ಗಂಟಲನ್ನು ಕತ್ತರಿಸಿ ರಕ್ತವನ್ನು ಶಿವಲಿಂಗದ ಮೇಲೆ ಸುರಿದ ಯುವಕ
ಪೈಥಾನ್, ಡಿಸೆಂಬರ್13: 25 ವರ್ಷದ ಯುವಕನೊಬ್ಬ ದೇವಸ್ಥಾನವೊಂದರಲ್ಲಿ ತನ್ನ ಗಂಟಲನ್ನು ಕತ್ತರಿಸಿ ರಕ್ತವನ್ನು ಶಿವಲಿಂಗದ ಮೇಲೆ ಶುಕ್ರವಾರ ಸುರಿದಿದ್ದಾನೆ. ಮಹಾರಾಷ್ಟ್ರದ ಪೈಥಾನ್ ಪಟ್ಟಣದ ಮಹಾದೇವ್ ದೇವಸ್ಥಾನದಲ್ಲಿ ಈ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಅಘೋರಿ ಅಭ್ಯಾಸದ ಭಾಗವಾಗಿ ಆತ ಈ ರೀತಿ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ವ್ಯಕ್ತಿಯನ್ನು ನಂದು ಘುಂಗಾಸೆ ಎಂದು ಗುರುತಿಸಲಾಗಿದೆ. ಘುಂಗೇಸ್ ಕಹರ್ವಾಡ್ ಗ್ರಾಮದ ಮೀನುಗಾರನಾಗಿದ್ದನು. ಘಟನೆಯ ದಿನದಂದು ನಾಲ್ಕು ವ್ಯಕ್ತಿಗಳು ಈ ಘಟನೆಗೆ ಸಾಕ್ಷಿಯಾಗಿದ್ದಾರೆ.
ಪೈಥಾನ್ ಪಟ್ಟಣದ ಗಾಗಭಟ್ ಚೌಕ್ನ ಸಿದ್ಧಿ ಅಲಿ ದರ್ಗಾ ಬಳಿ ಇರುವ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಬಿಹಾರಿ ಪರದೇಶಿ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬರು ಘಟನೆಯ ದಿನದಂದು ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳಿದಾಗ ಘುಂಗೇಸ್ ನ ಶವವನ್ನು ನೋಡಿದರು.
ಮಾರ್ಚ್ 20 ರಿಂದ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿಸಿದ ಟಿಟಿಡಿ
ನಂತರ ಪರದೇಶಿ ಪೊಲೀಸರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಘುಂಗೇಸ್ ನ ಶವವನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಆ ವ್ಯಕ್ತಿಯು ದೇವಾಲಯದಲ್ಲಿ ಗಂಟಲು ಕತ್ತರಿಸಿ ರಕ್ತವನ್ನು ಶಿವಲಿಂಗದ ಮೇಲೆ ಸುರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಆತನ ಸಾವಿಗೆ ತಮ್ಮನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಅವರಲ್ಲಿ ಯಾರೂ ಮೀನುಗಾರನನ್ನು ತಡೆಯಲು ಮುಂದಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಆರಂಭದಲ್ಲಿ ಪ್ರತ್ಯಕ್ಷದರ್ಶಿಗಳು ಘಟನೆಯ ವಿವರಗಳನ್ನು ಬಹಿರಂಗಪಡಿಸಲು ಸಿದ್ಧರಿರಲಿಲ್ಲ. ಆದರೆ ಅವರಲ್ಲಿ ಒಬ್ಬರು ಅದನ್ನು ಪೊಲೀಸರೊಂದಿಗೆ ಹಂಚಿಕೊಂಡರು. ಬಳಿಕ ಘಟನೆಗಳ ಸರಣಿಯನ್ನು ಕಂಡುಹಿಡಿಯಲು ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲನೆ ನಡೆಸಿದರು. ಅಘೋರಿ ಅಭ್ಯಾಸಕ್ಕಾಗಿ ಆ ವ್ಯಕ್ತಿ ಇಂತಹ ಕ್ರಮಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕೆಮ್ಮು ಮತ್ತು ಶೀತವನ್ನು ಸುಲಭವಾಗಿ ಗುಣಪಡಿಸಲು ಅಡಿಗೆ ಮನೆಯಲ್ಲಿರುವ ಮನೆಮದ್ದುಗಳುhttps://t.co/oN7YerRCki
— Saaksha TV (@SaakshaTv) December 12, 2020
ಪಾಕ್ ನಲ್ಲಿ ಅಲ್ಪಸಂಖ್ಯಾತರ ಕಣ್ಮರೆಗೆ ಆತಂಕ ವ್ಯಕ್ತಪಡಿಸಿದ ಯುಎನ್ ತಜ್ಞರು – ಭಾರತವನ್ನು ರಾಕ್ಷಸ ರಾಷ್ಟ್ರ ಎಂದ ಪಾಕ್ ಪ್ರಧಾನಿhttps://t.co/ctQzl9kSQK
— Saaksha TV (@SaakshaTv) December 12, 2020