ಚಿತ್ರದುರ್ಗ: ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸಂಪುಟ ವಿಸ್ತರೆನ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗುತ್ತಿದೆ.
ಕಳೆದ ವರ್ಷ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ಹೇರಿ ಕಾರ್ಯಕರ್ತರ ಮೂಲಕ ಗಲಾಟೆ ಮಾಡಿಸಿದ್ದ ಚಿತ್ರದುರ್ಗ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಮತ್ತೆ ಹಿರಿತನದ ದಾಳ ಉರುಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತಿಪ್ಪಾರೆಡ್ಡಿ, ನಾನು ಜಾತಿ ಆಧಾರದ ಮೇಲೆ ಮಂತ್ರಿ ಸ್ಥಾನ ಕೇಳುವುದಿಲ್ಲ. ನನ್ನ ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ನನಗೆ ಮಂತ್ರಿ ಸ್ಥಾನ ನೀಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ 1972ರಿಂದಲೂ ರಾಜಕಾರಣದಲ್ಲಿ ತೊಡಗಿಕೊಂಡಿರುವ ಮನೆತನ ಬಿಜೆಪಿ ಎಂಎಲ್ಎ ತಿಪ್ಪಾರೆಡ್ಡಿ ಅವರದ್ದು. ತಿಪ್ಪಾರೆಡ್ಡಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಇದುವರೆಗೂ ಅವರಿಗೆ ಮಂತ್ರಿ ಭಾಗ್ಯ ಮಾತ್ರ ಒಲಿದು ಬಂದಿಲ್ಲ.
22 ವರ್ಷಗಳ ಹಿಂದೆಯೇ ನಾನು ಕ್ಯಾಬಿನೆಟ್ ದರ್ಜೆಯಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಯ ಹಿರಿಯ ಶಾಸಕರಲ್ಲಿ ನಾನೂ ಒಬ್ಬ. ಸಚಿವ ಸ್ಥಾನಕ್ಕಾಗಿ ಕಿರಿಯ ಶಾಸಕರಂತೆ ಹೈಕಮಾಂಡ್ ಗೆ ದಂಬಾಲು ಬೀಳುವುದು ಕಿರಿಕಿರಿ ಎಂದು ನನಗೆ ಅನಿಸುತ್ತದೆ. ಇದುವರೆಗೆ ಮಧ್ಯ ಕರ್ನಾಟಕಕ್ಕೆ ಮಂತ್ರಿ ಸ್ಥಾನ ನೀಡಿಲ್ಲ.
ಬಿಜೆಪಿ ಸರ್ಕಾರ ಬಂದಾಗ ಕೆಲವರು ಮಂತ್ರಿಗಳಾಗಿರುತ್ತಾರೆ. ಮತ್ತೆ ಮತ್ತೆ ಅವರಿಗೆ ಅವಕಾಶ ಸಿಗುತ್ತಿದೆ. ಇದು ಅನೇಕ ವಂಚಿತ ಶಾಸಕರ ಅನಿಸಿಕೆಯಾಗಿದೆ. ಏನೂ ಕೆಲಸ ಮಾಡದವರು ಸಚಿವರಾಗಿದ್ದಾರೆ. ಇದು ಸಿಎಂ ಹಾಗೂ ಪಕ್ಷದ ಗಮನಕ್ಕೂ ಇದೆ. ಅಂತವರಿಗೆ ಪಕ್ಷ ಸಂಘಟನೆಗೆ ಜವಾಬ್ದಾರಿ ನೀಡಿ ಬೇರೆಯವರಿಗೆ ಅವಕಾಶನೀಡಬೇಕು ಇದರಲ್ಲಿ ತಪ್ಪೇನಿಲ್ಲ ಎಂದರು.
8-10 ಮಂದಿ ಹೊಸಬರಿಗೆ ಅವಕಾಶಮಾಡಿಕೊಟ್ಟರೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ. ನಾನು ದೆಹಲಿ ಹೈಕಮಾಂಡ್ ಹಾಗೂ ಸಿಎಂ ಬಳಿ ಹೋಗಿ ಲಾಬಿ ಮಾಡುವ ಎಲ್ಲೆ ಮೀರಿದ್ದೆನೆ. ದೇವರಾಜ್ ಅರಸದ ಅಭಿವೃದ್ಧಿನಿಗಮದ ಅಧ್ಯಕ್ಷರ ಸ್ಥಾನ ನಿರಾಕರಿಸಿದ್ದೆನೆ. ನಾನು ಆರು ಬಾರಿ ಶಾಸಕನಾಗಿ ಬೋರ್ಡ್ ಛೇರ್ಮನ್ ಆಗುವುದು ನನ್ನ ಗೌರವಕ್ಕೆ ಧಕ್ಕೆಯಾಗುತ್ತದೆ. ಪಕ್ಷ ಮತ್ತು ಸಿಎಂ ಬಳಿ ಪರಿಪರಿಯಾಗಿ ವಿನಂತಿ ಮಾಡುತ್ತೇನೆ. ಬಹಳ ಮಂದಿ ಅಭಿಪ್ರಾಯ ಇದೆ. 8-10 ಮಂದಿ ಹೊಸಬರಿಗೆ ಅವಕಾಶ ಮಾಡಿಕೊಡಿ. ಜಾತಿ ಆಧಾರದ ಮೇಲೆ ನಾನು ಮಂತ್ರಿ ಸ್ಥಾನ ಕೇಳುತ್ತಿಲ್ಲ. ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ನಾನು ಕೇಳುತ್ತಿದ್ದೇನೆ ಎಂದು ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel