ಮಂಗಳೂರು : ಗಂಟಲಲ್ಲಿ ಚಾಕಲೇಟ್ ಸಿಲುಕಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಮಂಗಳೂರಿನ ಸೋಮೇಶ್ವರದಲ್ಲಿ ನಡೆದಿದೆ. ಉಚ್ಚಿಲ ಗುಡ್ಡ ನಿವಾಸಿ ರಹೀಂ ಎಂಬವರ 8 ವರ್ಷದ ಮಗ ಪೈಝಾನ್ ಮೃತ ಬಾಲಕನಾಗಿದ್ದಾನೆ.
ಚಾಕಲೇಟ್ ತಿನ್ನುವಾಗ ಗಂಟಲಲ್ಲಿ ಸಿಲುಕಿಕೊಂಡಿದ್ದರಿಂದ ಉಸಿರು ತೆಗೆದುಕೊಳ್ಳಲು ಕಷ್ಟವಾಗಿದೆ. ಇದನ್ನು ತಿಳಿದ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಮಾರ್ಗ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲಿ ಮುಟ್ಟಿದೆ.