ADVERTISEMENT
Thursday, February 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

“ಬ್ರಹ್ಮ” ಪದದ ಉಚ್ಚಾರ ಜಿಜ್ಞಾಸೆಯನ್ನು ಸ್ವತಃ ಬ್ರಹ್ಮನಿಂದಲೂ ಬಗೆಹರಿಸಲಾಗದು..!

admin by admin
February 26, 2026
in Astrology, Newsbeat, ಜ್ಯೋತಿಷ್ಯ
The question of the pronunciation of the word "Brahma" cannot be resolved even by Brahma himself..!

The question of the pronunciation of the word "Brahma" cannot be resolved even by Brahma himself..!

Share on FacebookShare on TwitterShare on WhatsappShare on Telegram

“ಬ್ರಹ್ಮ” ಪದದ ಉಚ್ಚಾರ ಜಿಜ್ಞಾಸೆಯನ್ನು ಸ್ವತಃ ಬ್ರಹ್ಮನಿಂದಲೂ ಬಗೆಹರಿಸಲಾಗದು..!

“ಬರೆದಂತೆಯೇ ಉಚ್ಚರಿಸುವುದು, ಉಚ್ಚರಿಸಿದಂತೆಯೇ ಬರೆಯುವುದು ಸಂಸ್ಕೃತ ಮತ್ತು ಕನ್ನಡ ಭಾಷೆ್ಗಳ ಜಾಯಮಾನ”. ಹೌದು ತಾನೆ? ಅಂದಮೇಲೆ “ಬ್ರಹ್ಮ”ವನ್ನು “ಬ್ರ ಹ್ ಮ” ಎಂದು, “ಜಾಹ್ನವಿ”ಯನ್ನು “ಜಾ ಹ್ ನ ವಿ” ಎಂದು, “ಮಧ್ಯಾಹ್ನ”ವನ್ನು “ಮ ಧ್ಯಾ ಹ್ ನ” ಎಂದು ಉಚ್ಚರಿಸಿದರೆ ತಪ್ಪಂತೂ ಅಲ್ಲವೇ ಅಲ್ಲ. ನಿಜವಾಗಿಯಾದರೆ ಅದೇ ಸೂಕ್ತ.

Related posts

ಉದ್ಯೋಗ ಹೋರಾಟದಿಂದ ಸರ್ಕಾರಕ್ಕೆ ತಲೆನೋವು: ಕ್ಯಾಬಿನೆಟ್‌ನಲ್ಲಿ ಮಹತ್ವದ ಚರ್ಚೆ?

ಉದ್ಯೋಗ ಹೋರಾಟದಿಂದ ಸರ್ಕಾರಕ್ಕೆ ತಲೆನೋವು: ಕ್ಯಾಬಿನೆಟ್‌ನಲ್ಲಿ ಮಹತ್ವದ ಚರ್ಚೆ?

February 26, 2026
ತರಕಾರಿ ಕೊಳ್ಳುವವರಿಗೆ ಭಾರೀ ಶಾಕ್: ಸೀಸ (ಲೆಡ್) ಹಾಗೂ ಕೀಟನಾಶಕ ಅವಶೇಷ ಪತ್ತೆ

ತರಕಾರಿ ಕೊಳ್ಳುವವರಿಗೆ ಭಾರೀ ಶಾಕ್: ಸೀಸ (ಲೆಡ್) ಹಾಗೂ ಕೀಟನಾಶಕ ಅವಶೇಷ ಪತ್ತೆ

February 26, 2026

ಆದರೆ, ಈ ರೀತಿ ಹ್ ಜೊತೆ ಇನ್ನೊಂದು ವ್ಯಂಜನ ಸೇರಿ ಸಂಯುಕ್ತಾಕ್ಷರವಾದಾಗ ಮೊದಲಿಗೆ ಆ ’ಇನ್ನೊಂದು ವ್ಯಂಜನ’ವನ್ನು ಉಚ್ಚರಿಸಿ ಆಮೇಲೆ ಹ್ ವನ್ನು ಉಚ್ಚರಿಸಬಹುದು ಎಂದು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಂಡಿರುವ ಒಂದು ಅನುಕೂಲ ಶಾಸ್ತ್ರ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ವಿಪರ್ಯಾಸವೇನೆಂದರೆ, ಈ ತಥಾಕಥಿತ ಅನುಕೂಲ ಶಾಸ್ತ್ರದಲ್ಲಿ ಏಕರೂಪತೆ ಇಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಪಾದನೆ. ಕೆಲವರು “ಹಿ ನ ಮ ಪರೇ ತತ್ಪರಸ್ಯ ಚ” ಎಂಬ ಒಂದು ಸೂತ್ರವನ್ನು ಪ್ರಸ್ತಾವಿಸಿ, “ಹ್ ಜೊತೆ ಮ್/ನ್ ಇದ್ದರೆ ಮೊದಲಿಗೆ ಮ್/ನ್ ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು” ಎನ್ನುತ್ತಾರೆ. “ಹ್ ಜೊತೆ ಣ್ ಬಂದರೆ- ಉದಾಹರಣೆಗೆ ಅಪರಾಹ್ಣ- ಏನು ಮಾಡಬೇಕು?” ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ! “ಹ್ ಜೊತೆ ಯ್/ರ್/ಲ್/ವ್ ಬಂದರೆ- ಉದಾಹರಣೆಗೆ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿ- ಏನು ಮಾಡಬೇಕು?” ಎಂಬುದಕ್ಕೂ ಅವರ ಬಳಿ ಉತ್ತರವಿಲ್ಲ!

ಇನ್ನು ಕೆಲವರು “ಹ್ ಜೊತೆ ಯಾವುದೇ ಅನುನಾಸಿಕ ಇದ್ದರೆ ಮೊದಲಿಗೆ ಅನುನಾಸಿಕವನ್ನು ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು” ಎನ್ನುತ್ತಾರೆ. ಅವರ ವ್ಯಾಖ್ಯೆಯಲ್ಲಿ ಬ್ರಹ್ಮ, ಜಾಹ್ನವಿ, ಅಪರಾಹ್ಣಗಳು ಒಳಗೊಳ್ಳುತ್ತವಾದರೂ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿಗಳ ಉಚ್ಚಾರಕ್ಕೆ ಅವರ ಬಳಿಯೂ ನಿರ್ದಿಷ್ಟ ಉತ್ತರವಿಲ್ಲ.

ಆದ್ದರಿಂದಲೇ, “ಬರೆದಂತೆಯೇ ಉಚ್ಚರಿಸುವುದು” ಯಾವುದೇ ಗೊಂದಲವಿಲ್ಲದ ಆಯ್ಕೆ. ಬನ್ನಂಜೆ ಗೋವಿಂದಾಚಾರ್ಯರು, ಈಗ ಅವರ ಪುತ್ರಿ ವೀಣಾ ಬನ್ನಂಜೆ ಮುಂತಾದ ಕೆಲವು ವಿದ್ವಾಂಸರು ಇದನ್ನೇ ಆಯ್ದುಕೊಂಡಿದ್ದಾರೆ. ಅವರು “ಬ್ರಹ್ಮ” ಪದವನ್ನು “ಬ್ರ ಹ್ ಮ” ಎಂದೇ ಉಚ್ಚರಿಸುತ್ತಾರೆ, “ಬ್ರ ಮ್ ಹ” ಎಂದು ಅಲ್ಲ.

ಅಷ್ಟಾಗಿ, ‘ಬ್ರಹ್ಮ’ ಪದದ ವ್ಯುತ್ಪತ್ತಿ ಏನು? ಬೃಹ್ + ಮನಿನ್. ‘ಬೃಹ್’ ಆಂದರೆ something that is expanded, or great; ‘ಬೃಹತ್’ ಪದ ಸಹ ಅದೇ ಮೂಲದಿಂದ ಬಂದದ್ದು. ಬೃಹ್ + ಮನಿನ್ ರೀತಿಯಲ್ಲಿ ಬ್ರಹ್ಮ ಪದ ಉಂಟಾದದ್ದು ಅಂದಮೇಲೆ ಆ ದೃಷ್ಟಿಯಿಂದಲೂ ‘ಹ್’ ಉಚ್ಚಾರವೇ ಮೊದಲು. ಬ್ರಮ್ಹ ಎಂದು ಉಚ್ಚರಿಸಿದರೆ ಅಲ್ಲಿ ‘ಬೃಹ್’ ಧಾತುವನ್ನೇ ಕೊಂದಂತಾಗುತ್ತದಲ್ಲ!?

ವಹ್ನಿ ಪದ ಸಹ ಹೀಗೆಯೇ. ವಹ್ + ನಿ. ‘ವಹ್’ ಅಂದರೆ something that carries. ಅಗ್ನಿಯು ದೇವತೆಗಳ ಮತ್ತು ಮನುಷ್ಯರ ನಡುವಿನ ಕೊಡುಕೊಳ್ಳುವಿಕೆಯ ವಾಹಕ. ಆದ್ದರಿಂದ ವಹ್ನಿ ಎಂದು ಹೆಸರು. ಅದನ್ನು ವನ್ಹಿ ಎಂದು ಉಚ್ಚರಿಸಿದರೆ ಅಲ್ಲಿ ‘ವಹ್’ ಧಾತುವಿನಿಂದ ಪಡೆದ ಅರ್ಥವನ್ನೇ ಬೆಂಕಿಗೆ ಹಾಕಿ ನಾಶಮಾಡಿದಂತಾಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಮಧ್ಯಾಹ್ನ, ಅಪರಾಹ್ಣಗಳದೂ ಇದೇ ಕಥೆ. ಮಧ್ಯ + ಅಹ್ + ನ. ‘ಅಹ್’ ಎಂದರೆ ಹಗಲು. ಹಗಲಿನ ಮಧ್ಯಭಾಗವೇ ಮಧ್ಯಾಹ್ನ. ಅದನ್ನು ಮಧ್ಯಾನ್ಹ, ಮಧ್ಯಾನ್ನ, ಮಧ್ಯಾನ, ಮದ್ಯಾನ ಅಂತೆಲ್ಲ ಉಚ್ಚರಿಸಿದರೆ/ಬರೆದರೆ ಹಗಲುದರೋಡೆ (“ಅಹ್ = ಹಗಲು” ಎಂಬ ಅರ್ಥವನ್ನು ದರೋಡೆ ಮಾಡಿದಂತೆ) ಆಗುತ್ತದೆ!

ಇದಾವುದೇ ಗೊಂದಲ ಪಾಪಪ್ರಜ್ಞೆಯೂ ಬೇಡವೆಂದು ಗೀತಾಪರಿವಾರವು “ಬರೆದಂತೆಯೇ ಉಚ್ಚರಿಸುವುದು” ರೀತಿಯನ್ನು ಆಯ್ದುಕೊಂಡಿದೆ. ಗೀತಾಪರಿವಾರದಲ್ಲಿ ನಾವು “ಬ್ರ ಹ್‌ ಮ”, “ಜಾ ಹ್ ನ ವಿ”, “ಮ ಧ್ಯಾ ಹ್ ನ” ಎಂಬಂತೆ ಉಚ್ಚರಿಸುತ್ತೇವೆ.

ಒಟ್ಟಾರೆಯಾಗಿ ಈ ಉಚ್ಚಾರವಿಷಯವನ್ನು ಸರಿ-ತಪ್ಪು ಎಂದು ನಿಷ್ಕರ್ಷೆ ಮಾಡುವುದಕ್ಕಿಂತ “ಎರಡು ವಿಭಿನ್ನ ಚಿಂತನಾ ಶಾಲೆಗಳು” (two different schools of thought) ಎಂದು ಪರಿಗಣಿಸಬಹುದು ಅಷ್ಟೇ.

Tags: #astrology#kannadaastro#kannadadailyastro#karanatakabengalurumangaluru
ShareTweetSendShare
Join us on:

Related Posts

ಉದ್ಯೋಗ ಹೋರಾಟದಿಂದ ಸರ್ಕಾರಕ್ಕೆ ತಲೆನೋವು: ಕ್ಯಾಬಿನೆಟ್‌ನಲ್ಲಿ ಮಹತ್ವದ ಚರ್ಚೆ?

ಉದ್ಯೋಗ ಹೋರಾಟದಿಂದ ಸರ್ಕಾರಕ್ಕೆ ತಲೆನೋವು: ಕ್ಯಾಬಿನೆಟ್‌ನಲ್ಲಿ ಮಹತ್ವದ ಚರ್ಚೆ?

by Shwetha
February 26, 2026
0

ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಕರ ಹೋರಾಟ ತೀವ್ರವಾಗಿದ್ದು, ಇದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದನ್ನು ಖಂಡಿಸಿ ಯುವಕರು ನಡೆಸುತ್ತಿರುವ ಪ್ರತಿಭಟನೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ....

