ಶ್ರೀ ರಾಮುಲು ( Sri Ramulu DCM ) ಡಿಸಿಎಂ ಕನಸು ಆದಷ್ಟು ಬೇಗ ನನಸಾಗುತ್ತೆ : ಸೋಮಶೇಖರ್ ರೆಡ್ಡಿ
ಬಳ್ಳಾರಿ : ಸಚಿವ ಶ್ರೀರಾಮುಲು ಅವರ ಉಪಮುಖ್ಯಮಂತ್ರಿ ಕನಸು ಆದಷ್ಟು ಬೇಗ ನನಸಾಗುತ್ತದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕೆಂಬ ಬೇಡಿಕೆ ಕೇಳಿಬರುತ್ತಲೇ ಇದೆ.
2018ರ ವಿಧಾನಸಭಾ ಚುನಾವಣೆ ವೇಳೆ ಮೋದಿ ಸಮೇತರಾಗಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ಬಿಜೆಪಿ ಘಟಾನುಘಟಿ ನಾಯಕರು ವಾಲ್ಮಿಕಿ ಸಮುದಾಯದ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಮಾತುಕೊಟ್ಟಿದ್ದರು.
ಆ ಮೂಲಕ ಆ ಸಮುದಾಯದ ಮತದಾರರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಚುನಾವಣೆ ಫಲಿತಾಂಶ ಅತಂತ್ರವಾದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು.
ಕಾಲಾನಂತರದಲ್ಲಿ ದೋಸ್ತಿ ಸರ್ಕಾರ ಬಿದ್ದು ಬಿಜೆಪಿ ಅಧಿಕಾರಕ್ಕೆ ಬಂತು. ಕೇಸರಿ ಪಡೆ ಅಧಿಕಾರಕ್ಕೆ ಬರುತ್ತಿದ್ದಂತೆ ರಾಮುಲು ಅವರನ್ನು ಡಿಸಿಎಂ ಮಾಡ್ತಾರೆ ಎಂಬ ಸುದ್ದಿ ಗಾಳಿ ವೇಗದಲ್ಲಿ ಹರಿಡಿತ್ತು.
ಆದ್ರೆ ದೆಹಲಿ ವರಿಷ್ಠರು ರಾಮುಲು ಅವರ ಕಡೆ ಕರುಣೆ ತೋರಲಿಲ್ಲ. ಬದಲಾಗಿ ಚುನಾವಣೆಯಲ್ಲಿ ಸೋತಿದ್ದವರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡ್ತು. ಇದು ಸಹಜವಾಗಿಯೇ ರಾಮುಲು ಅವರ ಬೆಂಬಲಿಗರ ಕೆಂಗಣ್ಣಿಗೆ ಕಾರಣವಾಯ್ತು.
ಉಪಚುನಾವಣೆ ಬಳಿ ಸಂಪುಟಕ್ಕೆ ಸರ್ಜರಿ
ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದಂತೆ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಲಿದೆ. ಈ ವೇಳೆ ಖಂಡಿತವಾಗಿಯೂ ರಾಮುಲು ಅವರಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಂತಹದೊಂದು ಸಣ್ಣ ಸುಳಿವನ್ನು ಕೂಡಿ ಬಿಎಸ್ ವೈ ನೀಡಿದ್ದಾರೆ.
ಇದನ್ನೂ ಓದಿ : ಬಿಎಸ್ವೈ 3 ವರ್ಷ ಸಿಎಂ ಆಗಿರ್ತಾರಂತ ಹೇಳೊಕಾಗಲ್ಲ: ರಾಜಾಹುಲಿಗೆ ಮತ್ತೆ ತಿವಿದ ಯತ್ನಾಳ್
ಸಂಪುಟ ವಿಸ್ತರಣೆ ಬಗ್ಗೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ವಿಚಾರ ಸಂಬಂಧ ಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತುಕತೆ ನಡೆಸಿ ಬರುತ್ತೇನೆ. ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇನೆ. ಚುನಾವಣೆ ಮುಗಿದ ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ ಎಂದಿದ್ದಾರೆ.
ಇದೇ ವಿಚಾರವಾಗಿ ಇಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ಶ್ರೀ ರಾಮುಲು ಡಿಸಿಎಂ ಆಗಬೇಕೆಂಬುದು ಬಹುದಿನಗಳ ಬೇಡಿಕೆ, ಎಲ್ಲರ ಕನಸೂ ಕೂಡ, ಅದು ಆದಷ್ಟು ಬೇಗ ನನಸಾಗುತ್ತದೆ ಅನ್ನೋದು ನನಗೆ ವಿಶ್ವಾಸ ಇದೆ. ಈ ಕುರಿತು ನಮ್ಮ ಬಿಜೆಪಿ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ರಾರಾ ಕುರುಕ್ಷೇತ್ರದಲ್ಲಿ ಇಂದು `ರಾಜಾಹುಲಿ’ ಘರ್ಜನೆ
ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿ ಮುಖ್ಯಮಂತ್ರ ಬದಲಾವಣೆ ಯಾವುದೇ ಕಾರಣಕ್ಕೂ ಆಗೋಲ್ಲಾ. ನಮ್ಮ ಸರ್ಕಾರ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಯಡಿಯೂರಪ್ಪ ಸರ್ ಅವರೇ, ಸಿಎಂ ಆಗಿರ್ತಾರೆ.
ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ಜೊತೆಗೆ ಎಲ್ಲಾ ಎಂಎಲ್ಸಿ ಚುನಾವಣೆಯೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಗಿಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel