ನಾವು ಕೇವಲ ಉಪದೇಶ ಮಾಡುತ್ತಿದ್ದೇವೆ ಆದರೆ ರಷ್ಯಾ ಮಾಡಿ ತೋರಿಸಿದೆ – ಶಿವಸೇನಾ
ಮುಂಬೈ, ಅಗಸ್ಟ್ 17: ರಷ್ಯಾ ಮೊದಲ ಕೊರೋನವೈರಸ್ ಲಸಿಕೆ ತಯಾರಿಸುವ ಮೂಲಕ ಅದು ಆತ್ಮನಿರ್ಭರ (ಸ್ವಾವಲಂಬಿ) ಎಂದು ತೋರಿಸಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ.
ಭಾರತದಲ್ಲಿ, ಸ್ವಾವಲಂಬಿ ಬಗ್ಗೆ ಮಾತುಕತೆ ಮಾತ್ರ ನಡೆಯುತ್ತಿದೆ ಎಂದು ರಾವತ್ ತನ್ನ ಸೇನಾ ಮುಖವಾಣಿ ಸಾಮ್ನದ ಸಾಪ್ತಾಹಿಕ ಅಂಕಣದಲ್ಲಿ ತಿಳಿಸಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ತಮ್ಮ ದೇಶವು ಕೋವಿಡ್-19 ವಿರುದ್ಧ ಮೊದಲ ಲಸಿಕೆ ಅಭಿವೃದ್ಧಿಪಡಿಸಿದೆ ಎಂದು ಘೋಷಿಸಿದ್ದು, ಅವರ ಮಗಳಿಗೆ ಈಗಾಗಲೇ ಲಸಿಕೆಯನ್ನು ಪ್ರಯೋಗಿಸಲಾಗಿದೆ.
ಅಂತರರಾಷ್ಟ್ರೀಯ ತಜ್ಞರಲ್ಲಿ ರಷ್ಯಾದ ಲಸಿಕೆ ಬಗ್ಗೆ ಸಾಕಷ್ಟು ಸಂದೇಹಗಳಿವೆ, ಅವರು ಮಾನವ ಪ್ರಯೋಗದ ಅಂತಿಮ ಹಂತ ನಡೆಸಿಲ್ಲ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ, ರಷ್ಯಾದ ಲಸಿಕೆ ಪರೀಕ್ಷೆಯು ಸುಧಾರಿತ ಹಂತಗಳಲ್ಲಿ ಪರಿಗಣಿಸುವ ಒಂಬತ್ತರಲ್ಲಿ ಇಲ್ಲ ಎಂದು ಹೇಳಿದೆ.
ವಿಶ್ವಾದ್ಯಂತ ರಷ್ಯನ್ ಲಸಿಕೆ ನಿಯಮಬಾಹಿರ, ಪರಿಣಾಮಕಾರಿಯಲ್ಲ ಎಂದು ಸಾಬೀತುಪಡಿಸಲು ಜಾಗತಿಕ ಆಂದೋಲನ ನಡೆದಾಗ, ಪುಟಿನ್ ಲಸಿಕೆಯನ್ನು ತನ್ನ ಮಗಳ ಮೇಲೆ ಪ್ರಯೋಗವಾಗಿ ಬಳಸಿದರು ಮತ್ತು ತಮ್ಮ ದೇಶದಲ್ಲಿ ಭರವಸೆಯ ಅಲೆಯನ್ನು ಸೃಷ್ಟಿಸಿದರು ಎಂದು
ರಾವತ್ ಹೇಳಿದರು. ರಷ್ಯಾವು ಆತ್ಮನಿರ್ಭರದ ಮೊದಲ ಪಾಠವನ್ನು ಜಗತ್ತಿಗೆ ಕಲಿಸಿದೆ. ಆದರೆ ನಾವು ಕೇವಲ ಆತ್ಮನಿರ್ಭರ ಎಂದು ಉಪದೇಶ ಮಾಡುತ್ತಿದ್ದೇವೆ ಎಂದು ರಾವತ್ ಹೇಳಿದರು.

ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ಮಹಂತ್ ನರ್ತ್ಯ ಗೋಪಾಲ್ ದಾಸ್ ಅವರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದೆ, ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆದ ಭೂಮಿ ಪೂಜೆ ಸಮಾರಂಭದಲ್ಲಿ ದಾಸ್ ಅವರೊಂದಿಗೆ ಹಸ್ತಲಾಘವ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುತ್ತಾರೆಯೇ ಎಂದು ರಾವತ್ ಪ್ರಶ್ನಿಸಿದರು.
ಈಗಾಗಲೇ ಕೊರೋನವೈರಸ್ ದೃಢಪಟ್ಟಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಮೋದಿ ಸರ್ಕಾರದ ಕೆಲವು ಮಂತ್ರಿಗಳಿಗೆ ಮತ್ತು ಅಧಿಕಾರಿಗಳಿಗೆ ಸಹ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಂಜಯ್ ರಾವತ್ ತಿಳಿಸಿದರು.








