ADVERTISEMENT
Monday, July 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Bengaluru: ಶಿಕ್ಷಕರ ಪ್ರಗತಿಗೆ ನಾಂದಿ ಹಾಡಿದ ಕ್ಯಾಟಲಿಸ್ಟ್ ಸರ್ಕಲ್: ಪರಮ್ ಫೌಂಡೇಶನ್-ಕಾರ್ನೆಗೀ ಜಂಟಿ ಯಶಸ್ವಿ

admin by admin
July 13, 2026
in Newsbeat, State, ಬೆಂಗಳೂರು, ರಾಜ್ಯ
parama foundation

parama foundation

Share on FacebookShare on TwitterShare on WhatsappShare on Telegram

• ಕಾರ್ನೆಗೀ-ಪರಮ್ ಫೌಂಡೇಶನ್ ಜಂಟಿ ಯಶಸ್ಸು

• ವರ್ಷಪೂರ್ತಿ ನಡೆದ ಭವಿಷ್ಯದ ಶಿಕ್ಷಣ ತರಬೇತಿ

Related posts

Bengaluru : ಹಸಿರಿಗೆ ಹಾಯ್, ಪ್ಲಾಸ್ಟಿಕ್‌ಗೆ ಗುಡ್‌ ಬೈ,: ಬೆಂಗಳೂರಿನಲ್ಲಿ ಮೊದಲ ಕ್ಲೈಮೇಟ್ ಆಕ್ಷನ್ ವಾಕ್ & ರನ್ 🏃‍♂️🌱

Bengaluru : ಹಸಿರಿಗೆ ಹಾಯ್, ಪ್ಲಾಸ್ಟಿಕ್‌ಗೆ ಗುಡ್‌ ಬೈ,: ಬೆಂಗಳೂರಿನಲ್ಲಿ ಮೊದಲ ಕ್ಲೈಮೇಟ್ ಆಕ್ಷನ್ ವಾಕ್ & ರನ್ 🏃‍♂️🌱

July 13, 2026
fifa world cup trophy

fifa world cup 2026- ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್‍ಬಾಲ್ ಕ್ರೀಡೆಯ ಲೀಲೆ..! ⚽🔥

July 13, 2026

• ತರಬೇತಿ ಪೂರೈಸಿದ 49 ನವೋದ್ಯಮಿ ಶಿಕ್ಷಕರು

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಬೋಧನಾ ಪದ್ಧತಿಯನ್ನು ಮೀರಿ, ಪ್ರಾಯೋಗಿಕ ಹಾಗೂ ಭವಿಷ್ಯದ ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪರಮ್ ಫೌಂಡೇಶನ್ (Param Foundation) ಹಾಗೂ ಅಮೆರಿಕದ ಪ್ರತಿಷ್ಠಿತ ಕಾರ್ನೆಗೀ ಸೈನ್ಸ್ ಸೆಂಟರ್ (Carnegie Science Center, USA) ಜಂಟಿಯಾಗಿ ಆಯೋಜಿಸಿದ್ದ ವರ್ಷದ ಅವಧಿಯ ‘ಕ್ಯಾಟಲಿಸ್ಟ್ ಸರ್ಕಲ್’ ಶಿಕ್ಷಕರ ಪ್ರಗತಿ ತರಬೇತಿ ಅಭಿಯಾನವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಬೆಂಗಳೂರಿನ ವಿಬ್‌ಗ್ಯಾರ್ ಸಮೂಹ ಸಂಸ್ಥೆಗಳ 9 ಶಾಲೆಗಳ ಒಟ್ಟು 49 ಶಿಕ್ಷಕರು ಈ ಮೊದಲ ಬ್ಯಾಚ್‌ನ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಮಹತ್ವದ ಪ್ರಯಾಣದ ಸಮಾರೋಪದ ಅಂಗವಾಗಿ ವಿಬ್‌ಗ್ಯಾರ್ ಶಾಲೆಯ ಆವರಣದಲ್ಲಿ ಭವ್ಯ ‘ಅಂತಿಮ ಪ್ರದರ್ಶನ ಮತ್ತು ಸಮಾರೋಪ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತರಬೇತಿಯಲ್ಲೇನಿತ್ತು?

12 ತಿಂಗಳುಗಳ ಕಾಲ ನಡೆದ ಈ ಸುದೀರ್ಘ ಶೈಕ್ಷಣಿಕ ಅಭಿಯಾನದಲ್ಲಿ ಶಿಕ್ಷಕರು 40ಕ್ಕೂ ಹೆಚ್ಚು ಗಂಟೆಗಳ ವ್ಯವಸ್ಥಿತ ತರಬೇತಿಯಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಅಮೆರಿಕದ ಕಾರ್ನೆಗೀ ಸಂಸ್ಥೆಯ ತಜ್ಞರು ನಡೆಸಿಕೊಟ್ಟ 3 ವಿಶೇಷ ಎಸ್‌ಟಿಇಎಂ (STEM) ಕಾರ್ಯಾಗಾರಗಳು, ಪರಮ್ ಸಂಸ್ಥೆಯ 3 ಪ್ರಾಯೋಗಿಕ ಕಲಿಕಾ ಅವಧಿಗಳು, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅಳವಡಿಕೆ ಮತ್ತು ವಿಶ್ಲೇಷಣಾ ಮಾಡ್ಯೂಲ್‌ಗಳು ಒಳಗೊಂಡಿದ್ದವು. ತರಬೇತಿಯ ಭಾಗವಾಗಿ ಶಿಕ್ಷಕರು ‘ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ಗೆ ಭೇಟಿ ನೀಡಿ ಪ್ರಾಯೋಗಿಕ ಅನುಭವ ಪಡೆದರು. ಇದರೊಂದಿಗೆ ಹೊಸ ಆವಿಷ್ಕಾರಗಳಿಗೆ ಮುಕ್ತ ಅವಕಾಶ ನೀಡುವ ಮೇಕರ್‌ಸ್ಪೇಸ್‌ಗಳ ಬಳಕೆ ಮತ್ತು ವರ್ಷಪೂರ್ತಿ ತಜ್ಞರ ನಿರಂತರ ಮಾರ್ಗದರ್ಶನವೂ ಅವರಿಗೆ ಲಭ್ಯವಾಗಿತ್ತು. ಹೀಗಾಗಿ ಇಲ್ಲಿ ಶಿಕ್ಷಕರು “ತಾವು ಏನನ್ನು ಬೋಧಿಸಬೇಕು?” ಎಂಬ ಪ್ರಶ್ನೆಯಿಂದ ಹಿಡಿದು “ಕಲಿಕೆಯನ್ನು ಹೇಗೆ ಬದಲಾಯಿಸಿಕೊಳ್ಳಬೇಕು?” ಎಂಬ ಪ್ರಶ್ನೆಯ ಕಡೆಗೆ ಬದಲಾಯಿಸುತ್ತದೆ.

ಸಮಾರೋಪದ ಆಕರ್ಷಕ ಪ್ರದರ್ಶನ:

ಈ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು ಕೇವಲ ಸಿದ್ದ ಮಾದರಿಗಳನ್ನಷ್ಟೇ ಪ್ರದರ್ಶಿಸದೆ, ವರ್ಷಪೂರ್ತಿ ತಾವು ಕಲಿತ ವಿಷಯಗಳು ತಮ್ಮ ಬೋಧನಾ ಶೈಲಿ ಮತ್ತು ಆಲೋಚನಾ ಕ್ರಮವನ್ನು ಹೇಗೆ ಧನಾತ್ಮಕವಾಗಿ ಬದಲಾಯಿಸಿವೆ ಎಂಬುದನ್ನು ಹೆಮ್ಮೆಯಿಂದ ಹಂಚಿಕೊಂಡರು. ತಾವು ರೂಪಿಸಿದ ವಿವಿಧ ವಿಷಯಗಳನ್ನೊಳಗೊಂಡ ನೂತನ ಶೈಕ್ಷಣಿಕ ಮಾದರಿಗಳು (Lesson Prototypes) ಮತ್ತು ಪ್ರಾಯೋಗಿಕ ಕಲಿಕಾ ವಿಧಾನಗಳನ್ನು ಶಾಲಾ ನಾಯಕತ್ವ, ಕಾರ್ನೆಗೀ ಸೈನ್ಸ್ ಸೆಂಟರ್‌ನ ಪ್ರತಿನಿಧಿಗಳು ಹಾಗೂ ಆಹ್ವಾನಿತ ತೀರ್ಪುಗಾರರ ಸಮ್ಮುಖದಲ್ಲಿ ಪ್ರಸ್ತುತಪಡಿಸಿದರು. ಈ ಪ್ರದರ್ಶನವು ಕೇವಲ ಪರಿಪೂರ್ಣತೆಯ ಮೌಲ್ಯಮಾಪನವಾಗಿರದೆ, ಶಿಕ್ಷಕರ ನಾವೀನ್ಯತೆ, ಸಹಯೋಗ ಮತ್ತು ಶೈಕ್ಷಣಿಕ ಬೆಳವಣಿಗೆಯ ಸಂಭ್ರಮವಾಗಿ ಮೂಡಿಬಂದಿತು.

ನಿರೀಕ್ಷಿತ ಶೈಕ್ಷಣಿಕ ಬದಲಾವಣೆ:

ಈ ತರಬೇತಿಯ ಮುಖ್ಯ ಉದ್ದೇಶ ಕೇವಲ ಪಾಠದ ಯೋಜನೆಗಳನ್ನು ಸುಧಾರಿಸುವುದಾಗಿರದೆ, ಶಿಕ್ಷಕರನ್ನು ಸೃಜನಶೀಲ ನಾವೀನ್ಯಕಾರರನ್ನಾಗಿ (Innovators) ರೂಪಿಸುವುದಾಗಿದೆ. ಈ ಮೂಲಕ ಶಿಕ್ಷಕರು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ತರಗತಿಗಳನ್ನು ಸಿದ್ಧಪಡಿಸುವ, ವಿವಿಧ ವಿಷಯಗಳನ್ನು ಸಂಯೋಜಿಸಿ ಬೋಧಿಸುವ ಮತ್ತು ವಿದ್ಯಾರ್ಥಿಗಳಲ್ಲಿ ಜಿಜ್ಞಾಸೆಯನ್ನು ಮೂಡಿಸುವ ಶಕ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬದಲಾವಣೆಯು ಶಾಲೆಗಳಿಗೆ ಸ್ಪರ್ಧಾತ್ಮಕ ಹೆಜ್ಜೆಯನ್ನು ಒದಗಿಸಲಿದ್ದು, ವಿದ್ಯಾರ್ಥಿಗಳಿಗೆ ಪರಿವರ್ತನಾತ್ಮಕ ಕಲಿಕೆಯ ಅನುಭವವನ್ನು ನೀಡಲಿದೆ.

ಕಾರ್ಯಕ್ರಮದ ಕೊನೆಯಲ್ಲಿ ತೀರ್ಪುಗಾರರ ಸಂವಾದ, ಶೈಕ್ಷಣಿಕ ನಾಯಕರ ಚಿಂತನೆಗಳ ಹಂಚಿಕೆಯ ನಂತರ ತರಬೇತಿ ಪೂರೈಸಿದ ಎಲ್ಲ ಶಿಕ್ಷಕರಿಗೆ ಅಧಿಕೃತ ಪ್ರಮಾಣಪತ್ರಗಳನ್ನು ವಿತರಿಸಿ, ಅವರ ಶ್ರಮ ಮತ್ತು ಬದ್ಧತೆಯನ್ನು ಗೌರವಿಸಲಾಯಿತು. ಮುಂದಿನ ದಿನಗಳಲ್ಲಿ ಈ ವಿಶಿಷ್ಟ ಶೈಕ್ಷಣಿಕ ಸಂಸ್ಕೃತಿಯನ್ನು ಇನ್ನುಳಿದ ಶಾಲಾ ನೆಟ್‌ವರ್ಕ್‌ಗಳಿಗೂ ವಿಸ್ತರಿಸುವ ದೂರದೃಷ್ಟಿಯನ್ನು ಪರಮ್‌ ಫೌಂಡೇಶನ್‌ ಸಂಸ್ಥೆ ಹೊಂದಿದೆ. ತರಬೇತಿ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಛಿಸುವ ಶಿಕ್ಷಕರು membership@paramfoundation.org ಸಂಪರ್ಕಿಸಬಹುದು.

ShareTweetSendShare
Join us on:

Related Posts

Bengaluru : ಹಸಿರಿಗೆ ಹಾಯ್, ಪ್ಲಾಸ್ಟಿಕ್‌ಗೆ ಗುಡ್‌ ಬೈ,: ಬೆಂಗಳೂರಿನಲ್ಲಿ ಮೊದಲ ಕ್ಲೈಮೇಟ್ ಆಕ್ಷನ್ ವಾಕ್ & ರನ್ 🏃‍♂️🌱

Bengaluru : ಹಸಿರಿಗೆ ಹಾಯ್, ಪ್ಲಾಸ್ಟಿಕ್‌ಗೆ ಗುಡ್‌ ಬೈ,: ಬೆಂಗಳೂರಿನಲ್ಲಿ ಮೊದಲ ಕ್ಲೈಮೇಟ್ ಆಕ್ಷನ್ ವಾಕ್ & ರನ್ 🏃‍♂️🌱

by admin
July 13, 2026
0

ಬೆಂಗಳೂರು: ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಜೀವನಶೈಲಿಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರೋತ್ಸವ ಫೋರಂ, ಸುರಕ್ಷಾ ಎನ್ವಿರೋ ಸೊಲ್ಯೂಷನ್ಸ್ ಹಾಗೂ ಕರ್ನಾಟಕ...

fifa world cup trophy

fifa world cup 2026- ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್‍ಬಾಲ್ ಕ್ರೀಡೆಯ ಲೀಲೆ..! ⚽🔥

by admin
July 13, 2026
0

ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್‍ಬಾಲ್ ಕ್ರೀಡೆಯ ಲೀಲೆ..! ⚽🔥 ಫುಟ್‍ಬಾಲ್ ಅಂದ್ರೆ ಬಡವರ ಮಕ್ಕಳ ಆಟ...

ಡಿಕೆಶಿ ಸಿಎಂ ಆಗೋದು 35 ವರ್ಷಗಳ ಹಿಂದೆಯೇ ಫಿಕ್ಸ್ ಆಗಿತ್ತು -ರಾಮ ಅಯೋಧ್ಯೆ ಗೆದ್ದಂತೆ ಡಿಕೆಶಿ ಕರ್ನಾಟಕ ಗೆದ್ದಿದ್ದಾರೆ:ಡಿಕೆ ಶಿವಕುಮಾರ್ 5 ವರ್ಷ ಪೂರ್ಣ ಅವಧಿಗೆ ಸಿಎಂ- ರಾಜಗುರು ದ್ವಾರಕನಾಥ್ ಗುರೂಜಿಯಿಂದ ಸ್ಫೋಟಕ ಭವಿಷ್ಯ

ಡಿಕೆಶಿ ಸಿಎಂ ಆಗೋದು 35 ವರ್ಷಗಳ ಹಿಂದೆಯೇ ಫಿಕ್ಸ್ ಆಗಿತ್ತು -ರಾಮ ಅಯೋಧ್ಯೆ ಗೆದ್ದಂತೆ ಡಿಕೆಶಿ ಕರ್ನಾಟಕ ಗೆದ್ದಿದ್ದಾರೆ:ಡಿಕೆ ಶಿವಕುಮಾರ್ 5 ವರ್ಷ ಪೂರ್ಣ ಅವಧಿಗೆ ಸಿಎಂ- ರಾಜಗುರು ದ್ವಾರಕನಾಥ್ ಗುರೂಜಿಯಿಂದ ಸ್ಫೋಟಕ ಭವಿಷ್ಯ

by Shwetha
July 13, 2026
0

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಅವರ ಆಪ್ತ ಸಲಹೆಗಾರರೂ ಆಗಿರುವ ರಾಜಗುರು ದ್ವಾರಕನಾಥ್ ಗುರೂಜಿ...

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

ಒಪಿಎಸ್ ಕೊಟ್ಟರೆ ಗ್ಯಾರಂಟಿ ತ್ಯಾಗಕ್ಕೆ ಸಿದ್ಧ: ಸಿಎಂ ಡಿಸಿಎಂ ಎದುರು ಸರ್ಕಾರಿ ನೌಕರರ ಬಿಗ್ ಆಫರ್

by Shwetha
July 13, 2026
0

ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಮುಂದೆ ಒಂದು ಅಭೂತಪೂರ್ವ ಮತ್ತು ಮಹತ್ವದ ಪ್ರಸ್ತಾಪವನ್ನು ಇಟ್ಟಿದ್ದಾರೆ. ಒಂದು ವೇಳೆ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಜಾರಿಗೊಳಿಸಿ, ಕೇಂದ್ರ...

ಬೆಂಗಳೂರಿಗರಿಗೆ ಬಸ್ ಬೇಡವೇ ಅಥವಾ ಕಮಿಷನ್ ಸಾಲುತ್ತಿಲ್ಲವೇ? ಬಸ್ಸುಗಳು ಬೇರೆ ರಾಜ್ಯದ ಪಾಲಾದರೆ ಬೆಂಗಳೂರಿಗರು ಕ್ಷಮಿಸಲ್ಲ: ಡಿ.ಕೆ. ಶಿವಕುಮಾರ್ ಗೆ ಜೆಡಿಎಸ್ ವಾರ್ನಿಂಗ್

ಬೆಂಗಳೂರಿಗರಿಗೆ ಬಸ್ ಬೇಡವೇ ಅಥವಾ ಕಮಿಷನ್ ಸಾಲುತ್ತಿಲ್ಲವೇ? ಬಸ್ಸುಗಳು ಬೇರೆ ರಾಜ್ಯದ ಪಾಲಾದರೆ ಬೆಂಗಳೂರಿಗರು ಕ್ಷಮಿಸಲ್ಲ: ಡಿ.ಕೆ. ಶಿವಕುಮಾರ್ ಗೆ ಜೆಡಿಎಸ್ ವಾರ್ನಿಂಗ್

by Shwetha
July 13, 2026
0

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಬೃಹತ್ ಇ-ಬಸ್ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಡ್ಡಗಾಲು ಹಾಕುತ್ತಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram