ಸಂವಿಧಾನ ವಿರೋಧವಾಗಿ ಶಾಸಕರಾದ ಬಸನಗೌಡ ಯತ್ನಾಳ್ ಅವರು ಮಾತಾಡಿಲ್ಲ, ಯತ್ನಾಳ್ ಕಾನೂನು ಚೌಕಟ್ಟಿನ ಒಳಗೆ ಮಾತಾಡಿದ್ದಾರೆ ಎಂದು ತಮ್ಮ ಶಾಸಕರ ಪರ ಡಿಸಿಎಂ ಅಶ್ವಥ್ ನಾರಾಯಣ್ ಬ್ಯಾಟ್ ಮಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಮಾಜಿ ಸ್ವೀಕರ್ ರಮೇಶ್ ಕುಮಾರ್ ವಿರುದ್ಧ ಯತ್ನಾಳ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಸದನದಲ್ಲಿ ಕಾಂಗ್ರೆಸ್ ಹೋರಾಟ ಸಂಬಂಧ ಮಾತನಾಡಿದ ಡಿಸಿಎಂ, 60 ದಿನ ಸದನ ನಡೆಸುವ ಉದ್ದೇಶದಿಂದ ಒಂದು ತಿಂಗಳು ಅಧಿವೇಶನ ನಡೆಸುತ್ತಿದ್ದೇವೆ. ಏನೇ ವಿಚಾರ ಇದ್ದರು ಸದನ ಒಳಗೆ ಚರ್ಚೆ ಆಗಲಿ. ಯತ್ನಾಳ್ ಅವರು ಸಂವಿಧಾನ ವಿರುದ್ದ ಮಾಡಿದ್ರೆ ಸದನದಲ್ಲಿ ಚರ್ಚೆ ಮಾಡಲಿ. ಯತ್ನಾಳ್ ಹೇಳಿಕೆಗೆ ಸುರೇಶ್ ಕುಮಾರ್, ಸೋಮಣ್ಣ ಎಲ್ಲರೂ ಈ ಬಗ್ಗೆ ಮಾತಾಡಿದ್ದಾರೆ ಎಂದು ಯತ್ನಾಳ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.