ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಒಂದೇ ದಿನ ಒಟ್ಟು 97 ಜನರಿಗೆ ಮಹಾಮಾರಿ ಒಕ್ಕರಿಸಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3248ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ ಒಟ್ಟು 146 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ ಜಿಲ್ಲೆಯಲ್ಲಿನ್ನು 990 ಸಕ್ರಿಯ ಕೇಸ್ ಗಳಿವೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು 61 ಜನರು ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
![]()
ಇನ್ನೂ ಸೋಂಕಿತರ ಪೈಕಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 22, ತರೀಕೆರೆಯಲ್ಲಿ 16, ಕಡೂರಿನಲ್ಲಿ 42, ಮೂಡಿಗೆರೆಯಲ್ಲಿ 3, ನರಸಿಂಹರಾಜಪುರದಲ್ಲಿ 4, ಶೃಂಗೇರಿಯಲ್ಲಿ 6, ಕೊಪ್ಪದಲ್ಲಿ 4 ಕೇಸ್ ಗಳು ವರದಿಯಾಗಿವೆ.









