ಸರ್ಕಾರಕ್ಕೆ ಸಾರಿಗೆ ನೌಕರರಿಂದ ಖಡಕ್ ವಾರ್ನಿಂಗ್
ಬೆಂಗಳೂರು : ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಿ ಎಂದು ಒತ್ತಾಯಿಸಿ ಸಾರಿಗೆ ನೌಕಕರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಗರದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆದ್ರೂ ಅಲ್ಲಲ್ಲಿ ಕೆಲ ಬಸ್ ಗಳು ಓಡಾಡುತ್ತಿವೆ. ಈ ಹಿನ್ನೆಲೆ ಸಾರಿಗೆ ನೌಕರರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ನಮ್ಮ ಮುಷ್ಕರವನ್ನು ತಡೆಯಲು ಜೀಪ್,ಕ್ಯಾಪ್ ಚಾಲಕರಿಂದ ಬಸ್ ಓಡಿಸಲಾಗುತ್ತಿದೆ. ಈಗ ಬಸ್ ಓಡಿಸ್ತಿರೋದು ನಮ್ಮವರಲ್ಲ. ನಾವು ಬಸ್ ಓಡಿಸೋಕೆ ಬಿಡಲ್ಲ ಅಂತಾ ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ಸರ್ಕಾರ ಸಾರಿಗೆ ನೌಕರರಿಗೆ ಎಸ್ಮಾ ಜಾರಿ ಮಾಡುವ ಎಚ್ಚರಿಕೆ ನೀಡಿದೆ. ಹೀಗಾಗಿ ಕೆಲ ಕಾರ್ಮಿಕರು ವಾಪಸ್ ಬಸ್ ಹತ್ತಿದ್ದಾರೆ.
ಸದ್ಯ ಪೀಣ್ಯ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭವಾಗಿದೆ. ಯಶವಂತಪುರ ಬಸ್ ಡಿಪೋ 26 ಉತ್ತರ ವಿಭಾಗದಿಂದ ಬಸ್ ಸಂಚಾರ ಶುರುವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








