ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ನಾವು ಸೋತಿದ್ದೇವೆ, ನಾನು ಫೇಲ್ಯುರ್ ಆಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಸೋತಿದ್ದೇನೆ,ಇದರ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಎರಡೂ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶೊ, ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆದ್ದಿದೆ. ಉಪಚುನಾವಣೆಯಲ್ಲಿ ಜನರು ನೀಡಿದ ತೀರ್ಪನ್ನು ಒಪ್ಪುತ್ತೇವೆ. ಜನರ ತೀರ್ಪನ್ನು ಪ್ರಶ್ನೆ ಮಾಡಲ್ಲ. ಯಾಕೆ ಹೀಗಾಯ್ತು ಅಂತ ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.
ಶಿರಾದಲ್ಲಿ ಬಿಜೆಪಿಗೆ 60 ಸಾವಿರ ಮತಗಳ ಲೀಡ್ ಸಿಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಮೊದಲ ಚುನಾವಣೆ ಸೋತವನೆ, ಆ ನಂತರ ನಿರಂತರವಾಗಿ ಗೆದ್ದಿರುವೆ. ಸೋಲು ಗೆಲುವಿನ ಮೆಟ್ಟಿಲು. ಶಿರಾದಲ್ಲಿ ಬಿಜೆಪಿಗೆ ಬಿದ್ದಿರುವ ಮತಗಳನ್ನು ಕಂಡು ನಂಗೂ ಆಶ್ಚರ್ಯ ಆಗಿದೆ. ಸರಕಾರದ ವಿರುದ್ದ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.
ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ನಮ್ಮ ನಾಯಕರ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟನೆ ನೀಡಿದ ಡಿಕೆಶಿ, ಸದ್ಯ ಆರ್.ಆರ್.ನಗರದಲ್ಲಿ ಕುಸುಮಾ ಒಳ್ಳೆಯ ಅಭ್ಯರ್ಥಿ. ಆದರೆ, ಅಂತರ ಇಷ್ಟು ದೊಡ್ಡದು ಇರುತ್ತದೆ ಎಂದುಕೊಂಡಿರಲಿಲ್ಲ. 10 ಸಾವಿರ ಅಂತರದಲ್ಲಿ ಕ್ಲೋಸ್ಫೈಟ್ ಇರುತ್ತೆ ಅಂತ ಭಾವಿಸಿದ್ದೆವು. ಆದರೆ, ಲೆಕ್ಕಾಚಾರ ತಪ್ಪಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel