ಆರ್ ವರ್ತೂರ್ ಪ್ರಕಾಶ್ ಅಪಹರಣ ಕೇಸ್ : ಕಿಂಗ್ ಪಿನ್ ಅರೆಸ್ಟ್
ಕೋಲಾರ : ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣದ ಕಿಂಗ್ ಪಿನ್ ಕವಿರಾಜ್ ನನ್ನು ಕೋಲಾರದ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 25ರಂದು ಕೋಲಾರದ ತಮ್ಮ ತೋಟದ ಮನೆಯಿಂದ ಚಾಲಕ ಸೇರಿ ನನ್ನನ್ನು 8 ಮಂದಿ ಅಪಹರಣಕಾರರು ಅಪಹರಿಸಿದ್ದರು.
ಬಳಿಕ ಮೂರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿ ಇರಿಸಿಕೊಂಡು, 30 ಕೋಟಿ ರೂ. ಹಣ ನೀಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಆರೋಪ ಮಾಡಿ ದೂರು ಸಲ್ಲಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಸದ್ಯ ಪ್ರಕರಣದ ಕಿಂಗ್ ಪಿನ್ ಕವಿರಾಜ್ ಎಂಬೋರನ್ನ ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಈತ ಆರ್ ವರ್ತೂರ್ ಪ್ರಕಾಶ್ ಅವರ ಪರಿಚಯಸ್ಥ ಅಂತ ಹೇಳಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
https://www.youtube.com/watch?v=PJXAUYUadFg








