ADVERTISEMENT
Sunday, June 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ಹೊಸ ನಾಯಕ ಸೂರ್ಯಕುಮಾರ್ ಯಾದವ್ ಗೆ ಶಾಕ್: ವಂಡರ್ ಕಿಡ್ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಬುಲಾವ್

Shwetha by Shwetha
June 7, 2026
in ಕ್ರಿಕೆಟ್, National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಯುಗವೊಂದು ಆರಂಭವಾಗಿದ್ದು ಟಿ20 ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ನೀಡಿ ಶ್ರೇಯಸ್ ಅಯ್ಯರ್ ಅವರನ್ನು ತಂಡದ ನೂತನ ನಾಯಕನ್ನಾಗಿ ಬಿಸಿಸಿಐ ಘೋಷಿಸಿದೆ. ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸ ಹಾಗೂ ಜಪಾನ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಸರಣಿಗಳಿಗಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಂಬೈನಲ್ಲಿ ನಡೆದ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ಆಯ್ಕೆಯಲ್ಲಿ ಅಚ್ಚರಿ ಎಂಬಂತೆ ತಿಲಕ್ ವರ್ಮ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಅಷ್ಟೇ ಅಲ್ಲದೆ ಜೂನ್ 26 ಮತ್ತು 28 ರಂದು ಐರ್ಲೆಂಡ್ ವಿರುದ್ಧ ಬೆಲ್ಫಾಸ್ಟ್ ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಸರಣಿಯಲ್ಲಿ ತಿಲಕ್ ವರ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಚೆಸ್ಟರ್ ಲೀ ಸ್ಟ್ರೀಟ್ ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಪೂರ್ಣ ಪ್ರಮಾಣದ ನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

Related posts

ತಮಿಳುನಾಡು ರಾಜಕೀಯದಲ್ಲಿ ಸಿಂಗಂ ಆರ್ಭಟ : ಬಿಜೆಪಿ ಬಿಟ್ಟ ಅಣ್ಣಾಮಲೈಗೆ ಅಭಿಮಾನಿಗಳ ಜೈಕಾರ

ತಮಿಳುನಾಡು ರಾಜಕೀಯದಲ್ಲಿ ಸಿಂಗಂ ಆರ್ಭಟ : ಬಿಜೆಪಿ ಬಿಟ್ಟ ಅಣ್ಣಾಮಲೈಗೆ ಅಭಿಮಾನಿಗಳ ಜೈಕಾರ

June 7, 2026
ಜಸ್ಟ್ ಆಸ್ಕಿಂಗ್ ವರ್ಸಸ್ ಜನಸೇನಾ :ಪ್ರಶ್ನೆ ಕೇಳಬೇಡಿ ಎನ್ನಲು ನಾವೇನು ಕುದುರೆಗಳಾ? ಪವನ್ ಕಲ್ಯಾಣ್ ಅಣ್ಣನಿಗೆ ಪ್ರಕಾಶ್ ರೈ ಖಡಕ್ ವಾರ್ನಿಂಗ್.

ಜಸ್ಟ್ ಆಸ್ಕಿಂಗ್ ವರ್ಸಸ್ ಜನಸೇನಾ :ಪ್ರಶ್ನೆ ಕೇಳಬೇಡಿ ಎನ್ನಲು ನಾವೇನು ಕುದುರೆಗಳಾ? ಪವನ್ ಕಲ್ಯಾಣ್ ಅಣ್ಣನಿಗೆ ಪ್ರಕಾಶ್ ರೈ ಖಡಕ್ ವಾರ್ನಿಂಗ್.

June 7, 2026

ಅಚ್ಚರಿಯ ಆಯ್ಕೆ ವೈಭವ್ ಸೂರ್ಯವಂಶಿ

ಈ ತಂಡದ ಪ್ರಕಟಣೆಯಲ್ಲಿ ಎಲ್ಲರ ಗಮನ ಸೆಳೆದಿರುವುದು ಕೇವಲ 15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸೇರ್ಪಡೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ವೈಭವ್ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಗಮನಿಸಿ ಆಯ್ಕೆ ಸಮಿತಿ ಈ ಐತಿಹಾಸಿಕ ಅವಕಾಶ ನೀಡಿದೆ.

ಸೂರ್ಯಕುಮಾರ್ ಯಾದವ್ ಗಿಲ್ಲ ಸ್ಥಾನ

ಕಳೆದ ಮಾರ್ಚ್ ತಿಂಗಳಲ್ಲಿ ಭಾರತ ತಂಡವನ್ನು ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಈ ಮೂರೂ ಸರಣಿಗಳಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ಏಷ್ಯನ್ ಗೇಮ್ಸ್ ಗಾಗಿ ಪ್ರಕಟಿಸಲಾದ ತಂಡದಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮರಳಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದೆ.

ಇಂಗ್ಲೆಂಡ್ ಮತ್ತು ಐರ್ಲೆಂಡ್ ಸರಣಿಗೆ ಆಯ್ಕೆಯಾದ ಭಾರತ ತಂಡ

ಶ್ರೇಯಸ್ ಅಯ್ಯರ್ ನಾಯಕ
ತಿಲಕ್ ವರ್ಮ ಉಪ ನಾಯಕ
ರವಿ ಬಿಷ್ಣೋಯಿ
ಅಭಿಷೇಕ್ ಶರ್ಮ
ನಿತೀಶ್ ಕುಮಾರ್ ರೆಡ್ಡಿ
ಮುಹಮ್ಮದ್ ಸಿರಾಜ್
ಸಂಜು ಸ್ಯಾಮ್ಸನ್
ಅಕ್ಷರ್ ಪಟೇಲ್
ಹರ್ಷಿತ್ ರಾಣಾ
ಇಶಾನ್ ಕಿಶನ್
ವಾಷಿಂಗ್ಟನ್ ಸುಂದರ್
ಅರ್ಶದೀಪ್ ಸಿಂಗ್
ಶಿವಂ ದುಬೆ
ವರುಣ್ ಚಕ್ರವರ್ತಿ
ಪ್ರಿನ್ಸ್ ಯಾದವ್
ವೈಭವ್ ಸೂರ್ಯವಂಶಿ

ಏಷ್ಯನ್ ಗೇಮ್ಸ್ ಸರಣಿಗೆ ಭಾರತ ತಂಡ

ಶ್ರೇಯಸ್ ಅಯ್ಯರ್ ನಾಯಕ
ತಿಲಕ್ ವರ್ಮ ಉಪ ನಾಯಕ
ಜಸ್ಪ್ರೀತ್ ಬುಮ್ರಾ
ರವಿ ಬಿಷ್ಣೋಯಿ
ಅಭಿಷೇಕ್ ಶರ್ಮ
ನಿತೀಶ್ ಕುಮಾರ್ ರೆಡ್ಡಿ
ಸಂಜು ಸ್ಯಾಮ್ಸನ್
ಅಕ್ಷರ್ ಪಟೇಲ್
ಹರ್ಷಿತ್ ರಾಣಾ
ಇಶಾನ್ ಕಿಶನ್
ವಾಷಿಂಗ್ಟನ್ ಸುಂದರ್
ಅರ್ಶದೀಪ್ ಸಿಂಗ್
ಶಿವಂ ದುಬೆ
ವರುಣ್ ಚಕ್ರವರ್ತಿ
ವೈಭವ್ ಸೂರ್ಯವಂಶಿ

ಈ ಹೊಸ ತಂಡವು ಯುವ ಮತ್ತು ಅನುಭವಿ ಆಟಗಾರರ ಸಮ್ಮಿಲನವಾಗಿದ್ದು ಮುಂಬರುವ ಪ್ರಮುಖ ಸರಣಿಗಳಲ್ಲಿ ಟೀಂ ಇಂಡಿಯಾ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಅಡಿಯಲ್ಲಿ ತಂಡ ಹೊಸ ಹಾದಿಯಲ್ಲಿ ಸಾಗಲು ಸಜ್ಜಾಗಿದೆ.

ShareTweetSendShare
Join us on:

Related Posts

ತಮಿಳುನಾಡು ರಾಜಕೀಯದಲ್ಲಿ ಸಿಂಗಂ ಆರ್ಭಟ : ಬಿಜೆಪಿ ಬಿಟ್ಟ ಅಣ್ಣಾಮಲೈಗೆ ಅಭಿಮಾನಿಗಳ ಜೈಕಾರ

ತಮಿಳುನಾಡು ರಾಜಕೀಯದಲ್ಲಿ ಸಿಂಗಂ ಆರ್ಭಟ : ಬಿಜೆಪಿ ಬಿಟ್ಟ ಅಣ್ಣಾಮಲೈಗೆ ಅಭಿಮಾನಿಗಳ ಜೈಕಾರ

by Shwetha
June 7, 2026
0

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ರಾಜಕೀಯ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ತಮಿಳುನಾಡು ಬಿಜೆಪಿಯ ಬಲಿಷ್ಠ ನಾಯಕ ಎಂದೇ ಗುರುತಿಸಿಕೊಂಡಿದ್ದ ಮಾಜಿ...

ಜಸ್ಟ್ ಆಸ್ಕಿಂಗ್ ವರ್ಸಸ್ ಜನಸೇನಾ :ಪ್ರಶ್ನೆ ಕೇಳಬೇಡಿ ಎನ್ನಲು ನಾವೇನು ಕುದುರೆಗಳಾ? ಪವನ್ ಕಲ್ಯಾಣ್ ಅಣ್ಣನಿಗೆ ಪ್ರಕಾಶ್ ರೈ ಖಡಕ್ ವಾರ್ನಿಂಗ್.

ಜಸ್ಟ್ ಆಸ್ಕಿಂಗ್ ವರ್ಸಸ್ ಜನಸೇನಾ :ಪ್ರಶ್ನೆ ಕೇಳಬೇಡಿ ಎನ್ನಲು ನಾವೇನು ಕುದುರೆಗಳಾ? ಪವನ್ ಕಲ್ಯಾಣ್ ಅಣ್ಣನಿಗೆ ಪ್ರಕಾಶ್ ರೈ ಖಡಕ್ ವಾರ್ನಿಂಗ್.

by Shwetha
June 7, 2026
0

ಬಹುಭಾಷಾ ನಟ ಪ್ರಕಾಶ್ ರೈ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನಡುವಿನ ವಾಕ್ಸಮರ ಈಗ ಮತ್ತೊಂದು ಸ್ಫೋಟಕ ಹಂತಕ್ಕೆ ತಲುಪಿದೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ...

ಟ್ರಬಲ್ ಶೂಟರ್ ಡಿಕೆಶಿಗೆ ಸ್ವಪಕ್ಷೀಯರೇ ವಿಲನ್? ಬಿಜೆಪಿ ಮತ್ತು ಜೆಡಿಎಸ್ ಪಾಲಿಗೆ ಶಿವಕುಮಾರ್ ತಂತ್ರಗಳೇ ಸಿಂಹಸ್ವಪ್ನ!

ಟ್ರಬಲ್ ಶೂಟರ್ ಡಿಕೆಶಿಗೆ ಸ್ವಪಕ್ಷೀಯರೇ ವಿಲನ್? ಬಿಜೆಪಿ ಮತ್ತು ಜೆಡಿಎಸ್ ಪಾಲಿಗೆ ಶಿವಕುಮಾರ್ ತಂತ್ರಗಳೇ ಸಿಂಹಸ್ವಪ್ನ!

by Shwetha
June 7, 2026
0

ಕರ್ನಾಟಕ ರಾಜಕಾರಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗುತ್ತಿದೆ. ಟ್ರಬಲ್ ಶೂಟರ್ ಖ್ಯಾತಿಯ ಡಿಕೆಶಿ...

ಇಂದು ಸ್ವಕ್ಷೇತ್ರ ಕನಕಪುರಕ್ಕೆ ಸಿಎಂ ಡಿಕೆಶಿ ಭೇಟಿ; ಭರ್ಜರಿ ರೋಡ್ ಶೋ

ಇಂದು ಸ್ವಕ್ಷೇತ್ರ ಕನಕಪುರಕ್ಕೆ ಸಿಎಂ ಡಿಕೆಶಿ ಭೇಟಿ; ಭರ್ಜರಿ ರೋಡ್ ಶೋ

by Shwetha
June 7, 2026
0

ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸುತ್ತಿರುವ...

ದಿನ ಭವಿಷ್ಯ (25-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (07-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 7, 2026
0

ದಿನ ಭವಿಷ್ಯ : 07-06-2026 ಮೇಷ ರಾಶಿ ಇಂದು ನಿಮಗೆ ಅತ್ಯುತ್ಸಾಹದ ದಿನ. ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ಮೇಲಧಿಕಾರಿಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram