ಕೊರೊನಾ ವೈರಸ್ನಿಂದ ಗುಣಮುಖರಾಗಿರುವ ಅಮೆರಿಕದ ಎಲಿಜಬೆತ್ ಸಿನೈಡರ್ ಎಂಬ ಮಹಿಳೆ ಸಂದರ್ಶನವೊಂದರಲ್ಲಿ ಕೊರೊನಾ ಬಗ್ಗೆ ಭಯಪಡಬೇಡಿ, ವೈರಸ್ನ ಲಕ್ಷಣಗಳು ಕಂಡುಬಂದರೆ ಮನೆಯಲ್ಲಿಯೇ ಇರಿ. ಕೊರೊನಾಗೆ ಆತ್ಮವಿಶ್ವಾಸ ಕೂಡ ಮದ್ದಾಗಲಿದೆ ಎಂದಿದ್ದಾರೆ. ಜಗತ್ತಿನಾದ್ಯಂತ ಕೊರೋನಾ ವೈರಸ್ ಮರಣ ಮೃದಂಗ ಮುಂದುವರಿಸಿದ್ದು, ಕರ್ನಾಟಕದಲ್ಲೂ ಕೊರೋನಾ ಶಂಕಿತರ ಸಂಖ್ಯೆ 32 ಕ್ಕೆ ಏರಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಲ್ಲಿ ಒಂದು ವಾರಗಳ ಕಾಲ ಎಲ್ಲಾ ಥಿಯೇಟರ್, ಮಾಲ್, ಬಾರ್, ಪಬ್ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ಕೊರೋನಾ ವೈರಸ್ ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯ ಹಲವು ಮುನ್ನೆಚ್ಚರಿಕೆ ಕಾರ್ಯ ಕ್ರಮಗಳನ್ನು ಜಾರಿಗೆ ತಂದಿದೆ.
ಕೊರೋನಾ ಜಾಗೃತಿ
ಕೊರೊನಾ ವೈರಸ್ ಗಾತ್ರದಲ್ಲಿ 400 – 500 ಮೈಕ್ರೋ ಸೂಕ್ಷ್ಮ ವ್ಯಾಸ ದಪ್ಪವಾಗಿದ್ದು, ಯಾವುದೇ ಮಾಸ್ಕ್ ಇದರ ಪ್ರವೇಶವನ್ನು ತಡೆಯುತ್ತದೆ. ನೆಲ, ವಸ್ತುಗಳು, ಕೈಗಳ ಮೇಲೆ ಇರುತ್ತದೆ ವಿನಃ ಗಾಳಿಯಲ್ಲಿ ಇರುವುದಿಲ್ಲ ಹಾಗೂ ಗಾಳಿಯಲ್ಲಿ ಹರಡುವುದಿಲ್ಲ.
ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಸೋಂಕಿತ ವ್ಯಕ್ತಿಯ ಹಸ್ತ ಲಾಘವ ಮತ್ತು ಮುಟ್ಟುವಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವಚ್ಛಗೊಳಿಸಿದ/ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಕೊರೋನಾ ರೋಗ ಹರಡುತ್ತದೆ.
• ರೈಲು, ಬಸ್, ಮೆಟ್ರೊ ಅಥವಾ ಜನಜಂಗುಳಿ ಹೆಚ್ಚಾಗಿರುವ ಕಡೆಗಳಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ.
• ನಿಮ್ಮಲ್ಲಿ ಮಾಸ್ಕ್ ಇಲ್ಲದೇ ಇದ್ದರೂ ಕರವಸ್ತ್ರ ವನ್ನು ಮುಖಕ್ಕೆ ಕಟ್ಟಿಕೊಳ್ಳಬಹುದಾಗಿದೆ.
• ಅನಾರೋಗ್ಯವಿದೆ ಎಂದು ಅನಿಸಿದರೆ ಮನೆಯಲ್ಲೇ ಇರಿ. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ ಚಿಕಿತ್ಸೆ ಪಡೆಯಿರಿ
• ಅದರಲ್ಲೂ ಜ್ವರ, ಉಸಿರಾಟಕ್ಕೆ ಕಷ್ಟವಾಗುವುದು ಮೊದಲಾದ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಿರಿ.
• ಸ್ಥಳೀಯ ಆರೋಗ್ಯ ಪ್ರಾಧಿಕಾರದ ಸಲಹೆಗಳನ್ನು ಪಾಲಿಸಿ
• ಶೀತ ಮತ್ತು ಕೆಮ್ಮುನಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ.
• ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ವನ್ನು ಅಡ್ಡ ಹಿಡಿಯಲೇಬೇಕು.
• ಬಳಸಿದ ಟಿಶ್ಯೂ ಪೇಪರ್ ಗಳನ್ನು ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿ ಹಾಕಿ.
• ಜನದಟ್ಟಣೆ ಪ್ರದೇಶದಿಂದ ದೂರವಿರುವುದು.
• ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು ಮತ್ತು ಸ್ಯಾನಿಟೈಸರ್
ಬಳಸುವುದು.
• ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ವಸ್ತುವನ್ನು ಎಲ್ಲರೂ ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇವುಗಳನ್ನು ಬಳಸಿದ ಕೂಡಲೇ ಕೈಗಳನ್ನು ತೊಳೆಯಬೇಕು.
• ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಮುಟ್ಟುವುದನ್ನು ತಪ್ಪಿಸಬೇಕು.
•ಅಜಾಗರೂಕತೆಯಿಂದ ಆ ವೈರಸ್ ದೇಹವನ್ನು ಪ್ರವೇಶಿಸಬಹುದು. ಮುಖವನ್ನು ಸುರಕ್ಷಿತವಾಗಿರಿಸಿ.
• ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ ವಹಿಸುವುದು ಅಗತ್ಯ.
• ತರಕಾರಿಗಳನ್ನು ತೊಳೆದು ಶುಚಿಗೊಳಿಸಿ ಸೇವಿಸಬೇಕು.
•ನಿರಂತರ ನೀರು ಸೇವನೆ ಹಾಗೂ ಬೆಚ್ಚಗಿನ ನೀರು ಕುಡಿಯಬೇಕು.
• ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಿ
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ 24/7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ.