ತರಕಾರಿ ಕೊಳ್ಳುವವರಿಗೆ ಭಾರೀ ಶಾಕ್: ಸೀಸ (ಲೆಡ್) ಹಾಗೂ ಕೀಟನಾಶಕ ಅವಶೇಷ ಪತ್ತೆ

ತರಕಾರಿ ಕೊಳ್ಳುವವರಿಗೆ ಭಾರೀ ಶಾಕ್: ಸೀಸ (ಲೆಡ್) ಹಾಗೂ ಕೀಟನಾಶಕ ಅವಶೇಷ ಪತ್ತೆ

by Shwetha
February 26, 2026
0

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುತ್ತಿರುವ ತರಕಾರಿಗಳ ಗುಣಮಟ್ಟ ಕುರಿತು ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಪರೀಕ್ಷೆಗೆ ಒಳಪಡಿಸಿದ ತರಕಾರಿ ಮಾದರಿಗಳಲ್ಲಿ ವಿಷಕಾರಿ ಅಂಶಗಳಾದ ಸೀಸ (ಲೆಡ್)...

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

by Shwetha
February 26, 2026
0

ಬೆಂಗಳೂರು: ರಾಜ್ಯದ ಸಮಸ್ತ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೈತರು ತಮ್ಮ ಜಮೀನಿನ ಪಹಣಿ ಅಥವಾ ಆರ್‌ಟಿಸಿಯಲ್ಲಿ (RTC) ಹೆಸರು ತಪ್ಪಾಗಿದ್ದರೆ,...

ಪಾಸ್‌ಪೋರ್ಟ್ ಪರಿಶೀಲನೆಗೆ ಹೈಟೆಕ್ ಸ್ಪರ್ಶ ಲಂಚಕ್ಕೆ ಬ್ರೇಕ್ : ಪಾಸ್‌ಪೋರ್ಟ್ ಪರಿಶೀಲನೆ ಹೆಸರಲ್ಲಿ ಕಿರುಕುಳ ನೀಡಿದ್ರೆ ಹುಷಾರ್ ಪೊಲೀಸರಿಗೆ ಕಮಿಷನರ್ ಖಡಕ್ ವಾರ್ನಿಂಗ್

ಪಾಸ್‌ಪೋರ್ಟ್ ಪರಿಶೀಲನೆಗೆ ಹೈಟೆಕ್ ಸ್ಪರ್ಶ ಲಂಚಕ್ಕೆ ಬ್ರೇಕ್ : ಪಾಸ್‌ಪೋರ್ಟ್ ಪರಿಶೀಲನೆ ಹೆಸರಲ್ಲಿ ಕಿರುಕುಳ ನೀಡಿದ್ರೆ ಹುಷಾರ್ ಪೊಲೀಸರಿಗೆ ಕಮಿಷನರ್ ಖಡಕ್ ವಾರ್ನಿಂಗ್

by Shwetha
February 26, 2026
0

ಬೆಂಗಳೂರು: ಪಾಸ್‌ಪೋರ್ಟ್ ಪಡೆಯಲು ಪೊಲೀಸ್ ಪರಿಶೀಲನೆಯ ವೇಳೆ ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆಗಳಿಗೆ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ...

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆ ಒಂದು ಪತ್ರ; ಕೈ ಪಾಳೆಯದಲ್ಲಿ ಹೆಚ್ಚಿದ ಢವಢವ

ವಾರದೊಳಗೆ ಸಿಎಂ ಗೊಂದಲಕ್ಕೆ ತೆರೆ ಎಳೆಯಿರಿ: ಹೈಕಮಾಂಡ್‌ಗೆ ಕೈ ಶಾಸಕನ ಎಚ್ಚರಿಕೆ

by Shwetha
February 26, 2026
0

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತ ಗೊಂದಲ ಮತ್ತಷ್ಟು ತೀವ್ರಗೊಂಡಿದೆ. ವಾರದೊಳಗೆ ಮುಖ್ಯಮಂತ್ರಿಯ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಅಥವಾ ಈ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram