ADVERTISEMENT
Tuesday, June 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಹಾಸ್ಯದಿಂದಲೇ ಜನರ ಮನಸ್ಸಿಗೆ ಹತ್ತಿರವಾದ ‘ಚಿಕ್ಕಿ’ ಸಿನಿಜರ್ನಿ..!

Namratha Rao by Namratha Rao
October 17, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

chikkanna

ಚಂದನವನದಲ್ಲಿ ಹಾಸ್ಯ ಕಲಾವಿಧರಾಗಿ ಜನರನ್ನ ಮನೋರಂಜಿಸಿ ಅನೇಕರು ಬಳಿಕ ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ. ಇದಕ್ಕೆ ನಟ ಕೋಮಲ್, ಶರಣ್ ರಾಜ್ ಹೊರತಾಗಿಲ್ಲ. ಇದೀಗ ಈ ಸಾಲಿಗೆ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಚಿಕ್ಕಿ ಅಲಿಯಾಸ್ ಚಿಕ್ಕಣ್ಣ ಸೇರಿಕೊಂಡಿದ್ದಾರೆ.chikkanna

Related posts

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

June 9, 2026
ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

June 9, 2026

ಹೌದು ಚಿಕ್ಕಣ್ಣ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಚಿಕ್ಕಣ್ಣ ನಾಯಕನಟನಾಗಿ ಮಿಂಚಲು ರೆಡಿಯಾಗಿದ್ದಾರೆ. ಹೊಸ ಸಿನಿಮಾದ ಮೂಲಕ ಕಾಮಿಡಿ ಕಿಲಾಡಿ ಈಗ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.   

ಚಿಕ್ಕಿ ನಾಯಕನಾಗಿ ಮಿಂಚುತ್ತಿರುವ ಹೊಸ ಟೈಟಲ್ ಇದೇ ಅಕಟೋಬರ್ 19ಕ್ಕೆ ರಿವೀಲ್ ಆಗಲಿದೆ. ಮೂಲಗಳ ಪ್ರಕಾರ ಈ ಸಿನಿಮಾಗೆ ಉಪಾಧ್ಯಕ್ಷ ಎಂಬ ಶೀರ್ಷಿಕೆ ಇಡಲಾಗಿದೆ ಎನ್ನಲಾಗಿದೆ. ಇನ್ನೂ ಈ ವಿಚಾರ ಚಿಕ್ಕಿ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಅಲ್ಲದೇ ಈ ಚಿತ್ರದ ಮೂಲಕ ಹೊಸ ನಾಯಕಿಯನ್ನ ಚಂದನವನಕ್ಕೆ ಪರಿಚಯಿಸುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ ಸ್ಯಾಂಡಲ್ ವುಡ್ ನ ಟಾಪ್ ಹಾಸ್ಯನಟರಲ್ಲಿ ಒಬ್ಬರಾಗಿರುವ ಚಿಕ್ಕಣ್ಣ ಎಂಥವರನ್ನೇ ಆಗಲಿ ತಮ್ಮ ಕಾಮಿಡಿ ಝಳಕ್ ನಿಂದಲೇ ಜನರನ್ನ ನಗಿಸಿ ಮನೊರಂಜಿಸುತ್ತಾರೆ. ಸದ್ಯ ಚಂದನವನದಲ್ಲಿ ಬಹುಬೇಡಿಕೆಯ ಕಾಮಿಡಿಯನ್ ಆಗಿರುವ ಚಿಕ್ಕಿ ಅಪಾರ ಸನಿಪ್ರಯರಿಯ ಫೇವರೆಟ್ ಆಗಿದ್ದಾರೆ.

chikkanna

ವೃತ್ತಿ ಜೀವನ

ಮೈಸೂರಿನಲ್ಲಿ ದೃಶ್ಯ ಕಲಾವಿಧೆ ಕಾಮಿಡಿ ಶೋ ಮುಖಾಂತರ ತಮ್ಮ ವೃತ್ತಿ ಜೀವನವನ್ನ ಆರಂಭಿಸಿದ ಚಿಕ್ಕಿ 2011ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ಚಿಕ್ಕಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಚಿಕ್ಜಕಣ್ಣ ಕಾಮಿಡಿ ಜೊತೆಗೆ ಹಾವ ಭಾವವನ್ನೂ ವಿಭಿನ್ನವಾಗಿ ಸಂರ‍್ಭಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಕಲಾ ನಿಪುಣತೆ ಜನರನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ. ಈ ಸಿನಿಮಾದ ಮೂಲಕ ಚಿಕ್ಕ ಸ್ಯಾಂಡಲ್ ವುಡ್ ನಲ್ಲಿ ಅಚ್ಚುಮೆಚ್ಚಿನ ಹಾಸ್ಯ ಕಲಾವಿದರಾಗಿ ಷಚಿರಪರಿಚಿತರಾದರು. ಬಳಿಕ ಅನೇಕ ಆಫರ್ ಗಳು ಚಿಕ್ಕಣ್ಣನನ್ನ ಹುಡುಕಿಕೊಂಡು ಬಂದಿದ್ವು. ಬಳಿಕ ಮತ್ತೆ 2013ರಲ್ಲಿ ಯಶ್ ನಟನೆಯ ರಾಜಾಹುಲಿ, 2014ರ ಶರಣ್ ಅವರ ನಟನೆಯ ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಿ ನಟಿಸಿ ಜನರ ಫೇವರೆಟ್ ಆದರು. ಈ ಸಿನಿಮಾಗಳು ಚಿಕ್ಕಣ್ಣ ಅವರ ಖ್ಯಾತಿಗೆ ಮೈಲುಗಲ್ಲಾಗಿದ್ವು.

ಬಳಿಕ 2015ರಲ್ಲಿ ಚಿಕ್ಕಣ್ಣ ದಿಗಂತ್ ನಟನೆಯ ಶಾರ್ಪ್ ಶೂಟರ್ ಸಿನಿಮಾದಲ್ಲಿ ಕಾಣಿಸಿಕೊಮಡಿದ್ದರು. ಅಲ್ಲದೇ ಈ ಚಿತ್ರದ ಕುಂಟೆಬಿಲ್ಲೆ ಹಾಡಿಗೂ ಲಿರಿಕ್ಸ್ ಬರೆದಿದ್ದರು.

ತಮ್ಮನ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಚಿರಂಜೀವಿ..!

ಚಿಕ್ಕಣ್ಣ ಕಿರಾತಕದಿಂದ ಚಂದನವನಕಗಕೆ ಲಗ್ಗೆ ಇಟ್ಟರು. ಬಳಿಕ 2012ರಲ್ಲಿ ಲಕ್ಕಿ , ಮಿಸ್ಟರ್ 420 , 2013ರಲ್ಲಿ ರಾಜಾಹುಲಿ, ದರ್ಶನ್ ಅಭಿನಯದ ಬುಲ್ ಬುಲ್, ಶರಣ್ ಅಭಿನಯದ ವಿಕ್ಟರಿಯಲ್ಲಿ ಮಿಂಚಿದ್ರು. 2014ರಲ್ಲಿ ನವರಂಗಿ , ಅಂಜದ ಗಂಡು, ಕ್ವಾಟ್ಲೆ ಸತೀಶ, ಸವಾರಿ 2, ಬಾಸು ಅದೇ ಹಳೆ ಕಥೆ, ಅಧ್ಯಕ್ಷ, ತಿರುಪತಿ ಎಕ್ಸ್ ಪ್ರೆಸ್, ಜಸ್ಟ್ ಲವ್ ನಲ್ಲಿ ಕಾಣಿಸಿಕೊಂಡಿದ್ರು. ನಂತರ 2015ರಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿಬಂದ ಚಂದ್ರಿಕಾ , ರುದ್ರ ತಾಂಡವ, ಬಾಂಬೆ ಮಿಠಾಯಿ, ರನ್ನ, ವಜ್ರಕಾಯ, ಸಪ್ನೋಂಕಿ ರಾಣಿ, ಮಿ. ಐರಾವತ, ರಾಮ್ ಲೀಲಾ, ರಥಾವರ, ಬೆಂಗಳೂರು 560023, ಶಾರ್ಪ ಶೂಟರ್ , ಮಾಸ್ಟರ್ ಪೀಸ್ ನಲ್ಲಿ ಮಿಂಚಿದರು. ಬಳಿಕ 2016ರಲ್ಲಿ ಮದುವೆಯ ಮಮತೆಯ ಕರೆಯೋಲೆ, ಮಸ್ತ್ ಮೊಹಬ್ಬತ್, ವಾಟ್ಸಾಪ್ ಲವ್, ಟೈಸನ್, ತಲೆ ಬಾಚ್ಕೊಳ್ಳಿ, ಪೌಡರ್ ಹಾಕೊಳ್ಳಿ, ಜಿಗರ್ ತಂಡ , ಇಷ್ಟಕಾಮ್ಯ, ದೊಡ್ಮನೆ ಹುಡುಗ, ನನ್ನ ನಿನ್ನ ಪ್ರೇಮ ಕಥೆ, ಕೋಟಿಗೊಬ್ಬ 2, ಹ್ಯಾಪಿ ಬರ್ತ್ ಡೇ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಚಂದನಬವನಕ್ಕೆ ಎಂಟ್ರಿಯಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಅತಿ ಹೆಚ್ಚು ಖ್ಯಾತಿ ಪಡೆದಿದ್ದಾರೆ ಚಿಕ್ಕಿ.

ಇನ್ನೂ ಕಳೆದ ಮೂರು ವರ್ಷಗಳು ಅಂದ್ರೆ 2017ರಿಂದ 2020ರವೆಗೂ ಹಲವಾರು ಹೈ ಬಜೆಟ್ ಹಾಗೂ ಸೂಪರ್ ಹಿಟ್ ಸಿನಿಮಾಗಲಲ್ಲಿ ಚಿಕ್ಕಿ ಅಧ್ಬುತ ನಟನೆ ಜನರನ್ನ ಮೋಡಿ ಮಾಡಿದೆ. ಹೆಬ್ಬುಲಿ, ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ, ಅಂಜನಿ ಪುತ್ರ ರಾಜ್ ವಿಷ್ಣು, ದಳಪತಿ, ಕನ್ನಡಕ್ಕಾಗಿ ಒಂದನ್ನ ಒತ್ತಿ, ರ‍್ಯಾಂಬೋ 2 , ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ, ಒಡೆಯ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಚಿಕ್ಕಿ ಇದೀಗ ಇನ್ನೂ ಸಾಲು ಸಾಲು ಸಿನಿಮಾಗಲಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಪೊಗರು ಚಿತ್ರದಲ್ಲೂ ಚಿಕ್ಕಿ ಕಾಣಿಸಿಕೊಳ್ತಾಯಿದ್ದು, ಇದೀಗ ಹೀರೋ ಆಗಿಯೂ ಬಡ್ತಿ ಪಡೆದುಕೊಂಡಿದ್ದಾರೆ.

ಅವಾರ್ಡ್ಸ್

chikkanna
chikkanna

ಚಿಕ್ಕಿ ತಮ್ಮ ಅದ್ಭುತ ನಟನೆಯಿಂದಾಗಿ ಅನೇಕ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಜಾಹುಲಿ, ಅಧ್ಯಕ್ಷ, ಮಾಸ್ಟರ್ ಪೀಸ್ ಸಿನಿಮಾಗಳಿಗಾಗಿ ಸೈಮಾ ಬೆಸ್ಟ್ ಕಮಿಡಿಯನ್ ಆಕ್ಟರ್ ಅವಾರ್ಡ್ ಪಡೆದುಕೊಂಡಿದ್ದಾರೆ.ಹಾಸ್ಯದಿಂದಲೇ ಜನರ ಮನಸ್ಸಿಗೆ ಹತ್ತಿರವಾದ ‘ಚಿಕ್ಕಿ’ ಸಿನಿಜರ್ನಿ..!

chikkanna

ಲಾಕ್ ಡೌನ್ ಬಳಿಕ ನೇರವಾಗಿ ರಿಲೀಸ್ ಆಗುತ್ತಿರುವ ಕನ್ನಡದ ಹೊಸ ಸಿನಿಮಾ ಇದು..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: chikkannakannada filmSandalwood
ShareTweetSendShare
Join us on:

Related Posts

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

ಟಿಶ್ಯೂ ಪೇಪರ್ ರಾಜಕಾರಣಕ್ಕೆ ಅಂಬಿ ಪತ್ನಿ ಬಲಿ: ಜೆಡಿಎಸ್ ಸರ್ವನಾಶಕ್ಕೆ ಬಿಜೆಪಿ ಸ್ಕೆಚ್ ಎಂದ ಗಣಿಗ ರವಿಕುಮಾರ್

by Shwetha
June 9, 2026
0

ರಾಜ್ಯಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮಂಡ್ಯದ ರಾಜಕೀಯ ಅಖಾಡದಲ್ಲಿ ಈಗ ಹೊಸ ಕಿಚ್ಚು ಹೊತ್ತಿಕೊಂಡಿದ್ದು, ಸಂಸದೆ ಸುಮಲತಾ ಅಂಬರೀಷ್...

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

ಜೂ.11ಕ್ಕೆ ಸಿಎಂ ಡಿಕೆಶಿ-ಪ್ರಧಾನಿ ಮೋದಿ ಭೇಟಿ? ದೆಹಲಿ ಪ್ರವಾಸ ಸಾಧ್ಯತೆ

by Shwetha
June 9, 2026
0

ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜೂನ್ 11ರಂದು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿರುವ...

ಕಂದಾಯ ಇಲಾಖೆಯ ಚಾಣಕ್ಯನಿಗೆ ತಾರತಮ್ಯದ ಬಿಸಿ?  ಬಿಡಿಎ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆ ನನಗೇಕೆ? : ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಳ್ಳಲು ಕೃಷ್ಣಭೈರೇಗೌಡ ಹಿಂದೇಟು

ಕಂದಾಯ ಇಲಾಖೆಯ ಚಾಣಕ್ಯನಿಗೆ ತಾರತಮ್ಯದ ಬಿಸಿ? ಬಿಡಿಎ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆ ನನಗೇಕೆ? : ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಳ್ಳಲು ಕೃಷ್ಣಭೈರೇಗೌಡ ಹಿಂದೇಟು

by Shwetha
June 9, 2026
0

ರಾಜ್ಯ ರಾಜಕಾರಣದಲ್ಲಿ ಖಾತೆ ಹಂಚಿಕೆಯ ಕಿಚ್ಚು ಮತ್ತೆ ಜೋರಾಗಿದೆ. ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವ ಕೃಷ್ಣಭೈರೇಗೌಡ ಅವರು ತಮಗೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಬಗ್ಗೆ ತೀವ್ರ...

ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ತುರ್ತು ಎಚ್ಚರಿಕೆ

ಇರಾನ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ತುರ್ತು ಎಚ್ಚರಿಕೆ

by Shwetha
June 9, 2026
0

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ಗೆ ಪ್ರಯಾಣ ಮಾಡದಂತೆ ಭಾರತೀಯರಿಗೆ ತುರ್ತು ಸಲಹೆ ನೀಡಲಾಗಿದೆ. ಭಾರತ ಸರ್ಕಾರದ ರಾಯಭಾರ ಕಚೇರಿ ಈ...

ಸುರ್ಜೇವಾಲ ಉರುಫ್ ವಸೂಲಿವಾಲ ಎಂದ ಜೆಡಿಎಸ್: ಎನ್ ಡಿ ಎ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೈ ಮತ್ತು ದಳ ನಡುವೆ  ಟ್ವೀಟ್ ಫೈಟ್

ಸುರ್ಜೇವಾಲ ಉರುಫ್ ವಸೂಲಿವಾಲ ಎಂದ ಜೆಡಿಎಸ್: ಎನ್ ಡಿ ಎ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೈ ಮತ್ತು ದಳ ನಡುವೆ ಟ್ವೀಟ್ ಫೈಟ್

by Shwetha
June 9, 2026
0

ಕರ್ನಾಟಕದ ರಾಜಕೀಯ ವಲಯದಲ್ಲಿ ಈಗ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣಾ ಕಣವು ರಣರಂಗವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ನಿರಾಳವಾಗಿದ್ದರೆ, ಬಿಜೆಪಿ ತನ್ನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram