Rahul Gandhi to visit Wayanad on Monday
ತಿರುವನಂತಪುರಂ : ತಮ್ಮ ಕ್ಷೇತ್ರದಲ್ಲಿ ಕೋವಿಡ್ ಸೋಂಕಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul Gandhi ) ಕೇರಳದ ವಯನಾಡಿಗೆ ಇದೇ 19 ರಿಂದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಈ ಪ್ರವಾಸದ ವೇಳೆ ರಾಹುಲ್ ಗಾಂಧಿ ತಮ್ಮೆಲ್ಲ ಕಾರ್ಯಕ್ರಮಗಳ ನಂತರ ಮರಳಿ ರಾತ್ರಿ ಕಲ್ಪೆಟ್ಟದಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲೇ ತಂಗಲಿದ್ದಾರೆ.
ಅಕ್ಟೋಬರ್ 19 ರಂದು ದೆಹಲಿಯಿಂದ ಕೋಝಿಕೋಡ್ ಗೆ ವಿಶೇಷ ವಿಮಾನದಲ್ಲಿ ಆಗಮಿಸಲಿರುವ ರಾಹುಲ್, ಅಲ್ಲಿಂದ ಮಲ್ಲಪ್ಪುರಂಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೋವಿಡ್-19ರ ಬಗ್ಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ : ಕಾಮಧೇನು ಆಯೋಗದಿಂದ ಗೋವಿನ ಸಗಣಿಯ ಚಿಪ್ ಅನಾವರಣ
ಆನಂತರ ಕಲ್ಪೆಟ್ಟದಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲೇ ರಾತ್ರಿ ತಂಗಲಿದ್ದಾರೆ.
ಅಕ್ಟೋಬರ್ 20ರಂದು ಕುರಿತು ವಯನಾಡ್ ಕಲೆಕ್ಟರೇಟ್ ನಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಅ.21ರಂದು ಮನಂತವಾಡಿಗೆ ಭೇಟಿ ನೀಡಿ ಅಲ್ಲಿನ ಜಿಲ್ಲಾ ಆಸ್ಪತ್ರೆಗೆ ತೆರಳಿ ಅಲ್ಲಿನ ದೊರೆಯುತ್ತಿರುವ ಸೌಲಭ್ಯಗಳು ಪರಿಶೀಲನೆ ನಡೆಸಲಿದ್ದಾರೆ.
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂದಿನ ಎರಡೂವರೆ ತಿಂಗಳು ನಿರ್ಣಾಯಕ – ಹರ್ಷ್ ವರ್ಧನ್
ನಂತರ ಕಣ್ಣೂರು ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್ಸಾಗಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










