uddhav takre
ಸುನಾಮಿ ಬರಲಿದೆ ಹುಷಾರ್..!, ಜನರಿಗೆ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ ಹೇಳಿದ್ದೇನು..?
ಮುಂಬೈ: ಕೊರೊನಾ ಹಾವಳಿ ಇನ್ನೇ ದೇಶದಲ್ಲಿ ಕಡಿಮೆಯಾಯ್ತು ಅನ್ನೋವಾಗಲೇ ಇದೀಗ ಮಹಾಮಾರಿಯ 2ನೇ ಅಲೆ ಸುನಾಮಿಯಂತೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ದೆಹಲಿಯಲ್ಲಿ ಮತ್ತೆ ರಕ್ಕಸನ ರಣಕೇಕೆ ಆರಂಭವಾಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿರುವ ಮಹಾರಾಷ್ಟ್ರದಲ್ಲಿ ಇನ್ನೂ ಮಹಾಮಾರಿಯ ಹಾವಳಿ ಹೆಚ್ಚಾಗಲಿದೆ ಎನ್ನಲಾಗ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು, ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ದೀಪಾವಳಿಯಂದು ಗುಂಪುಗೂಡಿದ್ದ ಜನರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೊರೊನಾ ವೈರಸ್ ಹರಡುವಿಕೆಯ ಎರಡನೆಯ ಅವಧಿ ಸುನಾಮಿಯಂತೆಯೇ ಇರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಎರಡನೇ ಮತ್ತು ಮೂರನೇ ಅಲೆಯು ಸುನಾಮಿಯಂತೆ ಪ್ರಬಲವಾಗಿದೆ. ಅಹಮದಾಬಾದ್ ನಲ್ಲಿ ರಾತ್ರಿ ಕರ್ಫ್ಯೂಗಳನ್ನು ಸಹ ಜಾರಿಗೊಳಿಸಿದೆ ಎಂದು ಠಾಕ್ರೆ ಹೇಳಿದರು.
ಅಲ್ಲದೇ ಲಸಿಕೆ ಬಂದ ಕೂಡಲೇ ನಮಗೆ 25 ಕೋಟಿ ಡೋಸ್ಗಳಷ್ಟು ಲಸಿಕೆ ಬೇಕಾಗಲಿದೆ. ಲಸಿಕೆ ಬರುವವರೆಗೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಕೈಗಳನ್ನು ಸ್ವಚ್ಛವಾಗಿ ಇರಿಸುವುದೇ ನಮಗೆ ಇರುವ ಕೇವಲ ಮೂರು ಪರಿಹಾರಗಳಾಗಿವೆ ಎಂದು ತಿಳಿಸಿದ್ದಾರೆ.
ಇದೇ ವಿಚಾರರವಾಗಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಮಾತನಾಡಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೀದಿಬೀದಿಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗುಂಪುಗೂಡಿದ ಜನರು ಕೊರೊನಾ ವೈರಸ್ ಅನ್ನೇ ಕೊಂದು ಹಾಕಬಹುದು ಎಂದು ಭಾವಿಸಿರಬೇಕು ಎಂದು ಲೇವಡಿ ಮಾಡಿದ್ದಾರೆ.
ಹಬ್ಬದ ಅವಧಿಗಳಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಮರೆತು ಮನೆಯಿಂದ ಹೊರಬಂದು ಗುಂಪುಗೂಡಿರುವ ಜನರ ವಿರುದ್ಧ ಹರಿಹಾಯ್ದಿರುವ ಅಜಿತ್ ಪವಾರ್, ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಲು ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಮುಂದಿನ 8-10 ದಿನಗಳವರೆಗೆ ಸರ್ಕಾರವು ಪರಿಸ್ಥಿತಿಯನ್ನು ಪರಾಮರ್ಶಿಸಲಿದ್ದು, ಮತ್ತೆ ಲಾಕ್ಡೌನ್ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಹ ತಿಳಿಸಿದ್ದಾರೆ.
uddhav takre
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








