ತೆಲಂಗಾಣ: ಕೋಳಿಯಿಂದ ಕೊರೊನಾ ವೈರಸ್ ಬರುತ್ತೆ ಎನ್ನುವ ವದಂತಿ ದೇಶದಾದ್ಯಂತ ಹರಡುತ್ತಿವೆ. ಹೀಗಾಗಿ ಜನರು ಚಿಕನ್ ತಿನ್ನಲು ಹಿಂದೇಟು ಹಾಕುತ್ತಿದ್ದು, ಇದು ಕೋಳಿ ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಗಮನಿಸಿದ ತೆಲಂಗಾಣದ ರಾಜಕೀಯ ನಾಯಕರು ವಿಭಿನ್ನ ರೀತಿಯಲ್ಲಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸಚಿವರಾದ ಕೆ.ಟಿ. ರಾಮರಾವ್, ಎಟೆಲ ರಾಜೇಂದ್ರ, ತಲಸನಿ ಶ್ರೀನಿವಾಸ್ ಯಾದವ್ ಮತ್ತು ಇತರರು ಕಾರ್ಯಕ್ರಮವೊಂದರ ವೇದಿಕೆ ಮೇಲೆ ಚಿಕನ್ ಪೀಸ್ ತಿಂದು ಕೋಳಿಯಿಂದ ಕೊರೊನಾ ಹರಡಲ್ಲ ಎಂದು ತಿಳಿಸಿದ್ದಾರೆ.
ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ನಾಗೇಂದ್ರ ದೆಹಲಿ ಪ್ರವಾಸ: ಇಡಿ ಕಣ್ಣು ತಪ್ಪಿಸಿ ಓಡಾಡುತ್ತಿರುವ ನಾಗೇಂದ್ರ ವಿರುದ್ಧ ಅಶೋಕ್ ಕಿಡಿ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಎದುರಿಸುತ್ತಿರುವ ಸಚಿವ ಬಿ ನಾಗೇಂದ್ರ ಅವರು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಗಾಳಿಗೆ ತೂರಿ...








