ರಾಜ್ಯ ಸಭೆಯಿಂದ ಎಂಟು ಸಂಸದರ ಅಮಾನತು
ಹೊಸದಿಲ್ಲಿ, ಸೆಪ್ಟೆಂಬರ್21: ಎರಡು ಕೃಷಿ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ಕೋಲಾಹಲ ಮತ್ತು ಅವ್ಯವಸ್ಥೆಗಾಗಿ ಎಂಟು ಸಂಸದರನ್ನು ಸೋಮವಾರ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಸಂಸದರನ್ನು ಸಂಸತ್ತಿನಲ್ಲಿ ಕೋಲಾಹಲ ನಡೆಸಿದ ಘಟನೆಗೆ ಅಮಾನತುಗೊಳಿಸಲಾಗಿದೆ.
ಒಬ್ರಿಯಾನ್, ಡೋಲಾ ಸೇನ್ ತೃಣಮೂಲ ಕಾಂಗ್ರೆಸ್ ಸದಸ್ಯರು, ಹುಸೈನ್, ಬೋರಾ ಮತ್ತು ಸಟಾವ್ ಕಾಂಗ್ರೆಸ್ ಪಕ್ಷದ ಸಂಸದರು, ಸಂಜಯ್ ಸಿಂಗ್ ಆಪ್ ಸಂಸದ, ರಾಗೇಶ್ ಮತ್ತು ಕರೀಂ ಸಿಪಿಐ(ಎಂ) ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ.
ಉಪಾಧ್ಯಕ್ಷ ವೆಂಕಯ್ಯ ನಾಯ್ಡು 8 ಸಂಸದರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಿದರು. ಕೃಷಿಗೆ ಸಂಬಂಧಿಸಿದ ಎರಡು ವಿವಾದಾತ್ಮಕ ಮಸೂದೆಗಳ ಮತದಾನವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಭಾನುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಉಪಸಭಾಪತಿಯತ್ತ ನಿಯಮಾವಳಿ ಪುಸ್ತಕ ತೂರಿ, ಕಾಗದ ಪತ್ರ ಹರಿದು ಎಸೆದು ಕೋಲಾಹಲ ನಡೆಸಿದರು.
ಸರ್ಕಾರದ ಕೋರಿಕೆಯ ಮೇರೆಗೆ ಉಪಾಧ್ಯಕ್ಷ ಹರಿವಂಶ್ ಕುಮಾರ್ ಅವರು ಸದನ ಕಲಾಪ ಕೈಗೆತ್ತಿಕೊಂಡಾಗ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಳಿದು ಆಕ್ರೋಶ ವ್ಯಕ್ತಪಡಿಸಿದರು
I order Mr Derek to go out of the House: Rajya Sabha Chairman M Venkaiah Naidu https://t.co/BSjWnK4lvf
— ANI (@ANI) September 21, 2020








