mumbai attack
26/ 11 ಮುಂಬೈ ದಾಳಿ: 12 ವರ್ಷಗಳ ಬಳಿಕ ಮೀನುಗಾರರ ಕುಟುಂಬಗಳಿಗೆ ಪರಿಹಾರ ಧನ
ಗುಜರಾತ್: 26/11 2008ರ ಮುಂಬೈ ಉಗ್ರ ದಾಳಿಯ ಕರಾಳತೆಗೆ ಸರಿಸುಮಾರು 12 ವರ್ಷಗಳೇ ಕಳೆದಿವೆ. ದಾಳಿಯಲ್ಲಿ 166ಕ್ಕೂ ಹೆಚ್ಚು ಜನರು ತಮ್ಮ ಜೀವ ಜೀವ ಕಳೆದುಕೊಂಡಿದ್ದರು. ಆದರೆ ಮುಂಬೈ ದಾಳಿ ನಡೆದ 12 ವರ್ಷಗಳ ಬಳಿಕ ಮೂವರು ಮೀನುಗಾರರ ಕುಟುಂಬದವರಿಗೆ ಪರಿಹಾರಧನವನ್ನ ಗುಜರಾತ್ ಸರ್ಕಾರ ಪರಿಹಾರ ನೀಡಿದೆ. ತಲಾ 5 ಲಕ್ಷ ಪರಿಹಾರ ಧನವನ್ನ ವಿತರಿಸಿದೆ.
ಕ್ಯಾಪ್ಟನ್ ಅಮರ್ಸಿಂಗ್ ಸೋಲಂಕಿ ಸೇರಿದಂತೆ ಇಬ್ಬರು ಮೀನುಗಾರರ ಕುಟುಂಬಸ್ಥರಿಗೆ ವಿವಿಧ ಅಧಿಕಾರಿಗಳು ಈಗಾಗಲೇ ಪರಿಹಾರ ಧನ ನೀಡಿದ್ದರು. ಹಾಗಾಗಿ ಈಗ ಮೂವರು ಮೀನುಗಾರರಾದ ನಾತು ರಾಥೋಡ್, ಮುಖೇಶ್ ರಾಥೋಡ್ ಮತ್ತು ಬಲ್ವಂತ್ ತಾಂಡೇಲ್ ಕುಟುಂಬಸ್ಥರಿಗೆ ಪರಿಹಾರ ನೀಡಲಾಗಿದೆ. ಈ ಮೂವರು ಮೀನುಗಾರರ ಕುಟುಂಬ ಸದಸ್ಯರಿಗೆ ನಿಗದಿತ ಠೇವಣಿ ರೂಪದಲ್ಲಿ ಕಳೆದ ವಾರ ತಲಾ 5 ಲಕ್ಷ ನೀಡಲಾಗಿದೆ. ಸಂಬಂಧಿಸಿದ ದಾಖಲೆಗಳನ್ನು ಕುಟುಂಸ್ಥರಿಗೆ ಈಗಾಗಲೇ ಹಸ್ತಾಂತರ ಮಾಡಲಾಗಿದೆ.
ಕೊರೊನಾ ಸಂಕಷ್ಟದ ನಡುವೆ ಶಬರಿಮಲೆ ಯಾತ್ರಿಕರಿಗೆ ಮತ್ತೊಂದು ಭೀತಿ..!
mumbai attack
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel