ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಋಣಾನುಬಂಧ

Shwetha by Shwetha
October 18, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv story episode 1
Share on FacebookShare on TwitterShare on WhatsappShare on Telegram

ಋಣಾನುಬಂಧ Saakshatv story episode 1

ಎರಡು ಗಂಡು ಮಕ್ಕಳ ನಂತರ ಹುಟ್ಟಿದವಳೇ ಲಲಿತ . ಮೊದಲೇ ಹೆಣ್ಣು ಮಗು ಬೇಕೆನ್ನುವ ತುಳುವರ ಮನೆಯಲ್ಲಿ ಹೆಣ್ಣು ಹುಟ್ಟಿದರೆ, ಸಂಭ್ರಮವಾಗದೆ ಇರುವುದೇ. Saakshatv story episode 1

Related posts

ecchara-5-rashigalige-shani-kata-mooru-dina-astrology-kannada

Astro-ಎಚ್ಚರ.. ಎಚ್ಚರ.. ನಾಳೆಯಿಂದ ಮೂರು ದಿನ ಈ 5 ರಾಶಿಯವರಿಗೆ ಶನಿಕಾಟ..!

August 2, 2026
84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

August 2, 2026

Marriage episode 1

ಆದರೆ ಕುಂಡಲಿ ಬರೆದ ಜ್ಯೋತಿಷಿ ಹೇಳಿದ ಮಾತು, ಮನಸ್ಸಿಗೆ ಅಶಾಂತಿ ಉಂಟು ಮಾಡಿತು. ಈ ಜಾತಕದವರಿಗೆ ಎರಡು ಮದುವೆ ಆಗುವುದು, ಎಂದು ಹೇಳಿದ ಮಾತು ತಂದೆ ರಾಮಣ್ಣನಿಗೆ ಸ್ವಲ್ಪ ದುಃಖ ಉಂಟು ಮಾಡಿತು. ಆದರೂ ಸಿರಿ ಸಂಪತ್ತು ತುಂಬಿದ ಮನೆಯಲ್ಲಿ ಸುಖವಾಗಿ ಬೆಳೆದು ದೊಡ್ಡವಳಾದಳು. ಈಗ ಮದುವೆಯ ಚಿಂತೆ, ಜಾತಕದಲ್ಲಿ ಬರೆದ ವಿಷಯವನ್ನು ಯಾರಿಗೂ ತಿಳಿಸದೇ, ಉತ್ತಮವಾದ ವರನನ್ನು ಹುಡುಕಲು ಪ್ರಾರಂಭಿಸಿದರು.

ವಧು ವರರ ಅನ್ವೇಷಣೆಯ ವೆಬ್ ಸೈಟ್ ನಲ್ಲೂ ಹುಡುಕಲು ಪ್ರಾರಂಭಿಸಿದರು. ಕಡೆಗೂ ಒಬ್ಬ ಹುಡುಗನ ಪ್ರೊಫೈಲ್ ಇವರಿಗೆ ಒಪ್ಪಿಗೆಯಾಯಿತು . ಕೇಂದ್ರ ಸರಕಾರದ ಹಣಕಾಸು ವಿಭಾಗದಲ್ಲಿ, ದೆಹಲಿಯಲ್ಲಿ ಕೆಲಸ. ಜ್ಯೋತಿಷಿಯ ಬಳಿ ಇಬ್ಬರ ಕುಂಡಲಿ ಹೊಂದಾಣಿಕೆ ಆಗುತ್ತದೆಯೇ ಎಂದು ಕೇಳಲು ಹೋದರು. ಅದೇ ಜ್ಯೋತಿಷಿ, ಎರಡೂ ಕುಂಡಲಿ ಉತ್ತಮವಾಗಿ ಹೊಂದಾಣಿಕೆ ಆಗಿದೆ , ನೂರಾರು ಕಾಲ ಸುಖವಾಗಿ ಬಾಳುತ್ತಾರೆ ಎಂದರು. ಆದರೆ ಮಗಳು ಮಾತ್ರಾ ನನ್ನೊಟ್ಟಿಗೆ ಕಲಿಯುತ್ತಿರುವ ರಮೇಶನನ್ನು ಮದುವೆಯಾಗುವುದಾಗಿ ಹಠ ಹಿಡಿದಳು .

Saakshatv story episode 1

ರಮೇಶ ಟ್ರಾಫಿಕ್ ಹವಾಲ್ದಾರನಾಗಿ ಸರಕಾರಿ ಕೆಲಸದಲ್ಲಿ ಇದ್ದನು.ಆದರೆ ರಾಮಣ್ಣ ಮಾತ್ರ ಮಗಳು ಲಲಿತಾಳ ಯಾವುದೇ ಮಾತಿಗೆ ಬೆಲೆ ಕೊಡದೆ, ದೆಹಲಿಯವನೊಟ್ಟಿಗೆ ಮಾತುಕಥೆ ಮುಂದುವರಿಸಿದರು. ಹುಡುಗ ಹುಡುಗಿ ನೋಡಲು ದೆಹಲಿಗೆ ಬರಲು ಹೇಳಿದರು. ಇವರು ಊರಿಗೆ ಬನ್ನಿ ಎನ್ನುತ್ತಾ, ಕಡೆಗೆ ಬೆಂಗಳೂರಲ್ಲಿ ಹೆಣ್ಣು ನೋಡುವ ಶಾಸ್ತ್ರ ಇಡಲಾಯಿತು. ಫೈವ್ ಸ್ಟಾರ್ ಹೋಟೆಲ್ ನಲ್ಲಿ ನೋಡಿ ಒಪ್ಪಿಗೆಯೂ ಆಯಿತು. ಆದರೆ ಅವರು ಮದುವೆ ಮಾತ್ರ ದೆಹಲಿಯಲ್ಲೇ ಆಗಬೇಕೆಂದರು. ಕಡೆಗೂ ಮದುವೆ ಮಂಗಳೂರಿನಲ್ಲಿ, ರಿಸೆಪ್ಶನ್ ದೆಹಲಿಯಲ್ಲಿ ಒಂದು ವಾರದ ನಂತರ ಮಾಡುವುದೆಂದು ನಿರ್ಧರಿಸಲಾಯಿತು.

ಕೊರೋನಾದಿಂದಾಗಿ ಹೆಚ್ಚು ಮಂದಿ ನಾವು ಬರುವುದಿಲ್ಲ, ಕೇವಲ ಮದುವೆಗೆ ಹತ್ತು ಮಂದಿ ಮಾತ್ರ ಬರುತ್ತೇವೆ.ಮತ್ತು ಕಡಿಮೆಯೆಂದರೂ ನೂರು ತೊಲ ಚಿನ್ನ ಹಾಕಬೇಕೆಂದರು. ಎಲ್ಲವನ್ನು ಒಪ್ಪಿದ ರಾಮಣ್ಣ ಬಹಳಷ್ಟು ಖುಷಿಯಲ್ಲಿದ್ದರು . ಅವರಿಗಾಗಿ ಎರಡು ದಿನ ಮೊದಲೇ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಇಡಲಾಯಿತು. ರಮೇಶನೂ ಲಲಿತಾಳನ್ನು ತನಗೆ ಕೊಡಿ ಎಂದು ಎರಡು ಮೂರು ಸಾರಿ ಬಂದು ಕೇಳಿದ. ಆದರೆ ಲಲಿತಾಳ ತಂದೆ ತಿರಸ್ಕರಿಸಿ, ಅವನನ್ನು ಮದುವೆಗೆ ಕರೆಯಬಾರದೆಂದು ಮಗಳಿಗೆ ಒತ್ತಿ ಹೇಳಿದರು.

