದ್ದು, ಈಗಾಗಲೇ ಹೊಸ ನೀತಿಗೆ ರಾಜನಾಥ್ ಸಿಂಗ್ ಅಂಗೀಕಾರ ನೀಡಿದ್ದಾರೆ ಎನ್ನಲಾಗಿದೆ.
ಎಐ ಶಿಕ್ಷಣಕ್ಕೆ ಒತ್ತು ನೀಡಲು ಗೂಗಲ್ ಕ್ಲೌಡ್ ಜೊತೆ ಒಪ್ಪಂದ, ಯುಪಿಇಎಸ್ ಕ್ಯಾಂಪಸ್ನಲ್ಲಿ ಅದ್ದೂರಿ ‘ಜೆಮಿನಿ ಡೇ’ ಆಚರಣೆ
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ...








