ಅವ್ಯವಹಾರದ ಭಾಗವಾದ ಭಾರತದ ಬ್ಯಾಂಕಿಂಗ್ :
ಭಾರತದ ಖಾಸಗಿ ಬ್ಯಾಂಕ್ ಯೆಸ್ ಬ್ಯಾಂಕ್ ನ ಬಿಕ್ಕಟ್ಟಿನ ನಂತರ ಷೇರುಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್ನ ಷೇರು ಮೌಲ್ಯ ಪಾತಾಳಕ್ಕೆ ಕುಸಿದಿದೆ. ಯೆಸ್ ಬ್ಯಾಂಕ್ ಷೇರುದಾರರು ತಲೆಯ ಮೇಲೆ ಆಕಾಶ ಬಿದ್ದಂತೆ ಕಂಗಾಲಾಗಿದ್ದಾರೆ . ಕಳೆದ ಕೆಲವು ದಿನಗಳಿಂದ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತೀಯ ಷೇರುಮಾರುಕಟ್ಟೆಯಿಂದ ಸುಮಾರು 20 ಸಾವಿರ ಕೋಟಿಗಿಂತಲೂ ಅಧಿಕ ಬಂಡವಾಳ ವಾಪಸು ತೆಗೆದುಕೊಂಡಿರುವುದು ಷೇರು ಮಾರುಕಟ್ಟೆಯ ಈಗಿನ ಪತನಕ್ಕೆ ಕಾರಣವಾಗಿದೆ ಎಂದು ಷೇರು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ . ಭಾರತ ಬ್ಯಾಂಕಿಂಗ್ ಅದರಲ್ಲೂ ಪ್ರಮುಖವಾಗಿ ಯೆಸ್ ಬ್ಯಾಂಕ್ನ ಆರ್ಥಿಕ ಬಿಕ್ಕಟ್ಟು, ಹೂಡಿಕೆದಾರರನ್ನು ಹಿಂದೇಟು ಹಾಕುವಂತೆ ಮಾಡಿದೆ. ಇತ್ತೀಚಿನ ಬೆಳವಣಿಗೆ ಭಾರತೀಯ ಹಣಕಾಸು ವ್ಯವಸ್ಥೆಯಲ್ಲಿನ ಸ್ಥಿರತೆಯ ಬಗೆ ಅನುಮಾನ ಮೂಡಿಸಿರುವುದು ಕೂಡ ವಿಷಾದನೀಯ. ಇದು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಂಡವಾಳಶಾಹಿ ಪ್ರಪಂಚದ ಬ್ಯಾಂಕಿಂಗ್ ಕ್ಷೇತ್ರದ ದುರ್ಬಳಕೆಯತ್ತ ಬೊಟ್ಟು ಮಾಡಿ ತೋರಿಸುವಂತೆ ಮಾಡಿದೆ.
ತೈಲ ಸಮರ:
ತೈಲ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಒಪೆಕ್ ರಾಷ್ಟ್ರಗಳು ಉತ್ಪಾದನಾ ಕಡಿತ ಮಾಡುವ ಪ್ರಸ್ತಾವಕ್ಕೆ ರಷ್ಯಾ ಅಡ್ಡಿ ಉಂಟು ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಸೌದಿ ಅರೇಬಿಯಾ ರಷ್ಯಾದೊಂದಿಗೆ ವಾಣಿಜ್ಯ ಸಮರ ಆರಂಭಿಸಿದ್ದು, ಇದರಿಂದ ಕಚ್ಚಾ ತೈಲ ಬೆಲೆಗಳು ಶೇಕಡಾ 30 ಕ್ಕಿಂತಲೂ ಹೆಚ್ಚು ಕುಸಿದವು. ಕೊಲ್ಲಿ ಯುದ್ಧದ ನಂತರದ ಅತಿದೊಡ್ಡ ಬೆಲೆ ಕುಸಿತ ಇದಾಗಿದೆ.
ಕಚ್ಚಾ ತೈಲ ಹೆಚ್ಚಾಗಿ ಆಮದು ಮಾಡಿ ಕೊಳ್ಳುವ ದೇಶ ಭಾರತ. ತೈಲ ಬೆಲೆಗಳನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಇದರ ಪರಿಣಾಮ ಹೆಚ್ಚು ತೀವ್ರವಾಗಿರುತ್ತದೆ. ತೈಲ ಬೆಲೆಯ ಅತಿಯಾದ ಏರಿಕೆ ಮತ್ತು ಇಳಿಕೆ ದೇಶದ ಮಾರುಕಟ್ಟೆಯ ಬೆಳವಣಿಯ ಮೇಲೆ ನೇರ ಪರಿಣಾಮ ಬೀಳುತ್ತದೆ. ಆದುದರಿಂದ ತೈಲ ಬೆಲೆ ಕುಸಿತವು ಭಾರತದ ಮೇಲೆ ಪರಿಣಾಮ ಬೀರಿದೆ.
ಕೊರೊನ ಹಾವಳಿ :
ಜಗತ್ತಿನಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ಸೋಂಕು ಭಯ ಕೂಡ ಷೇರು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗಾಗಲೇ ಜಾಗತಿಕವಾಗಿ ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಹರಡಿದ್ದು, ಯುರೋಪ್ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೂ ಹರಡಿದೆ. ಇದರ ಪರಿಣಾಮ ಬರೀ ಚೀನಾ ಮಾರುಕಟ್ಟೆ ಮೇಲೆ ಮಾತ್ರವಲ್ಲದೆ ಯುರೋಪ್ ಮಾರುಕಟ್ಟೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.
ಹಣದುಬ್ಬರ ಪ್ರಮಾಣ ಅತಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುವುದರ ಜೊತೆ ಕೊರೋನಾ ಸೋಂಕು ಹರಡುವಿಕೆ ಸಾಧ್ಯತೆಯೂ ಹೆಚ್ಚಾಗಿದೆ.
ಒಟ್ಟಿನಲ್ಲಿ ಕೊರೊನಾವೈರಸ್ , ಒಪೆಕ್, ಬ್ಯಾಂಕಿಂಗ್ ವ್ಯವಸ್ಥೆಯ ಅಸ್ಥಿರತೆ , ಜಾಗತಿಕ ಮಾರುಕಟ್ಟೆಗಳ ಕುಸಿತ ದೇಶದ ಮಾರುಕಟ್ಟೆಯ ಮೇಲೆ ಬೇರೆ ಬೇರೆ ರೀತಿ ಪರಿಣಾಮ ಬೀರಿದೆ.
ಅಗತ್ಯ ಕ್ರಮಗಳು :
ಜಪಾನ್
ಕೊರೋನವೈರಸ್ನಿಂದ ಸಂಕಷ್ಟದಲ್ಲಿ ಇರುವ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ಜಪಾನ್ ಸರಕಾರ ತನ್ನ ವಿಶೇಷ ಹಣಕಾಸನ್ನು 1.6 ಟ್ರಿಲಿಯನ್ ಯೆನ್ಗೆ ಹೆಚ್ಚಿಸಲಿದೆ ಎಂದು ತಿಳಿದು ಬಂದಿದ್ದು , ಈ ಹಿಂದೆ ಘೋಷಿಸಿದ ಸರಿಸುಮಾರು 500 ಬಿಲಿಯನ್ ಯೆನ್ಗಿಂತ ಇದು ಹೆಚ್ಚಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಮೇರಿಕಾ
ಕೊರೋನವೈರಸ್ ನ ಪರಿಣಾಮದ ವಿರುದ್ಧ ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ ಮತ್ತು ಮಂಗಳವಾರ ಕಾಂಗ್ರೆಸ್ ರಿಪಬ್ಲಿಕನ್ನರೊಂದಿಗೆ ವೇತನದಾರರ ತೆರಿಗೆ ಕಡಿತವನ್ನು ಚರ್ಚಿಸಿದ್ದಾರೆ. ನಾವು ವೇತನದಾರರ ತೆರಿಗೆ ಕಡಿತ ಅಥವಾ ಪರಿಹಾರ, ಗಣನೀಯ ಪರಿಹಾರ, ಗಣನೀಯ ಪರಿಹಾರವನ್ನು ಚರ್ಚಿಸುತ್ತಿದ್ದೇವೆ, ಅದು ದೊಡ್ಡ ಸಂಖ್ಯೆಯಾಗಿದೆ ಎಂದು ಟ್ರಂಪ್ ಸುದ್ದಿಗಾರರಿಗೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದರಿಂದ ಮಂಗಳವಾರ ಯೆನ್, ಯೂರೋ ಮತ್ತು ಸ್ವಿಸ್ ಫ್ರಾಂಕ್ ವಿರುದ್ಧದ ಭಾರೀ ನಷ್ಟದಿಂದ ಡಾಲರ್ ಸ್ವಲ್ಪಮಟ್ಟಿನ ಚೇತರಿಕೆ ಕಂಡಿದೆ.
ರಷ್ಯಾ
1991 ರಿಂದೀಚೆಗೆ ತೈಲ ಬೆಲೆಗಳು ತಮ್ಮ ಅತಿದೊಡ್ಡ ದೈನಂದಿನ ಮಾರ್ಗದಲ್ಲಿ ಕುಸಿದ ನಂತರ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಬ್ಯಾಂಕಿಂಗ್ ಕ್ಷೇತ್ರದ ಪ್ರಸ್ತುತ ಲಿಕ್ವಿಡಿಟಿ ಸಾಕು ಎಂದು ರಷ್ಯಾದ ಕೇಂದ್ರ ಬ್ಯಾಂಕ್ ಮಂಗಳವಾರ ಹೇಳಿದೆ. ಮಂಗಳವಾರ ತನ್ನ ಕರೆನ್ಸಿ ಸ್ವಾಪ್ ಕಾರ್ಯಾಚರಣೆಯ ಮಿತಿಯನ್ನು 5 ಬಿಲಿಯನ್ ಗೆ ಹೆಚ್ಚಿಸಿದೆ ಮತ್ತು 500 ಬಿಲಿಯನ್ ರೂಬಲ್ಸ್ (90 6.90 ಬಿಲಿಯನ್) ಮೌಲ್ಯದ ರೆಪೊ ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಅಗತ್ಯವಿದ್ದರೆ ಅದು ಕಾರ್ಯಾಚರಣೆಯ ಮಿತಿಗಳನ್ನು ಹೆಚ್ಚಿಸುವ ಭರವಸೆ ನೀಡಿದೆ .
ಏಶಿಯನ್ ಮಾರುಕಟ್ಟೆ
ಕೊರೊನಾವೈರಸ್ ನ ಏಕಾಏಕಿ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಜಾಗತಿಕ ನೀತಿ ನಿರೂಪಕರು ಸಮನ್ವಯದ ಪ್ರಚೋದನೆಯನ್ನು ಪರಿಚಯಿಸುತ್ತಾರೆ ಎಂಬ ಭರವಸೆಯ ಮೇರೆಗೆ ಏಷ್ಯಾದ ಷೇರುಗಳು ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿತು ಮತ್ತು ಬಾಂಡ್ ಇಳುವರಿ ಮಂಗಳವಾರ ದಾಖಲೆಯ ಕನಿಷ್ಠ ಮಟ್ಟದಿಂದ ಸ್ವಲ್ಪ ಏರಿಕೆ ಕಂಡಿತು. ಇದು ಜನರಲ್ಲಿ ಇದ್ದ ಭಯವನ್ನು ಸ್ವಲ್ಪ ಮಟ್ಟಿಗೆ ದೂರಮಾಡಿದೆ
ಭಾರತ
ಕೊರೊನಾವೈರಸ್ ನ ಏಕಾಏಕಿ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಜಾಗತಿಕ ನೀತಿ ನಿರೂಪಕರು ಸಮನ್ವಯದ ಪ್ರಚೋದನೆಯನ್ನು ಪರಿಚಯಿಸುತ್ತಾರೆ ಎಂಬ ಭರವಸೆಯ ಮೇರೆಗೆ ಏಷ್ಯಾದ ಷೇರುಗಳು ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿತು ಮತ್ತು ಬಾಂಡ್ ಇಳುವರಿ ಮಂಗಳವಾರ ದಾಖಲೆಯ ಕನಿಷ್ಠ ಮಟ್ಟದಿಂದ ಸ್ವಲ್ಪ ಏರಿಕೆ ಕಂಡಿತು. ಇದು ಜನರಲ್ಲಿ ಇದ್ದ ಭಯವನ್ನು ಸ್ವಲ್ಪ ಮಟ್ಟಿಗೆ ದೂರಮಾಡಿದೆ. ಏಷ್ಯಾದ ಎಲ್ಲಾ ಷೇರು ಸೂಚ್ಯಂಕಗಳು ಶೇ. 1ರಷ್ಟು ಏರಿಕೆಗೊಂಡಿದ್ದು ಹೋಳಿ ಹಬ್ಬದ ಪ್ರಯುಕ್ತ ಮಂಗಳವಾರ ಭಾರತ ಷೇರು ಮಾರುಕಟ್ಟೆಗೆ ರಜಾ ದಿನವಾಗಿತ್ತು.
ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಿನ ಬೆಲೆ ಸಮರದ ಮಧ್ಯೆ ಮತ್ತು ಚೀನಾದಲ್ಲಿ ಹೊಸ ಕೊರೋನಾ ವೈರಸ್ ಪ್ರಕರಣಗಳು ಕಡಿಮೆಯಾದ ಕಾರಣ ತೈಲ ಬೆಲೆಗಳು ಸುಮಾರು 30ವರ್ಷಗಳಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತದ ನಂತರ ಮಂಗಳವಾರ 8% ನಷ್ಟು ಚೇತರಿಕೆ ಕಂಡಿತು.
ವಿಶ್ವದ ಎರಡನೇ ಅತಿದೊಡ್ಡ ತೈಲ ಗ್ರಾಹಕ ಚೀನಾ, ಮೊಬೈಲ್ ಫೋನ್ ಆಧಾರಿತ ಮಾನಿಟರಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ದೇಶದೊಳಗೆ ಜನರಿಗೆ ಪ್ರಯಾಣಿಸಲು ಅನುವು ಮಾಡಿಕೊಡುವ, ಹಾನಿಗೊಳಗಾದ ಹುಬೈ ಪ್ರಾತ್ಯದ ಜನರನ್ನು ಮತ್ತೆ ಕೆಲಸಕ್ಕೆ ಸೇರಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಲಕ್ಷಣ ಕಾಣುತ್ತಿದೆ.
ತೈಲ ದರಸಮರ ಮತ್ತು ಯುಎಸ್ ಉತ್ಪಾದನಾ ಕಡಿತದ ಇತ್ಯರ್ಥದ ಭರವಸೆಯಿಂದ ಕಚ್ಚಾ ತೈಲ ಬೆಲೆ ಚೇತರಿಕೆ ಕಂಡರೂ ಕೊರೋನಾದ ಭೀತಿ ಷೇರು ಪೇಟೆ ಮೇಲೆ ಪ್ರಭಾವ ಬೀರುವುದನ್ನು ಅಲ್ಲಗಳೆಯುವಂತಿಲ್ಲ.








