ಕೊಪ್ಪಳ: ಚಿತ್ರಸಾಹಿತಿ, ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಹುಳಿ ಹಿಂಡಿ, ಪತ್ನಿಯಿಂದ ವಿಚ್ಛೇದನಕ್ಕೆ ಕುಮ್ಮಕ್ಕು ನೀಡಿದ್ದ ಆರೋಪಿ ಹಾಗೂ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಗಾ ಕುಲಕರ್ಣಿ ನಿಜವಾದ ಹೆಸರು ಜ್ಯೋತಿ ಕುಲಕರ್ಣಿ. ಈಕೆ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದು ಮಾತ್ರವಲ್ಲದೆ, ಹಲವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಟೋಪಿ ಹಾಕಿದ ಅರೋಪ ಎದುರಿಸುತ್ತಿದ್ದಳು.
ಈ ಹಿನ್ನೆಲೆಯಲ್ಲಿ ಕೊಪ್ಪಳದ ಕುಷ್ಟಗಿಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಹಲವು ವಂಚನೆ ಕೇಸ್ಗಳು ದಾಖಲಾಗಿದ್ದವು. 2017ರಿಂದ ಕುಷ್ಟಗಿ ಕೋರ್ಟ್ಗೆ ವಿಚಾರಣೆಗೆ ಹಾಜರಾಗುತ್ತಿದ್ದ ಗಂಗಾ ಕುಲಕರ್ಣಿ, ಕಲ್ಯಾಣ್ ಪತ್ನಿ ಅಶ್ವಿನಿ ನಾಪತ್ತೆಯಾದ ನಂತರ ಕೋರ್ಟ್ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಗೀತಾ ಕುಲಕರ್ಣಿ ವಿರುದ್ಧ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ ನ್ಯಾಯಾಲಯದಲ್ಲಿ ತಮ್ಮ ಪರ ವಕೀಲರನ್ನು ಭೇಟಿಯಾಗಲು ಬಂದಿದ್ದಳು. ಕುಷ್ಟಗಿಗೆ ಬಂದ ಗಂಗಾ ಕುಲಕರ್ಣಿ ವಿಷಸೇವನೆ ಮಾಡಿಕೊಂಡೇ ಕೋರ್ಟ್ಗೆ ಬಂದಿದ್ದಳು. ವಿಷದ ತೀವ್ರತೆ ಹೆಚ್ಚುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

20 ಜನರಿಂದ ಲಕ್ಷ ಲಕ್ಷ ಪೀಕಿ ವಂಚಿಸಿದ್ದ ಗಂಗಾ ಕುಲಕರ್ಣಿ..
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಗಂಗಾ ಕುಲಕರ್ಣಿ ವಂಚನೆ ಮಾಡಿದ್ದಳು. ಕೆಲಸ ಕೊಡಿಸುವುದಾಗಿ ನಂಬಿಸಿ ತಲಾ ಒಬ್ಬರಿಗೆ 3 ಲಕ್ಷದಂತೆ ಸುಮಾರು 20 ಜನರಿಂದ ಹಣ ಪೀಕಿದ್ದ ಟೋಪಿ ಹಾಕಿದ್ದಳಂತೆ. ಇವರಲ್ಲಿ ಕುಷ್ಟಗಿ ತಾಲೂಕಿನ ಸಂತೋಷ್ ಕುಲಕರ್ಣಿ ಎಂಬುವರಿಂದ 3 ಲಕ್ಷ ಪಡೆದು ವಂಚನೆ ಮಾಡಿದ್ದಳಂತೆ. ಈ ಸಂಬಂಧ 2016ರಲ್ಲೇ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಕುಷ್ಟಗಿ ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ್, ಪ್ರಕರಣದ ತನಿಖೆ ನಡೆಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಗಂಗಾ ಕುಲಕರ್ಣಿ ಸಾಮಾನ್ಯ ಮಹಿಳೆ ಅಲ್ಲ ಎಂದು ಚಾರ್ಜ್ಶೀಟ್ನಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ ಉಲ್ಲೇಖಿಸಿದ್ದಾರೆ.
ಡೆತ್ನೋಟ್ನಲ್ಲಿ ಪಶ್ಚಾತ್ತಾಪ..!
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಗಾ ಕಲುಕರ್ಣಿ ಡೆತ್ನೋಟ್ ಬರೆದಿದ್ದಾಳೆ. ಮರಾಠಿಯಲ್ಲಿ ಡೆತ್ನೋಟ್ ಬರೆದಿರುವ ಗಂಗಾಕುಲರ್ಣಿ, ನನ್ನ ಕರ್ಮಕ್ಕೆ ನನಗೆ ಶಿಕ್ಷೆ ಆಗಿದೆ. ನನ್ನ ಮೇಲೆ ಹಲವು ಕೇಸ್ಗಳಾಗಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಮಕ್ಕಳನ್ನು ನೀವೇ ನೋಡಿಕೊಳ್ಳಿ ಎಂದು ವಕೀಲರು ಹಾಗೂ ನ್ಯಾಯಾಧೀಶರನ್ನು ಉಲ್ಲೇಖಿಸಿ ಮನವಿ ಮಾಡಿದ್ದಾಳೆ.

ಕೆ.ಕಲ್ಯಾಣ್ ಕುಟುಂಬದಲ್ಲಿ ಹುಳಿ ಹಿಂಡಿದ್ದ ಗಂಗಾ ಕಲುಕರ್ಣಿ
ಕೆ.ಕಲ್ಯಾಣ್ರ ಬೆಂಗಳೂರು ಮನೆಯಲ್ಲಿ ಗಂಗಾ ಕುಲಕರ್ಣಿ ಮನೆಗೆಲಸಕ್ಕೆ ಸೇರಿದ್ದಳು. ಈ ವೇಳೆ ಕಲ್ಯಾಣ್ ಪತ್ನಿ ಅಶ್ವಿನಿ ಅವರ ವಿಶ್ವಾಸ ಗಳಿಸಿದ್ದ ಗಂಗಾ ಕುಲಕರ್ಣಿ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಜ್ಯೋತಿಷಿ ಶಿವಾನಂದ ವಾಲಿ ಜೊತೆ ಸೇರಿಕೊಂಡು 19 ಲಕ್ಷ ರೂ. ತನ್ನ ಅಕೌಂಟ್ಗೆ ವರ್ಗಾವಣೆ ಮಾಡಿಸಿಕೊಂಡಿದ್ದಳು. ನಂತರ ಕಲ್ಯಾಣ್ರಿಂದ ಪತ್ನಿ ಅಶ್ವಿನಿಯನ್ನು ದೂರಮಾಡಿ ಬೆಳಗಾವಿಗೆ ಕರೆದೊಯ್ದು ಪ್ರತ್ಯೇಕ ಮನೆ ಮಾಡಿಸಿದ್ದರು. ಅಲ್ಲಿದ್ದುಕೊಂಡೇ ಅಶ್ವಿನಿ, ತಂದೆಯ ಆಸ್ತಿಯನ್ನೆಲ್ಲಾ ಶಿವಾನಂದ ವಾಲಿ ಹೆಸರಿಗೆ ಮಾಡಿಸಿಕೊಂಡಿದ್ದಲ್ಲದೆ, ಶಿವಾನಂದ ವಾಲಿ ಜತೆ ಸೇರಿಕೊಂಡು ಅಶ್ವಿನಿಯಿಂದ ಕಲ್ಯಾಣ್ಗೆ ಡೈವೋರ್ಸ್ ಅರ್ಜಿ ಹಾಕಿಸಿದ್ದಳು.
ಪತ್ನಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಕೆ.ಕಲ್ಯಾಣ್ ನೀಡಿದ ದೂರಿನ ಮೇರೆಗೆ ಬೆಳಗಾವಿಯ ಮಾಳಮಾರುತಿ ಪೊಲೀಸರು ಗಂಗಾ ಕುಲಕರ್ಣಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








