ಬೆಂಗಳೂರು: ಲಾಕ್ಡೌನ್, ಸೀಲ್ಡೌನ್ ಸೇರಿದಂತೆ ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಏನೆಲ್ಲಾ ಸರ್ಕಸ್ ಮಾಡುತ್ತಿದ್ದರೂ ಹತೋಟಿಗೆ ಸಿಗುತ್ತಿಲ್ಲ.
ಇತ್ತೀಚೆಗೆ ದೆಹಲಿಯಿಂದ ಬಂದಿದ್ದ ಕೇಂದ್ರ ಸರ್ಕಾರದ ತಜ್ಞರ ತಂಡ ರಾಜ್ಯ ಸರ್ಕಾರಕ್ಕೆ ಕೊರೊನಾ ನಿಯಂತ್ರಣಕ್ಕೆ ಟಾರ್ಗೆಟ್ ನೀಡಿತ್ತು. ರಾಜ್ಯದಲ್ಲಿ 1.69ರಷ್ಟಿದ್ದ ಕೊರೊನಾ ಸಾವಿನ ಪ್ರಮಾಣವನ್ನು ಶೇ.1ಕ್ಕೆ ಇಳಿಸುವಂತೆ ಕೇಂದ್ರ ತಂಡ ಬಿಎಸ್ವೈಗೆ ಟಾರ್ಗೆಟ್ ನೀಡಿತ್ತು.
ಕೇಂದ್ರ ತಂಡ ಟಾರ್ಗೆಟ್ ನೀಡಿ 10 ದಿನ ಕಳೆಯುವುದರೊಳಗೆ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುವವರ ಪ್ರಮಾಣ ಶೇ.2.8ಕ್ಕೆ ಜಿಗಿದಿದೆ.
ಈ ಅಂಕಿ ಅಂಶ ಸಿಎಂ ಬಿಎಸ್ವೈ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಮೋದಿ ಟೀಂ ಬಂದು ಹೋದ 10 ದಿನದಲ್ಲೇ ಸಾವಿನ ಪ್ರಮಾಣ ಶೇ.1.69ರಿಂದ ಶೇ.2.8ಕ್ಕೆ ಜಿಗಿದಿದೆ. ರಾಜ್ಯದಲ್ಲಿ ಈಗ ಕೊರೊನಾ ಸೋಂಕು ಹರಡುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ನಿಯಂತ್ರಣಕ್ಕೆ ಸಿಗುವುದು ಅನುಮಾನ ಎನ್ನಲಾಗಿದೆ.
ಹೀಗಾಗಿ ಮೋದಿ ಟೀಂ ಕೊಟ್ಟಿರುವ ಟಾರ್ಗೆಟ್ ರೀಚ್ ಆಗಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಟೀಂ ಮುಂದೆ ಯಾವ ಕ್ರಮಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಂಡೂರು ಟಿಕೆಟ್ ತುಕಾರಂ ಕುಟುಂಬಕ್ಕೆ ಬೇಡ; ಹಲವರಿಂದ ವಿರೋಧ
ಬಳ್ಳಾರಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಇದರಲ್ಲಿ ಸಂಡೂರು ಕ್ಷೇತ್ರ ಕೂಡ ಒಂದು. ಹಲವರು ಈಗಾಗಲೇ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ನಾಯಕರ ಮನವೊಲಿಸುವ ಕಾರ್ಯ...