Sandalwood
ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ದಿನಗಳೆದಂತೆಲ್ಲಾ ಹೊಸ ಹೊಸ ಪ್ರಯತ್ನಗಳು ಜನರ ಗಮನ ಸೆಳೆಯುತ್ತಿದೆ. ಇದೀಗ ಚಂದನವನದಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನ ನಡೆಯುತ್ತಿದೆ. ಅದೇನೆಂದ್ರೆ ಸ್ಯಾಮಡಲ್ ವುಡ್ ನ ಐದು ಖ್ಯಾತ ನಿರ್ದೇಶಕರು ಒಂದೇ ಸಿನಿಮಾಗಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಎಸ್ ಈ ಸುದ್ದಿ ಸದ್ಯ ಇದೀಗ ಭಾರೀ ಸದ್ದು ಮಾಡ್ತಿದೆ. ವಿಶೇಷ ಅಂದ್ರೆ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಇಂಥಹ ವಿಭಿನ್ನ ಪ್ರಯತ್ನಕ್ಕೆ ಕೈಹಾಕಲಾಗಿದೆ.
ಅಂದ್ಹಾಗೆ ಸ್ಟಾರ್ ನಿರ್ದೇಶಕರಾದ ಯೋಗರಾಜ್ ಭಟ್, ಕೆ.ಎಂ ಚೈತನ್ಯ, ಜಯತೀರ್ಥ, ಶಶಾಂಕ್ ಮತ್ತು ಪವನ್ ಕುಮಾರ್ ಅವರು ಆ ಒಂದು ಸಿನಿಮಾಗಾಗಿ ಒಂದಾಗ್ತಾಯಿದ್ದಾರೆ. ಪಕ್ಕಾ ಕಮರ್ಶಿಯಲ್ ಚಿತ್ರವಾಗಿರಲಿದೆಯಂತೆ ಈ ಚಿತ್ರ. ಇನ್ನೂ ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸವನ್ನು ಸಹ ಪ್ರಾರಂಭಿಸಿದ್ದಾರೆ. ನಿರ್ದೇಶಕರು.
ಅಲ್ಲದೇ ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭ ಮಾಡಲು ಸಹ ಜ್ಜಾಗಿದ್ದಾರೆ ಎನ್ನಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಸಿನಿಮಾ ಚಿತ್ರೀಕರಣ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎಂದು ಸಹ ತಿಳಿದುಬಂದಿದೆ. ಇನ್ನೂ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಬಾಕಿಯಿದೆ. ಇನ್ನೂ ಈ ಹಿಂದೆ ಈ ಪ್ರಯತ್ನಕ್ಕೆ ಸನಿಹವೆಂಬಂತೆ ಕನ್ನಡದಲ್ಲಿ ರಿಷಬ್ ಶೆಟ್ಟಿ ನೇತೃತ್ವದಲ್ಲಿ 7 ಜನ ನಿರ್ದೇಶಕರ ಸಿನಿಮಾವನ್ನು ತಯಾರಿಸಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಕಿರು ಕಥೆಗಳನ್ನು ಸೇರಿಸಿ ಸಿನಿಮಾ ಮಾಡಲಾಗಿದೆ.
ಆದರೆ ಈ ಸಿನಿಮಾ ಬೇರೆಯದ್ದೇ ರೀತಿಯಲ್ಲಿರಲಿದೆ ಎನ್ನಲಾಗ್ತಿದೆ. 5 ಜನ ನಿರ್ದೇಶಕರು ಒಂದೊಂದು ಕಿರುಚಿತ್ರ ಸೇರಿಸಿ ಸಿನಿಮಾ ಮಾಡಬಹುದೇನೋ ಎಂಬ ಗುಮಾನಿಗಳು ಪ್ರಾರಂಭವಾಗಿವೆ. ಆದ್ರೆ ಸಿನಿಮಾದಲ್ಲಿ ಬೇರೆ ಬೇರೆ ಕಥೆಗಳಿದ್ದರೂ ಒಂದೊಂದುಕ್ಕೂ ಲಿಂಕ್ ಇರುತ್ತೆ ಎಂದು ಹೇಳಲಾಗುತ್ತಿದೆ.
ಕೋಮಲ್ ಅವರ ಮುಂದಿನ ಚಿತ್ರದ ಟೈಟಲ್ ಗೂ ‘ಕೊರೊನಾ’ಗೂ ಏನ್ ಸಂಬಂಧ..!
RR ನಗರ ‘ಉಪಸಮರ’: ಹಕ್ಕು ಚಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
Sandalwood
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel