ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ರಾಜವೈದ್ಯೆ ಪವಿತ್ರ ತುಳಸಿಗಿದೆ ಪ್ರಾಚೀನ ಆಯುರ್ವೇದ ಪದ್ಧತಿಯಲ್ಲಿ ರಾಜಗೌರವ

admin by admin
August 2, 2020
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ರಾಜವೈದ್ಯೆ ಪವಿತ್ರ ತುಳಸಿಗಿದೆ ಪ್ರಾಚೀನ ಆಯುರ್ವೇದ ಪದ್ಧತಿಯಲ್ಲಿ ರಾಜಗೌರವ:

“ನಮಃ ತುಳಸಿ ಕಲ್ಯಾಣಿ, ನಮೋ ವಿಷ್ಣು ಪ್ರಿಯೇ ಶುಭೇ
ನಮೋ ಮೋಕ್ಷ ಪ್ರದಾಯಿನ್ಯೇ ನಮಃ ಸಂಪತ್ ಪ್ರದಾಯಿಕೇ”

Related posts

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

December 15, 2025
ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

December 15, 2025

ಅಂದರೇ ಸಕಲ ಕಲ್ಯಾಣ ಕಾರ್ಯಗಳಿಗೆ ಮಂಗಳ ಸ್ವರೂಪಿಣಿಯಾಗಿರುವ ವಿಷ್ಣುಪ್ರಿಯ ತುಳಸಿ ಮಾತೆಯೇ, ಶುಭಸೂಚಕ ಹಾಗೂ ಮೋಕ್ಷವನ್ನು ಕರುಣಿಸಬಲ್ಲ ಸಂಪತ್ತನ್ನು ಕರುಣಿಸುವ ದೇವಿಯಾದ ತುಳಸಿಯೇ ನಿನಗೆ ನಮಿಸುತ್ತೇವೆ.
ಈ ಸಂಸ್ಕೃತ ಶ್ಲೋಕವನ್ನು ಪಠಿಸಿ ತುಳಸಿಗೆ ನಿತ್ಯವಂದಿಸುವ ಪರಿಪಾಠ ಹಿಂದೂ ಧರ್ಮದಲ್ಲಿದೆ.

ತುಳಸಿಯನ್ನು ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ವಿಷ್ಣುಪ್ರಿಯೆ ಹಾಗೂ ಲಕ್ಷ್ಮಿಯ ಅವತಾರ ಎನ್ನಲಾಗುತ್ತದೆ. ನಿತ್ಯ ತುಳಸಿ ಪೂಜೆ ಮಾಡುವುದರಿಂದ ನಮ್ಮೊಳಗೆ ಧನಾತ್ಮಕ ಚಿಂತನೆ ಮೈಗೂಡುತ್ತದೆ. ನಮ್ಮ ಮನೆಗಳಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಗೃಹ ಪರಿಸರದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ಮನೆಮಾಡುತ್ತದೆ ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕ್ರಮ. ತುಳಸಿ ಗಿಡವಿದ್ದಲ್ಲಿ ಮಾಟ ಮಾರಣದಂತಹ ಕ್ಷುದ್ರವಿದ್ಯೆಗಳು ಫಲಕೊಡುವುದಿಲ್ಲ ಎನ್ನುವ ನಂಬಿಕೆಯೂ ನಮ್ಮಲ್ಲಿದೆ. ಋಣಾತ್ಮಕ ಶಕ್ತಿಗಳ ಚಿಂತನೆಗಳ ಉಚ್ಛಾಟನೆ ಮತ್ತು ಧನಾತ್ಮಕ ಚಿಂತನೆಗಳ ವೃದ್ಧಿಗೆ ತುಳಸಿ ಕಾರಣವಾಗುತ್ತದೆ ಎನ್ನುವುದರಿಂದಲೇ ಸಮಸ್ತ ಕೋಟಿ ಸಸ್ಯ ಸಂಕುಲಗಳಲ್ಲೇ ತುಳಸಿಯನ್ನು ಸರ್ವಶ್ರೇಷ್ಟ ಎಂದು ಭಾವಿಸಲಾಗುತ್ತದೆ.

ತುಳಸಿಗೆ ದೇವರ ಪೂಜೆಯಲ್ಲಿ ಮಾತ್ರವಲ್ಲದೇ ಆಯುರ್ವೇದದಲ್ಲೂ ಅತ್ಯಂತ ಪ್ರಮುಖ ಸ್ಥಾನವಿದೆ. ಈ ತುಳಸಿಯಲ್ಲೂ ನಾಲ್ಕು ಬಗೆಗಳಿವೆ. ಅವುಗಳೆಂದರೆ ರಾಮ ತುಳಸಿ, ಕೃಷ್ಣತುಳಸಿ, ವನತುಳಸಿ ಮತ್ತು ಕರ್ಪೂರ ತುಳಸಿ. ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಅತ್ಯಪೂರ್ವವಾದ ಔಷಧಿಯ ಗುಣಗಳು. ತುಳಸೀ ಚಹಾ ಇಂದು ನಿನ್ನೆ ಕಂಡುಹಿಡಿದಿದ್ದಲ್ಲ. ತುಳಸಿಯನ್ನು ತುಂಬಾ ಹಿಂದಿನಿಂದ ಬಳಸಿಕೊಂಡು ಅತ್ಯುತ್ತಮ ಔಷಧೀಯ ಗುಣದ ಆಹ್ಲಾದಕಾರಿ ಚಹಾ ತಯಾರಿಸುವ ಪದ್ಧತಿ ನಮ್ಮಲ್ಲಿತ್ತು.

ಕರ್ಪೂರ ತುಳಸಿಯ ಎಣ್ಣೆಯನ್ನು ತೆಗೆದು ಅದರಿಂದ ಕೀಟಾಣುಗಳನ್ನು ಹೊಡೆದೋಡಿಸುವಂತಹ ಉತ್ಪನ್ನವನ್ನು ತಯಾರಿಸುತ್ತಾರೆ. ಉಸಿರಾಟದ ಸಮಸ್ಯೆಗಳ ನಿವಾರಣೆಗೆ ರಾಮ ತುಳಸಿ ಪರಿಣಾಮಕಾರಿಯಾಗಿ ಬಳಸಲ್ಪಡುತ್ತದೆ. ರಾಮ ತುಳಸಿಯ ರಸವು ಶೀತ, ಕಫದ ಸಮಸ್ಯೆಯಿಂದ ಮುಕ್ತಿ ದೊರಕಿಸಿಕೊಡುತ್ತದೆ. ಹಾಗೆಯೇ ತುಳಸಿಯ ಎಣ್ಣೆಯನ್ನು ಕಿವಿನೋವಿನ ಸಮಸ್ಯೆಯ ಪರಿಹಾರಕ್ಕೂ ಬಳಸುತ್ತಾರೆ. ಇದರಿಂದ ಮಲೇರಿಯಾವನ್ನೂ ಸಹ ಗುಣಪಡಿಸಬಹುದು. ಅಜೀರ್ಣ, ತಲೆನೋವು, ಹಿಸ್ಟೀರಿಯಾ, ನಿದ್ರಾಹೀನತೆ ಮತ್ತು ಕಾಲರಾ ರೋಗಗಳಿಗೂ ತುಳಸಿ ರಾಮಬಾಣ. ಹೀಗಾಗಿ ಈ ತುಳಸಿಯ ತಾಜಾ ಎಲೆಗಳನ್ನು ನಿತ್ಯವೂ ಲಕ್ಷಾಂತರ ಜನರು ಸೇವಿಸುತ್ತಾರೆ. ತುಳಸಿಯ ಕಾಂಡದಿಂದ ಮಾಡಿದ ಮಣಿಗಳನ್ನೂ ಸಹ ಸರವಾಗಿ ಬಳಸುತ್ತಾರೆ. ತುಳಸಿ ಅತ್ಯಂತ ಪವಿತ್ರ ಎಂಬುದೇ ಇದಕ್ಕೆ ಕಾರಣ.

ಈ ತುಳಸಿಯ ವೈಜ್ಞಾನಿಕ ಹೆಸರು ಒಸಿಮಮ್ ಬೆಸಿಲಿಕಂ. ಇಂಗ್ಲೀಷ್ ನಲ್ಲಿ ಇದಕ್ಕೆ ಬ್ಯಾಸಿಲ್ ಎಂದು ಕರೆಯುತ್ತಾರೆ. ಆಯುರ್ವೇದೀಯ ಗಿಡಮೂಲಿಕೆಯಾಗಿ ಮಾತ್ರವಲ್ಲ, ಇಟಾಲಿಯನ್ ಹಾಗೂ ತೈವಾನ್ ನಂತಹ ಈಶಾನ್ಯ ಏಷಿಯಾ ಭಾಗದ ಪಾಕಶಾಸ್ತ್ರದಲ್ಲಿ ತುಳಸಿ ಅತ್ಯಂತ ಪ್ರಮುಖವಾಗಿ ಬಳಸಲ್ಪಡುವ ಒಂದು ಪದಾರ್ಥ. ವಿಶೇಷವೆಂದರೆ ತುಳಸಿಯ ಜಾತಿಗೆ ಅನುಗುಣವಾಗಿ ಅದರ ಪರಿಮಳವೂ ಸಹ ಬದಲಾಗುತ್ತದೆ. ತುಳಸಿ ಸಸ್ಯಕ್ಕೆ ತಂಪಿನ ವಾತಾವರಣ ಅಗತ್ಯವಿದ್ದಷ್ಟೇ ಉಷ್ಣ ವಾತಾವರಣದ ಅಗತ್ಯವೂ ಸಹ ಇದೆ. ಇದಕ್ಕೆ ನಿಯಮಿತವಾಗಿ ನೀರಿನ ಸಿಂಪಡನೆ ಬೇಕೇಬೇಕು.

ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು

Tags: AyurvedaAyurvedicbengaguluruclimateindiaItaliankarnatakamedicineNortheast AsianOsimum basilicumscientificTaiwan
ShareTweetSendShare
Join us on:

Related Posts

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

by admin
December 15, 2025
0

ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್...

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

ಹೀಗೆ ಶಿವಾಲಯಕ್ಕೆ ಹೋದವರು ಜೀವನದಲ್ಲಿ ಸೋತ ಇತಿಹಾಸವಿಲ್ಲ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಒಮ್ಮೆ ಇದನ್ನು ಪ್ರಯತ್ನಿಸಿ.

by admin
December 15, 2025
0

ಶಿವನ ದೇವಸ್ಥಾನ ಮಾತ್ರವಲ್ಲ, ಯಾವ ದೇವಸ್ಥಾನಕ್ಕೆ ಭೇಟಿ ನೀಡಿದರೂ ನಮ್ಮೊಳಗೆ ಒಂದು ಶಕ್ತಿ ಬರುತ್ತದೆ. ಆ ಧನಾತ್ಮಕ ಶಕ್ತಿಯು ನಮ್ಮ ಜೀವನದಲ್ಲಿ ಕೆಲವು ತಿರುವುಗಳನ್ನು ತರುತ್ತದೆ. ಆದರೆ, ಶಿವನ ದೇವಸ್ಥಾನಕ್ಕೆ...

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

ನವೋದಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ: ಮಗನಿಗೆ ಕಾಪಿ ಮಾಡಿಸಿದ ಶಿಕ್ಷಕನ ವಿರುದ್ಧ ಪೋಷಕರ ದಂಗೆ! ಪರೀಕ್ಷೆ ರದ್ದುಗೊಳಿಸಲು ಆಗ್ರಹ

by Shwetha
December 15, 2025
0

ಹಳಿಯಾಳ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಶಿಕ್ಷಕನೇ, ತನ್ನ ಮಗನ ವ್ಯಾಮೋಹದಲ್ಲಿ ಪರೀಕ್ಷಾ ಅಕ್ರಮಕ್ಕೆ ಇಳಿದು ಸಿಕ್ಕಿಬಿದ್ದಿರುವ ಲಜ್ಜೆಗೆಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ. ಕೇಂದ್ರ...

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

45 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ತಿರುವನಂತಪುರಂನಲ್ಲಿ ಬ್ರೇಕ್ ಬಿಜೆಪಿ ಅಬ್ಬರಕ್ಕೆ ಶಶಿ ತರೂರ್ ಫಿದಾ

by Shwetha
December 15, 2025
0

ತಿರುವನಂತಪುರಂ: ಕೇರಳದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವೊಂದಕ್ಕೆ ಸಾಕ್ಷಿಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ರಾಜಧಾನಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಐತಿಹಾಸಿಕ...

ಹೊಂದಾಣಿಕೆ ಆರೋಪಕ್ಕೆ ಕೆಂಡಾಮಂಡಲ:1 ರೂಪಾಯಿಯೋ ಅಥವಾ 1 ಕೋಟಿಯೋ? ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಫಿಕ್ಸ್ ಎಂದ ವಿಜಯೇಂದ್ರ!

ಹೊಂದಾಣಿಕೆ ಆರೋಪಕ್ಕೆ ಕೆಂಡಾಮಂಡಲ:1 ರೂಪಾಯಿಯೋ ಅಥವಾ 1 ಕೋಟಿಯೋ? ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಫಿಕ್ಸ್ ಎಂದ ವಿಜಯೇಂದ್ರ!

by Shwetha
December 15, 2025
0

ಶಿವಮೊಗ್ಗ: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿರಂತರ ವಾಗ್ದಾಳಿ ಮತ್ತು ಹೊಂದಾಣಿಕೆ ರಾಜಕಾರಣದ ಆರೋಪಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಆಕ್ರೋಶ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram