ADVERTISEMENT
Monday, April 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪುರಾಣ ಪ್ರಸಿದ್ಧ ಕಂಭುಜ ದೇಶವೆಂಬ ಕಾಂಬೋಡೊಯಾದಲ್ಲೊಂದು ವಿಷ್ಣುಲೋಕ ಆಂಕೋರ್ ವಾಟ್ ದೇವಾಲಯ:

admin by admin
August 14, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪುರಾಣ ಪ್ರಸಿದ್ಧ ಕಂಭುಜ ದೇಶವೆಂಬ ಕಾಂಬೋಡೊಯಾದಲ್ಲೊಂದು ವಿಷ್ಣುಲೋಕ ಆಂಕೋರ್ ವಾಟ್ ದೇವಾಲಯ:

ಹಿಂದೂಧರ್ಮವು ಭಾರತದಾಚೆಗೂ ಸಹ ಹರಡಿದ ವಿಶಾಲ ಧರ್ಮ. ಇದರ ಕುರುಹುಗಳು ಭಾರತದಿಂದ ಸಹಸ್ರಾರು ಮೈಲುಗಳಾಚೆಗೂ ಸಹ ಪಸರಿಸಿವೆ. ಅಂತಹ ರೋಚಕ ಹಾಗೂ ಕೌತುಕಭರಿತ ಕುರುಹುಗಳಲ್ಲಿ ಈಗಿನ ಕಾಂಬೋಡಿಯಾ ದೇಶದ ಆಂಕೋರ್ ವಾಟ್ ನ ಬೃಹತ್ ಹಿಂದೂ ದೇವಾಲಯ ಸಹ ಒಂದು. ಈ ದೇವಾಲಯ ಭಾರತದಾಚೆಗೂ ಇರುವ ಅತಿ ಪುರಾತನವಾದ ಹಿಂದೂ ದೇವಾಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹಲವು ಸಂಗತಿಗಳಲ್ಲಿ ವಿಶೇಷವೆನ್ನಿಸಿದ ಈ ಪ್ರಾಚೀನ ದೇಗುಲದ ಕುರಿತಾದ ಒಂದಷ್ಟು ಸ್ವಾರಸ್ಯಕರ ವಿವರಗಳನ್ನ ತಿಳಿಯೋಣ ಬನ್ನಿ.

Related posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

April 6, 2026
ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

April 6, 2026

ಇದು ಇರುವುದು ಈಗಿನ ಕಾಂಬೋಡಿಯಾದ ಸಯಾಮ್ ರೀಪ್ ಎಂಬ ನಗರದಲ್ಲಿ. ಅದರ ಉತ್ತರಕ್ಕಿರುವ ಮೌಂಟ್ ಮೇರು ಅಥವಾ ಸುಮೇರು ಪರ್ವತಕ್ಕೆ ಅಭಿಮುಖವಾಗಿ ನಿಂತಿರುವ ಈ ದೇಗುಲ ಸುಮಾರು 250 ಮೀಟರ್ ನಷ್ಟು ಉದ್ದ ಇರುವ ಎತ್ತರದ ಸ್ಮಾರಕ. ಅಂದಿನ ಕಾಂಬೋಡಿಯಾವನ್ನ ಕಾಂಭುಜ ಅಥವಾ ಕಂಭುಜ ದೇಶ ಎಂದು ಕರೆಯಲಾಗುತ್ತಿತ್ತು. ಹಾಗೂ ಇದು ನಮ್ಮ‌ ಮಹಾಭಾರತದಲ್ಲಿ ಬರುವ 56 ದೇಶ ಅಥವಾ ಪ್ರಾಂತ್ಯಗಳಲ್ಲಿ ಒಂದಾಗಿತ್ತು ಎಂಬುದು ಇತ್ತೀಚಿನ ಅಧ್ಯಯನಗಳಿಂದ ಸಾಬೀತಾಗಿದೆ. ಇಲ್ಲಿಯವರೆಗೂ ಹಬ್ಬಿದ್ದ ಭಾರತದ ಸಂಸ್ಕೃತಿಯು ಈ ಪ್ರಾಂತ್ಯಗಳಲ್ಲೆಲ್ಲಾ ಹಿಂದೂ ಧರ್ಮದ ಆಚರಣೆಗಳ ಪರಿಚಯಕ್ಕೆ ನಾಂದಿ ಹಾಡಿತ್ತು.

ಖ್ಮರ್ ಸಾಮ್ರಾಜ್ಯದ ಹಿಂದೂ ಅರಸನಾಗಿದ್ದ ಎರಡನೇ ಸೂರ್ಯವರ್ಮನ್ ಎಂಬುವವನಿಂದ ಕ್ರಿ ಶ 1113 ರಲ್ಲಿ ಪ್ರಾರಂಭವಾದ ಈ ಆಂಕೋರ್ ವಾಟ್ ನ ದೇವಾಲಯದ ನಿರ್ಮಾಣ ಕಾರ್ಯ ಕ್ರಿ ಶ 1150 ರ ಹೊತ್ತಿಗೆ ಪೂರ್ಣಗೊಂಡಿತು. ಈ ಅರಸರು ಮೂಲತಃ ಹಿಂದೂಗಳಾಗಿದ್ದು ಇವರು ವಿಷ್ಣುವಿನ‌ ಆರಾಧಕರಾಗಿದ್ದರು. ಹೀಗಾಗಿ ಈ ಆಂಕೋರ್ ವಾಟ್ ನ ದೇವಸ್ಥಾನವು ಮೊದಲು ವಿಷ್ಣುವಿನ ಪೂಜಾಸ್ಥಳವಾಗಿತ್ತು. ಆಂಕೋರ್ ವಾಟ್ ಎಂದರೆ ಖ್ಮರ್ ಭಾಷೆಯಲ್ಲಿ ದೇವಾಲಯಗಳ ನಗರ ಎಂದರ್ಥ. ಕ್ರಿ ಶ 15 ನೇ ಶತಮಾನದವರೆಗೂ ಈ ಸ್ಥಳಕ್ಕೆ ವಿಷ್ಣುಲೋಕ ಎಂದೇ ಕರೆಯುತ್ತಿದ್ದರು. ಆದರೆ 12 ನೇ ಶತಮಾನದ ಬೌದ್ಧ ಧರ್ಮೀಯರ ಅತಿಕ್ರಮಣದಿಂದಲು ಹಾಗೂ ಹಿಂದೂ ಧರ್ಮದ ಪ್ರಾಬಲ್ಯ‌ದ ಕುಸಿತದಿಂದಲೂ‌ ಈ ವಿಷ್ಣು ಮಂದಿರ ಬೌದ್ಧ ಬಸದಿಯಾಗಿ ಬದಲಾಗಿ ಇದರ ಹೆಸರು ಅಲ್ಲಿನ‌ ಖ್ಮರ್ ಭಾಷೆಯಲ್ಲಿ ಆಂಕೋರ್ ವಾಟ್ ಆಯಿತು.

ಇದು ಕ್ರಿ.ಶ ಹನ್ನೆರಡನೇ ಶತಮಾನದ ಪ್ರಾರಂಭದಲ್ಲಿ ಎರಡನೇ ಸೂರ್ಯವರ್ಮನ್ ನಿಂದ ಶುರುವಾಗಿ ಅದೇ ವಂಶದ ಏಳನೇ ಜಯವರ್ಮನ್ ಎಂಬ ಅರಸನಿಂದ ಪೂರ್ಣವಾಯ್ತು. ಈ ಬೃಹತ್ ಪಂಚ ಗೋಪುರವುಳ್ಳ ದೇವಾಲಯಗಳನ್ನ ಪೂರ್ಣಗೊಳಿಸಲು ಖ್ಮರ್ ಅರಸರಿಗೆ ಮೂರು ದಶಕಗಳೆ ತಗುಲಿದವು. ಜಯವರ್ಮನ್ ಕಾಲಕ್ಕಾಗಲೇ ಈ ಖ್ಮರ್ ಸಾಮ್ರಾಜ್ಯವು ಇದರ ಕಟ್ಟಾ ವಿರೋಧಿಗಳಾದ ಚೀನಾದ ಚಾಮ್ ಮನೆತನದವರ ವಶಕ್ಕೊಳಪಟ್ಟಿತು. ಹನ್ನೆರಡನೇ ಶತಮಾನದ ಕೊನೆಯ ವೇಳೆಗಾಗಲೇ ಇದು ಅಲ್ಲಿನ ಬೌದ್ಧ ಮತದ ಪ್ರಾರ್ಥನಾ ಮಂದಿರವಾಗಿ ಬದಲಾಗಿತ್ತು.

ಇದು ಕಾಂಬೋಡಿಯಾ ದೇಶದ ಪ್ರಾತಃಸ್ಮರಣೀಯ ಕೇಂದ್ರವಾಗಿದ್ದರೂ ಸಹ ಚಾಮ್ ಮನೆತನದವರ ಆಕ್ರಮಣದ ಬಳಿಕ ವ್ಯಾಪಕವಾಗಿ ಕಡೆಗಣಿಸಲ್ಪಟ್ಟ ಸ್ಮಾರಕ ಎನಿಸಿಕೊಂಡಿತು. ಆಂಕೋರ್ ವಾಟ್ ಗೆ ಭೇಟಿಯಿತ್ತ ಮೊಟ್ಟ ಮೊದಲ ಪಾಶ್ಚಿಮಾತ್ಯ ಯಾತ್ರಿಕನೆಂದರೆ ಪೋರ್ಚುಗಲ್ ನ ಆಂಟೋನಿಯೊ ಡ ಮಾಡಲೇನ ಎಂಬಾತ. ಈತ ಇಲ್ಲಿಗೆ ಇಸವಿ 1586 ರಲ್ಲಿ ಭೇಟಿ ಕೊಟ್ಟು ಇದರ ವೈಭವ ಹಾಗೂ ವೈಶಾಲ್ಯತೆಯ ಬಗ್ಗೆ ಹೀಗೆ ಹೇಳಿದ್ದಾನೆ.

‘ಈ ಸ್ಮಾರಕವು ನಾನಿದುವರೆಗೂ ಎಲ್ಲಿಯೂ ನೋಡಿರದ ಒಂದು ಅದ್ಭುತವಾದ ಮಾಯಾ ಲೋಕ. ಇದರ ಸೌಂದರ್ಯವನ್ನ ವರ್ಣಿಸಲು ಪದಗಳೆ ಇಲ್ಲ. ಇದು ಐದಾರು ಎತ್ತರದ ಗೋಪುರಗಳ ಒಂದು ದಿವ್ಯ ಮಂದಿರ. ವಿಶ್ವದಲ್ಲಿಯೇ ಇಂಥ ಇನ್ನೊಂದು ಸ್ಮಾರಕ ಇರಲು ಸಾಧ್ಯವಿಲ್ಲ. ಇದರ ಸುಂದರ ಕೆತ್ತನೆ, ಶೃಂಗಾರ ಹಾಗೂ ಅಮೋಘವಾದ ಶಿಲ್ಪಕಲೆ ಇದು ದೇವಲೋಕದ ಶಿಲ್ಪಿಗಳಿಂದಲೇ ನಿರ್ಮಾಣವಾಯ್ತೇನೊ ಎಂಬ ಭ್ರಮೆ ಹುಟ್ಟಿಸುತ್ತವೆ.
17 ಹಾಗೂ 18ನೇ ಶತಮಾನಗಳಲ್ಲಿ ಆಗೀಗ ಜಪಾನೀ ಹಾಗೂ ವಿಶ್ವದ ಇತರೆ ಯಾತ್ರಿಕರ ಕಣ್ಣಿಗಿದು ಬಿದ್ದರೂ ಸಹ ತೆರೆಮರೆಯಲ್ಲೇ ಉಳಿಯಿತು. ಆದರೆ 1860 ರಲ್ಲಿ ಹೆನ್ರಿ ಮೌಹಟ್ ಎಂಬ ಫ್ರೆಂಚ್ ಪರಿಸರವಾದಿ ಹಾಗೂ ಪ್ರವಾಸಿಯಿಂದ ಈ ಲೋಕ ವಿಖ್ಯಾತ ಆಂಕೋರ್ ವಾಟ್ ಮತ್ತೊಮ್ಮೆ ಅತ್ಯಂತ ಯಶಸ್ವಿಯಾಗಿ ಪುನರ್ ಜೀವ ಪಡೆಯಿತೆನ್ನಬಹುದು. ಈತ ಈ ಅತ್ಯದ್ಭುತವಾದ ದೇವಾಲಯವನ್ನ ಗುರುತಿಸಿ ಇದರ ಬಗ್ಗೆ ಪಾಶ್ಚಿಮಾತ್ಯ ಜಗತ್ತಿಗೆ ತನ್ನ ಪ್ರವಾಸ ಕಥನಗಳ ಮೂಲಕ ಸ್ಪಷ್ಟವಾಗಿ ಜಾಹೀರು ಮಾಡಿದ.

‘ನಾವೆಲ್ಲಾ ರಿನೈಸನ್ಸ್ ಸುಧಾರಣೆಯಲ್ಲಿ ತಲೆಯೆತ್ತಿದ ಗ್ರೀಕ್ ಹಾಗೂ ರೋಮನ್ ಶಿಲ್ಪಗಳನ್ನ ಹಾಗೂ ಮೈಕೆಲಾಂಜೆಲೊ ಎಂಬ ಶಿಲ್ಪಿಗಳ ಸಾಧನೆಯನ್ನಷ್ಟೇ ನೋಡಿದ್ದೆವು. ಆದರೆ ಕಾಂಬೋಡಿಯಾದ ಈ ಆಂಕೋರ್ ವಾಟ್ ಅವುಗಳನ್ನು ಸಹ ಮೀರಿಸುತ್ತದೆ. ಆದರೆ ದುಷ್ಟ ಅತಿಕ್ರಮಣದಿಂದ ಘಾಸಿಗೊಳಗಾದ ಈ ದೇಗುಲದ ಸೌಂದರ್ಯದ ನಾಶವು ಅತ್ಯಂತ ವಿಷಾದಕರ ಸಂಗತಿ.’ ಎಂದು ಹೆನ್ರಿ ಅಭಿಪ್ರಾಯ ಪಟ್ಟಿದ್ದಾನೆ. ಈ ದೇವಾಲಯವು ಒಟ್ಟು ಇನ್ನೂರು ಹೆಕ್ಟೇರ್ ಗಳನ್ನ ಆಕ್ರಮಿಸಿದ ಬೃಹತ್ ಪೂಜಾ ಕೇಂದ್ರ. ಈ ದೇವಾಲಯದ ಭವ್ಯ ಕೆತ್ತನೆ ಇಂದಿನ ಹಲವು ಪ್ರಾಚ್ಯ ತಜ್ಞರನ್ನ ದಂಗು ಪಡಿಸಿದೆ. ಸುಮಾರು 3 ಸಾವಿರ ಆನೆಗಳು ಹಾಗೂ 5 ಲಕ್ಷ ಸೇವಾನಿರತ ಶಿಲ್ಪಿಗಳು ಹಾಗೂ ಇತರೆ ಶ್ರಮಿಕ ವರ್ಗದ ಸಹಾಯದಿಂದ ಈ ದೇವಾಲಯದ ಕಾರ್ಯ ನೆರವೇರಿದೆ ಎಂದು ಅಂದಾಜಿಸಲಾಗಿದೆ.

ಈ ದೇವಾಲಯ ಈಗ ಹಲವಾರು ಬೌದ್ಧ ಭಿಕ್ಖುಗಳ ಬಸದಿಯಾಗಿದ್ದರೂ ಸಹ ಇಲ್ಲಿನ ಸಾಕಷ್ಟು ಕೆತ್ತನೆಗಳು ಹಾಗೂ ವಿಗ್ರಹಗಳು ನಮ್ಮ ಹಿಂದೂ ಮೂರ್ತಿಗಳನ್ನ ಹಾಗೂ ಹಿಂದೂ ಪುರಾಣದ ನಾನಾ ಕತೆಗಳನ್ನೇ ಬಿಂಬಿಸುತ್ತವೆ. ಬ್ರಹ್ಮ ಹಾಗೂ ದೇವೇಂದ್ರರ ಶಿಲ್ಪಗಳು.. ಮುಖ್ಯ ಗರ್ಭಗುಡಿಯಲ್ಲಿ ಈಗಲು ನಿಂತಿರುವ ಗದಾಹಸ್ತನಾದ ಶ್ರೀ ವಿಷ್ಣುವಿನ ಮೂರ್ತಿ ಹಾಗೂ ದೇಗುಲದ ಬಾಹ್ಯದಲ್ಲಿ ಕೆತ್ತಲಾದ ಕ್ಷೀರ ಸಾಗರ ಕಡೆಯುವ ಪ್ರಸಂಗದ ಕೆತ್ತನೆಗಳು ಹಿಂದೂ ಪುರಾಣಗಳಿಗೆ ಹಿಡಿದ ಕನ್ನಡಿಯಂತಿವೆ. ಸುಮಾರು 200 ಕ್ಕು ಹೆಚ್ಚು ನಗುವ ಭವ್ಯ ಮೂರ್ತಿಗಳ ಪ್ರತಿಷ್ಠಾಪನೆಯಿರುವುದು ಈ ದೇವಸ್ಥಾನದ ವಿಶೇಷತೆಗಳಲ್ಲೊಂದು.

ಇನ್ನೊಂದು ವಿಶೇಷತೆಯೆಂದರೆ. ಇದು ಇತರೆ ಹಿಂದೂ ದೇಗುಲಗಳಂತೆ ಪೂರ್ವಕ್ಕೆ ಸೂರ್ಯೋದಯಕ್ಕೆ ಅಭಿಮುಖವಾಗಿಲ್ಲ. ಬದಲಿಗೆ ಇದರ ಮುಖ್ಯ ಗರ್ಭಗುಡಿ ಪಶ್ಚಿಮಕ್ಕೆ ಸೂರ್ಯಾಸ್ತಕ್ಕೆ ಅಭಿಮುಖವಾಗಿದೆ. ಸೂರ್ಯಾಸ್ತವು ಸರಿಯಾಗಿ ಈ ದೇವಾಲಯದ ಗರ್ಭಗುಡಿಯ ನಟ್ಟನಡುವೆಯೇ ಸಂಭವಿಸುತ್ತದೆ ! ಸಂಜೆಯ ಸೂರ್ಯನ ತೆಳು ಬಿಸಿಲಿನ ರಶ್ಮಿಗಳಿಂದ ದೇವಾಲಯವು ಕಂಗೊಳಿಸುವ ಮೂಲಕ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಮೂರು ಲಕ್ಷಕ್ಕು ಹೆಚ್ಚು ಸ್ಯಾಂಡ್ ಇಟ್ಟಿಗೆಗಳು ಈ ದೇಗುಲದ ಕಾರ್ಯಕ್ಕೆ ಬಳಕೆಯಾಗಿವೆ. ಎಂಭತ್ತು ತೊಂಭತ್ತರ ದಶಕದಲ್ಲಿ ಕೇವಲ ನಾಲ್ಕೈದು ಸಾವಿರದಷ್ಟಿದ್ದ ಇದರ ಪ್ರವಾಸಿಗರ ಸಂಖ್ಯೆ ಇಂದು ವರ್ಷಕ್ಕೆ 5 ಲಕ್ಷಕ್ಕು ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ.

1992 ರಲ್ಲಿ ಯುನೆಸ್ಕೊ ಈ ದೇವಾಲಯವನ್ನ ಅದರ ಚರಿತ್ರಾರ್ಹ ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಿದೆ. ಈ ದೇವಾಲಯದ ಶುದ್ಧಿ ಹಾಗೂ ಸುಧಾರಣೆಗೆ ಕಾಂಬೋಡಿಯಾದ ಸರ್ಕಾರ ಮುತುವರ್ಜಿ ವಹಿಸಿದೆ. ಈ ಎತ್ತರದ ದೇವಾಲಯಗಳ ಗೋಪುರಗಳ ಮೇಲೆ ಅಲ್ಲಿನ ಮಳೆಯಿಂದಾಗಿ ಬೆಳೆಯುವ ಗಿಡ ಗೆಂಟೆಗಳನ್ನ ಕತ್ತರಿಸೋದು ಬಹುದೊಡ್ಡ ತ್ರಾಸಿನ ಕೆಲಸ. ಅನುಭವಿ ಶ್ರಮಿಕರು ಏಣಿಗಳನ್ನ ಬಳಸಿ ಈ ದೇವಾಲಯದ ತುದಿಯವರೆಗು ಹತ್ತಿ ಅವುಗಳನ್ನ ಕತ್ತರಿಸಿ ಸ್ವಚ್ಛಗೊಳಿಸುವ ಸಾಹಸಕ್ಕಿಳಿಯುತ್ತಾರೆ. ಸಾವಿರಾರು ವರ್ಷಗಳಿಂದ ಭೂಮಿಯ ಸಹಸ್ರಾರು ಬದಲಾವಣೆಗಳಿಗೆ ಹಾಗೂ ನಿಸರ್ಗದ ಹಲವು ಒತ್ತಡಗಳಿಗೆ ಸಾಕ್ಷಿಯಾಗಿ ಸೆಟೆದು ನಿಂತಿರುವ ಈ ಆಂಕೋರ್ ವಾಟ್ ಕಾಲ ಧರ್ಮ ಹಾಗೂ ದೇಶಗಳನ್ನ ಮೀರಿದ ಒಂದು ಅಮೋಘ ಸ್ಮಾರಕ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ

ಮಾಹಿತಿ ಸಂಗ್ರಹ ಮತ್ತು ಲೇಖನ : ಇಂದೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)

 

Tags: # Cambodia#god vishnu#Hindu temple of Angkor#vishnu temple#Vishnuloka Angkor Wat Temple#Vishnuloka Angkor Wat Temple in CambodiaHindu-templeTemple
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

by Shwetha
April 6, 2026
0

ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

by Shwetha
April 6, 2026
0

ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆಯಲ್ಲಿ ಬಿಡಿಗಾಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲವನ್ನೂ ಕಳೆದುಕೊಂಡು ಕೇವಲ ಗರಿಗರಿ ಬಟ್ಟೆ ಹಾಕಿಕೊಂಡು ತಿರುಗುವ ಜಂಭದ ಸಾಹುಕಾರನಂತಾಗಿದೆ. ಮನೆಗೆ ಸಾಲಗಾರರು ಮುತ್ತಿಗೆ...

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

by Shwetha
April 6, 2026
0

ಅಸ್ಸಾಂ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಅಸ್ಸಾಂನ ಗೋಲಾಘಾಟ್...

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

by Shwetha
April 6, 2026
0

ಗಡಿಯಾಚೆಗಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದ್ದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾರತದ ವಿರುದ್ಧ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ. ಭಾರತವೇನಾದರೂ ಪಾಕಿಸ್ತಾನದ ಮೇಲೆ ವಿನಾಕಾರಣ ದಾಳಿ...

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

by Shwetha
April 6, 2026
0

ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಗೂಬೆ ಕೂರಿಸುವ ಬದಲು ಎಲ್ ಪಿ ಜಿ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ 6ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram