ಹಾವೇರಿ : ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ ಹಿರೆಕೆರೂರಿನ ಐತಿಹಾಸಿಕ ದುರ್ಗಾದೇವಿ ಕೆರೆ ತುಂಬಿ ಹರಿಯುತ್ತಿದ್ದು, ಕೆರೆಗೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ( BC Patil ) ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಅವರ ಜೊತೆಗೂಡಿ ಬಾಗೀನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲರು, ದುರ್ಗಾದೇವಿ ಕೆರೆ ತಾಲೂಕಿಗೆ ಕಳಶಪ್ರಾಯವಾಗಿದ್ದು, ಈ ಬಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿರುವುದು ಸಂತಸ ತಂದಿದೆ.
ತಾಲೂಕಿನಲ್ಲಿ ಇದೇ ರೀತಿ ಜನತೆ ಸಂಪದ್ಭರಿತವಾಗಿ ಆರೋಗ್ಯದಿಂದ ಇರಲಿ. ಕೊರೊನಾ ಸಂಕಷ್ಟ ಆದಷ್ಟು ಬೇಗ ತೊಲಗಿ ಜನರು ನೆಮ್ಮದಿಯಿಂದ ಬಾಳುವಂತಾಗಲೆಂದು ಪ್ರಾರ್ಥಿಸಿದರು.
ಇದನ್ನೂ ಓದಿ : ಸಿಸಿಬಿ ಪೊಲೀಸರಿಂದ ಮತ್ತೊಂದು ಬೇಟೆ; ಡ್ರಗ್ಸ್ ಜಾಲದ ಮಾದಕ ದೊರೆ `ವಿಟಿ’ ಅರೆಸ್ಟ್
ಈ ಸಂದರ್ಭದಲ್ಲಿ ತಾ.ಪಂ,ಜಿ.ಪಂ.ಸದಸ್ಯರು ತಾಲೂಕಿನ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel