ಕೊರೊನಾ ಹರಡದಂತೆ ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಜೊತೆಗೆ ಹೊರ ರಾಜ್ಯದಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ವಿದೇಶದಿಂದ ಬರುವವರನ್ನು 15 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಅದಕ್ಕಾಗಿ ವಿದೇಶದಿಂದ ಬಂದವರನ್ನು ಗುರುತಿಸಲು ಸೀಲ್ ಹಾಕುವ ಪ್ಲ್ಯಾನ್ ಮಾಡಿತ್ತು. ಸೀಲ್ ಹಾಕುವ ಮೂಲಕ ವಿದೇಶದಿಂದ ಬಂದವರು ಯಾವ ದಿನದಿಂದ ಯಾವ ದಿನಾಂಕದವರೆಗೂ ಕ್ವಾರಂಟೈನ್ ನಲ್ಲಿ(ಗೃಹ ದಿಗ್ಬಂಧನ) ಇರಬೇಕು ಎಂದು ಹೇಳಿತ್ತು. ಕೊರೋನಾ ಪೀಡಿತರಿಲ್ಲದವರ ಸುರಕ್ಷಿತೆಗಾಗಿ ಇದನ್ನ ಪಾಲಿಸಬೇಕಿದೆ ಎಂದು ಸರ್ಕಾರ ಹೇಳಿತ್ತು. ಇದೀಗ ಹಾಕಿರುವ ಸೀಲ್ ಎಷ್ಟರಮಟ್ಟಿಗೆ ಪರಿಣಾಮಾಕಾರಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಹೌದು Proud to Protect Bengaluru ಮತ್ತು ದಿನಾಂಕ ನಮೂದಿಸಿದ ಸೀಲ್ ಅಳಿಸಿ ಹೋಗುತ್ತಿದಿಯಂತೆ. ಹಾಗಾಂತ ಸ್ವತಃ ಸೀಲ್ ಹಾಕಿಸಿಕೊಂಡವರೇ ಪೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ. ಅಲ್ಲದೆ ಮಾರ್ಚ್ 21 ಕ್ಕೆ ಹಾಕಿರುವ ಸೀಲ್, ಮಾರ್ಚ್ 23ಕ್ಕೆ ಅಳಸಿ ಹೋಗಿದೆ. ಇದರಿಂದಾಗಿ ಆರೋಗ್ಯ ಇಲಾಖೆ ಮಾಡುತ್ತಿರುವ ಎಡವಟ್ಟು ಕಂಡು ಬಂದಿದೆ.
ಬಿಡದಿ ಟೌನ್ಶಿಪ್ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ, ಯೋಜನೆ ಜಾರಿಗೆ ಅವಕಾಶ ನೀಡಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ
ಇದು ಕಾಂಗ್ರೆಸ್ ಸರ್ಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿಡದಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕರು ಬಿಡದಿ, ಬಿಡದಿ ಟೌನ್ಶಿಪ್ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ...








