ಪೈಲಟ್ ದೀಪಕ್ ಸಾಥೆ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದ ಮಹಾನ್ ವ್ಯಕ್ತಿ – ನೀಲಾ ಸಾಥೆ
ನಾಗ್ಪುರ, ಅಗಸ್ಟ್ 9: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಪೈಲಟ್ ದೀಪಕ್ ವಸಂತ್ ಸಾಥೆ ಅವರು ಅಗತ್ಯವಿರುವವರಿಗೆ ಯಾವಾಗಲೂ ಸಹಾಯ ಮಾಡುತ್ತಿದ್ದ ಮಹಾನ್ ವ್ಯಕ್ತಿ ಎಂದು ಅವರ ತಾಯಿ ನೀಲಾ ಸಾಥೆ ಹೇಳಿದರು. ಮಾಜಿ ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದ ದೀಪಕ್, ದುರಂತ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ 18 ಜನರಲ್ಲಿ ಒಬ್ಬರು. ಅವರ ಸಹ ಪೈಲಟ್ ಅಖಿಲೇಶ್ ಕುಮಾರ್ ಕೂಡ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ದೀಪಕ್ ವಸಂತ್ ಸಾಥೆ, ಬದುಕಿದ್ದರೆ ಶನಿವಾರ ಅವರ ತಾಯಿಯ 84ನೇ ಹುಟ್ಟು ಹಬ್ಬವನ್ನು ಆಚರಿಸಬೇಕಿತ್ತು.

ಅವರು ಒಬ್ಬ ಮಹಾನ್ ವ್ಯಕ್ತಿ ಮತ್ತು ಯಾವಾಗಲೂ ಅಗತ್ಯವಿರುವ ಇತರರಿಗೆ ಸಹಾಯ ಮಾಡುವವರಲ್ಲಿ ಮೊದಲಿಗ. ಅವರ ಶಿಕ್ಷಕರು ಇನ್ನೂ ಅವರನ್ನು ಮೆಚ್ಚುತ್ತಾರೆ ಎಂದು ಅವರ ತಾಯಿ ನೀಲಾ ಸಾಥೆ ಕಣ್ಣೀರು ಸುರಿಸುತ್ತಾ ಹೇಳಿದರು.
ಕೇರಳದ ಕೋಝಿಕೋಡ್ ನ ಕರಿಪುರ ವಿಮಾನ ನಿಲ್ದಾಣ ಎಂದೂ ಕರೆಯಲ್ಪಡುವ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯಿಂದ ಜಾರಿ ವಿಮಾನ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 191 ಪ್ರಯಾಣಿಕರಿದ್ದು, 18 ಜನರು ಸಾವನ್ನಪ್ಪಿದ್ದಾರೆ ಮತ್ತು ಬಹಳಷ್ಟು ಜನರು ಗಾಯಗೊಂಡಿದ್ದಾರೆ.

ಏರ್ ಇಂಡಿಯಾಕ್ಕೆ ಸೇರುವ ಮೊದಲು, ಸಾಥೆ 22 ವರ್ಷಗಳ ಕಾಲ ಭಾರತೀಯ ವಾಯುಪಡೆಗೆ ಸೇವೆ ಸಲ್ಲಿಸಿದರು. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದರು ಮತ್ತು 1981 ರಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. 2003 ರಲ್ಲಿ ವಾಯುಸೇನೆಯಿಂದ ಸ್ಕ್ವಾಡ್ರನ್ ನಾಯಕರಾಗಿ ನಿವೃತ್ತರಾದ ಬಳಿಕ ವಾಣಿಜ್ಯ ವಿಮಾನ ಹಾರಾಟಕ್ಕೆ ತೆರಳಿದರು.
ಸಾಥೆ ಒಬ್ಬ ನಿಪುಣ ಫೈಟರ್ ಪೈಲಟ್ ಮತ್ತು ಬೋಯಿಂಗ್ 737 ವಾಣಿಜ್ಯ ವಿಮಾನಗಳನ್ನು ನಿರ್ವಹಿಸುವಲ್ಲಿ ನುರಿತರಾಗಿದ್ದರು. ವರದಿಗಳ ಪ್ರಕಾರ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್ಡಿಎ) 58 ನೇ ಸ್ಥಾನ ಪಡೆದ ಅಧಿಕಾರಿಯಾಗಿದ್ದ ಸಾಥೆ ಮತ್ತು ಹೈದರಾಬಾದ್ನ ವಾಯುಪಡೆಯ ಅಕಾಡೆಮಿಯಲ್ಲಿ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.








