ಶ್ರೀ ಕೃಷ್ಣ ನಿಗೆ ಸುಲಭವಾಗಿ ತಯಾರಿಸಬಹುದಾದ ನೈವೇದ್ಯಗಳು
ನೈವೇದ್ಯ ಅಥವಾ ಅರ್ಪಣೆ ಇಲ್ಲದೆ ಯಾವುದೇ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. ಇಂದು, ಶ್ರೀ ಕೃಷ್ಣ ಜನ್ಮಾಷ್ಟಮಿ. ಭಕ್ತರು ದಿನವಿಡೀ ಉಪವಾಸದ ಕೃಷ್ಣನ ಜನನದ ಸಮಯದ ಬಳಿಕ ಅಂದರೆ ಮಧ್ಯರಾತ್ರಿ ಬಾಲಕೃಷ್ಣನ ಪೂಜೆ ಮಾಡಿ ನೈವೇದ್ಯ ಅರ್ಪಿಸಿ ತಮ್ಮ ವೃತವನ್ನು ಸಮಾಪ್ತಿಗೊಳಿಸುತ್ತಾರೆ.
ಈ ಶುಭ ಸಂದರ್ಭದಲ್ಲಿ ಬಾಲ ಕೃಷ್ಣನಿಗಾಗಿ ನೀವು ತಯಾರಿಸಬಹುದಾದ ಸುಲಭವಾದ ನೈವೇದ್ಯಗಳನ್ನು ಇಲ್ಲಿ ಕೊಟ್ಟಿದ್ದೇವೆ.

ಪಂಜಿರಿ: ಪಂಜಿರಿ ಸುಲಭವಾದ ಪಾಕವಿಧಾನಗಳಲ್ಲಿ ಒಂದಾಗಿದೆ. ಅನೇಕ ವೈವಿಧ್ಯಮಯ ಪಂಜೀರಗಳಿದ್ದರೂ ಇಲ್ಲಿ, ನಿಮಗಾಗಿ ಧನಿಯಾ ಪಂಜಿರಿ ಪಾಕವಿಧಾನವನ್ನು ಕೊಟ್ಟಿದ್ದೇವೆ. ಈ ಪಾಕವಿಧಾನಕ್ಕೆ ಧಾನಿಯಾ ಅಥವಾ ಕೊತ್ತಂಬರಿ ಪುಡಿ ಮುಖ್ಯವಾಗಿರುತ್ತದೆ. ಇದಲ್ಲದೆ, ಸುವಾಸನೆಗಾಗಿ ನಿಮಗೆ ಪುಡಿ ಸಕ್ಕರೆ, ಮಖಾನಾ, ತುರಿದ ತೆಂಗಿನಕಾಯಿ, ದೇಸಿ ತುಪ್ಪ, ಗೋಡಂಬಿ, ಬಾದಾಮಿ, ಚಿರೋಂಜಿ, ತುಳಸಿ ಎಲೆಗಳು ಮತ್ತು ಏಲಕ್ಕಿ ಬೇಕಾಗುತ್ತದೆ. ಈ ಪಾಕವಿಧಾನ ತುಂಬಾ ಪೌಷ್ಟಿಕವಾಗಿದೆ ಮತ್ತು ಇದು ಜನ್ಮಾಷ್ಟಮಿ ಸಮಯದಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿ ತಿಂಡಿಗಳಲ್ಲಿ ಒಂದಾಗಿದೆ.
ಪಂಚಾಮೃತ: ಪಂಚಾಮೃತ ಎಂದರೆ ಐದು ಪದಾರ್ಥಗಳಿಂದ ಮಾಡಿದ ಪಾಕವಿಧಾನ. ಪಂಚಾಮೃತ ತಯಾರಿಸಲು, ನಿಮಗೆ ಹಾಲು, ಮೊಸರು, ಜೇನುತುಪ್ಪ, ತುಪ್ಪ ಮತ್ತು ಸಕ್ಕರೆ ಬೇಕಾಗುತ್ತದೆ. ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿದರೆ ಪಂಚಾಮೃತ ತಯಾರಾಗುತ್ತದೆ.
ಪಾಯಸ: ಪಾಯಸ ಮಾಡಲು, ನಿಮಗೆ ಸುಮಾರು ಒಂದು ಲೀಟರ್ ಹಸುವಿನ ಹಾಲು, ಸುಮಾರು 50 ಗ್ರಾಂ ಅಕ್ಕಿ ಮತ್ತು 1 ಕಪ್ ಸಕ್ಕರೆ ಅಥವಾ ಬೆಲ್ಲ ಬೇಕು. ಬಾಣಲೆಯಲ್ಲಿ ಹಾಲನ್ನು ಬಿಸಿ ಮಾಡಿ ಅದಕ್ಕೆ ನೆನೆಸಿದ ಅಕ್ಕಿ ಸೇರಿಸಿ. ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿ ಮತ್ತು ಅದನ್ನು ಕಡಿಮೆ ಉರಿಯಲ್ಲಿ ಕುದಿಸಿ. ಇದು ಅರ್ಧದಷ್ಟು ಪ್ರಮಾಣದಲ್ಲಿ ತಿರುಗುವವರೆಗೆ ಬೇಯಿಸಿ. ಬೆಲ್ಲ ಸಂಪೂರ್ಣವಾಗಿ ಕರಗಿದ ನಂತರ ಅದನ್ನು ಬೆಂಕಿಯಿಂದ ಕೆಳಗೆ ಇಳಿಸಿ.
ಹಣ್ಣು ಪಂಚಾಮೃತ ಪಾಕವಿಧಾನ: ಈ ಪಾಕವಿಧಾನಕ್ಕಾಗಿ, ನಿಮಗೆ ಕತ್ತರಿಸಿದ ಬಾಳೆಹಣ್ಣು, ಸೇಬು ಅಥವಾ ಪಿಯರ್, ಒಣದ್ರಾಕ್ಷಿ / ಗೋಡಂಬಿ, ತುಪ್ಪ ಮತ್ತು ಜೇನುತುಪ್ಪ ಬೇಕಾಗುತ್ತದೆ. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ ಶ್ರೀ ಕೃಷ್ಣನಿಗೆ ಅರ್ಪಿಸಿ.
ಮಖಾನ್ ( ಬೆಣ್ಣೆ): ಬೆಣ್ಣೆಯನ್ನು ನೀವು ಮನೆಯಲ್ಲಿರುವ ಮಜ್ಜಿಗೆಯನ್ನು ಮಥಿಸಿ ಪಡೆಯಬಹುದು.. ಕೆಲವು ತುಳಸಿ ಎಲೆಗಳೊಂದಿಗೆ ಮಖಾನ್ ತುಂಬಿದ ಬಟ್ಟಲನ್ನು ಕೃಷ್ಣನಿಗೆ ಅರ್ಪಿಸಿ.