Saakshatv story episode 1

ಲಲಿತಾಳ ಮದುವೆ ಮಾಧವನೊಟ್ಟಿಗೆ ವಿಜೃಂಭಣೆಯಿಂದ ಜರುಗಿತು. ಲಲಿತಾಳ ಬಹಳಷ್ಟು ಗೆಳತಿಯರು ಫೇಸ್ಬುಕ್ ಮತ್ತು ಇತರ ಸಾಮಾಜಿಕ ತಾಣಗಳಲ್ಲಿ ಮದುವೆಯ ಲೈವ್ ಕೊಟ್ಟರು. ಒಬ್ಬಳೇ ಮಗಳ ಮದುವೆಗೆ ಕೋಟಿ ಕೋಟಿ ಬೆಲೆಯ ಚಿನ್ನ ಹಾಕಿದ್ದರು. ಮದುವೆ ಮುಗಿದ ನಂತರ ಮಗಳನ್ನು ಅವರೊಟ್ಟಿಗೆ ಕಳುಹಿಸಿದರೂ, ಮನಸ್ಸಲ್ಲಿ ಮಾತ್ರ ಅವಳ ಜಾತಕದ ಬಗ್ಗೆ ಚಿಂತೆ ಇತ್ತು. ಮರುದಿನ ಮಗಳು ಅವರೊಟ್ಟಿಗೆ ದೆಹಲಿಗೆ ಹೋಗುವವಳಿದ್ದಳು .ರಾತ್ರಿ ಹೋಟೆಲಿಗೆ ಹೋಗಿ ಮಗಳನ್ನು ನೋಡುವುದೆಂದು, ಮನೆಯವರಿಗೆ ಹೇಳುತ್ತಾ ಮನೆಗೆ ಹಿಂತಿರುಗಿದರು.

ರಮೇಶ ದುಃಖದಿಂದ ಫೇಸ್‌ಬುಕ್‌ ನಲ್ಲಿ ತನ್ನ ಪ್ರಿಯತಮೆಯ ಮದುವೆ ನೋಡುತ್ತಾ ಡ್ಯೂಟಿ ಮಾಡುತಿದ್ದ. ಪೊಲೀಸರು ನಾಕಾಬಂದಿ ಮಾಡಿದ್ದರು. ಎಲ್ಲ ಗಾಡಿಯನ್ನು ಸರಿಯಾಗಿ ಪರಿಶೀಲಿಸಿ ಬಿಡಬೇಕೆಂದು, ಮೇಲಿನ ಅಧಿಕಾರಿಗಳ ಆಜ್ಞೆಯಾಗಿತ್ತು. ಆಗ ಒಂದು ಹೊಸ ಕಾರ್ ವೇಗಾವಾಗಿ ಬಂತು. ಹಾಗೆ ಮುಂದೆ ಬಿಡುವವನಿದ್ದ. ಆದರೂ ಡ್ರೈವಿಂಗ್ ಲೈಸನ್ಸ್ ಪರಿಶೀಲಿಸಲು ಅವನ ಡ್ರೈವಿಂಗ್ ಲೈಸನ್ಸ್ ತೆಗೆದು ಕೊಂಡ.

ಅವನು ಅದರೊಟ್ಟಿಗೆ ಎರಡು ಸಾವಿರದ ನೋಟು ಕೊಟ್ಟು ಬೇಗ ಬಿಡಲು ಹೇಳಿದ. ಇವನಿಗಂತೂ ವಿಸ್ಮಯ. ಎಲ್ಲವೂ ಸರಿಯಾಗಿದ್ದರೂ , ಇವನೇಕೆ ಹಣ ಕೊಡುತ್ತಿದ್ದಾನೆ. ಸರಿಯಾಗಿ ಅವನ ಮುಖ ನೋಡಿದ, ಎಲ್ಲೊ ನೋಡಿದ ಹಾಗಿದೆಯಲ್ಲ ಎಂದು ನೆನಪು ಮಾಡುತ್ತಾ ಮೇಲಧಿಕಾರಿಗಳ ಬಳಿಗೆ ಅವನು ಕೊಟ್ಟ ಪೇಪರ್ ಕೊಂಡು ಹೋದ. ಆಗ ವಾಟ್ಸಾಪ್ ನಲ್ಲಿ ಮೆಸೇಜ್ ಬಂತು.‌ ಲಲಿತಾಳ ಮದುವೆಯ ಫೋಟೋವನ್ನು ಗೆಳೆಯ ಕಳುಹಿಸಿದ್ದ. ಅವನು ಖುಷಿಯಲ್ಲಿ ಕಳುಹಿಸಿದ್ದ ಅಥವಾ ದುಃಖದಲ್ಲಿ ಕಳುಹಿಸಿದ್ದ ಎಂದು ಗೊತ್ತಾಗಲಿಲ್ಲ. ಲಲಿತಾಳ ಒಟ್ಟಿಗೆ ಇದ್ದವನ ಫೋಟೋ ನೋಡಿದವನಿಗೆ ಆಶ್ವರ್ಯ .. ಕೈಯಲ್ಲಿ ಇರುವ ಡ್ರೈವಿಂಗ್ ಲೈಸನ್ಸ್ ನ ಫೋಟೋ ಮತ್ತು ಫೋಟೋದಲ್ಲಿ ಇರುವ ವ್ಯಕ್ತಿ ಒಂದೇ ತೋರುತಿತ್ತು.

Police checking

ಆದರೆ ಲೈಸೆನ್ಸ್ ನಲ್ಲಿ ಹೆಸರು ಪ್ರವೀಣ್ ಆಗಿತ್ತು. ಮೆಲ್ಲನೆ ಮೇಲಧಿಕಾರಿಗೆ ತಿಳಿಸಿದ. ಅವರು ನೋಡಿದರು, ಅವರಿಗೆ ಇವನ ಸಂಶಯ ಸರಿಯೆನಿಸಿತು. ಕೂಡಲೇ ಕಾರನ್ನು ಮುತ್ತಿ, ತಪಾಸಣೆ ಮಾಡಿದಾಗ , ಚಿನ್ನ ತುಂಬಿದ ಬ್ಯಾಗ್ ಸಿಕ್ಕಿತು. ಸರಿಯಾಗಿ ವಿಚಾರಣೆ ಮಾಡಿದಾಗ, ಅವರು ಲಲಿತಳಿಗೆ ಅಮಲು ಪದಾರ್ಥ ಕೊಟ್ಟು , ಚಿನ್ನವನ್ನು ಕದ್ದುಕೊಂಡು ಓಡಿ ಹೋಗುತಿದ್ದರು. ಈ ರೀತಿ ಮದುವೆಯಾಗಿ ಕಳ್ಳತನ ಮಾಡುವುದು ಇವರ ಕಸುಬಾಗಿತ್ತು. ಮೊದಲ ಬಾರಿ ಸಿಕ್ಕಿ ಬಿದ್ದಿದ್ದರು. ಆಗ ಮಾಧವ ಇವರ ಕಣ್ಣುತಪ್ಪಿಸಿ ಓಡತೊಡಗಿದ. ಎದುರಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯ ಕೆಳಗಡೆ ಬಿದ್ದು ಸತ್ತ.

ರಮೇಶನಿಗೆ ಲಲಿತಾಳ ಚಿಂತೆ ಪ್ರಾರಂಭವಾಯಿತು. ಮೇಲಧಿಕಾರಿಗೆ ಹೇಳಿ, ಲಲಿತ ಇದ್ದ ಹೋಟೆಲಿಗೆ ಬೈಕ್ ನಲ್ಲಿ ವೇಗವಾಗಿ ಹೊರಟ. ಹೋಗುವ ಮೊದಲು ಲಲಿತಾಳ ತಂದೆಗೆ ವಿಷಯನ್ನು ತಿಳಿಸಿದ. ತಂದೆಯು ವೇಗವಾಗಿ ಕಾರನ್ನು ಓಡಿಸುತ್ತಾ ಹೋಟೆಲ್ ಗೆ ಬಂದರು. ವಿಷಯ ತಿಳಿದ ಹೋಟೆಲ್ ನವರು, ಕೋಣೆಯ ಬಾಗಿಲು ತೆರೆದರು. ರಮೇಶನು ಯಾರನ್ನು ಕೇಳದೆ ಲಲಿತಾಳನ್ನು ಎತ್ತಿಕೊಂಡು, ಎದುರಲ್ಲೇ ಇರುವ ಆಸ್ಪತ್ರೆಗೆ ಸೇರಿಸಿದ. ತಂದೆ ರಾಮಣ್ಣಗೆ ಜಾತಕದ ನೆನಪಾಯಿತು.
ಹದಿನಾರು ದಿನದ ನಂತರ ಮಗಳ ಎರಡನೇ ಮದುವೆ ರಮೇಶನೊಟ್ಟಿಗೆ ಮಾಡಿದರು.
ರಾಜು ಶೆಟ್ಟಿ

Tags: Marriagesaakshatv storyStory
ShareTweetSendShare
Join us on:

Related Posts

ecchara-5-rashigalige-shani-kata-mooru-dina-astrology-kannada

Astro-ಎಚ್ಚರ.. ಎಚ್ಚರ.. ನಾಳೆಯಿಂದ ಮೂರು ದಿನ ಈ 5 ರಾಶಿಯವರಿಗೆ ಶನಿಕಾಟ..!

by admin
August 2, 2026
0

ನಾಳೆಯಿಂದ ಮೂರು ದಿನ ಕೆಲ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಈ ದಿನ ಶನಿ ಹಾಗೂ ಚಂದ್ರನ ಸಂಯೋಗದಿಂದಾಗಿ ಅತ್ಯಂತ ಅಶುಭ ಯೋಗ ಸೃಷ್ಟಿಯಾಗಲಿದೆ. ಇದು ಕೆಲ...

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

by Shwetha
August 2, 2026
0

ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ...

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

by Shwetha
August 2, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್‌,...

‘ಟಾಕ್ಸಿಕ್’ ಟ್ರೇಲರ್‌ಗೆ ದಿನಾಂಕ ಫಿಕ್ಸ್; ಯಶ್ ಅಧಿಕೃತ ಘೋಷಣೆ

‘ಟಾಕ್ಸಿಕ್’ ಟ್ರೇಲರ್‌ಗೆ ದಿನಾಂಕ ಫಿಕ್ಸ್; ಯಶ್ ಅಧಿಕೃತ ಘೋಷಣೆ

by Shwetha
August 2, 2026
0

ನಟ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ 'ಟಾಕ್ಸಿಕ್' ಟ್ರೇಲರ್ ಲಾಂಚ್ ಕಾರ್ಯಕ್ರಮ...

ಸ್ವಾತಂತ್ರ್ಯ ಎಂದರೆ ಇಷ್ಟಬಂದಿದ್ದನ್ನು ಮಾಡುವುದಲ್ಲ, ಯುವ ಭಾರತಕ್ಕೆ ರಾಷ್ಟ್ರ ನಿರ್ಮಾಣದ ಪಾಠ ಮಾಡಿದ ಅಜಿತ್ ದೋವಲ್: ಸ್ವಾತಂತ್ರ್ಯದ ನಿಜವಾದ ಅರ್ಥ ವಿವರಿಸಿದ ಭದ್ರತಾ ಸಲಹೆಗಾರ.

ಸ್ವಾತಂತ್ರ್ಯ ಎಂದರೆ ಇಷ್ಟಬಂದಿದ್ದನ್ನು ಮಾಡುವುದಲ್ಲ, ಯುವ ಭಾರತಕ್ಕೆ ರಾಷ್ಟ್ರ ನಿರ್ಮಾಣದ ಪಾಠ ಮಾಡಿದ ಅಜಿತ್ ದೋವಲ್: ಸ್ವಾತಂತ್ರ್ಯದ ನಿಜವಾದ ಅರ್ಥ ವಿವರಿಸಿದ ಭದ್ರತಾ ಸಲಹೆಗಾರ.

by Shwetha
August 2, 2026
0

ಪುಣೆ: ದೇಶದ ಯುವಜನತೆಗೆ ಸ್ವಾತಂತ್ರ್ಯದ ನಿಜವಾದ ಅರ್ಥ ಮತ್ತು ಅದರೊಂದಿಗೆ ಬರುವ ಜವಾಬ್ದಾರಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಗಂಭೀರ ಎಚ್ಚರಿಕೆ ನೀಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram