ಒಂದೇ ಕುಟುಂಬದ 5 ಮಂದಿ ಸಾವು : ಸಾವಿಗೆ ಇದೊಂದೇ ಕಾರಣ!
ಸಾಲ ಹೆಚ್ಚಾಗಿ ತೀರಿಸಲಾಗದ ಪರಿಸ್ಥಿತಿ ಬಂದಾಗ ಹೆಚ್ಚು ಜನರು ಆತ್ಮಹತ್ಯೆಯ ದಾರಿ ಹಿಡಿದುಬಿಡ್ತಾರೆ. ಇದೇ ರೀತಿ ಸಾಲಬಾಧೆಯಿಂದ ನೊಂದಿದ್ದ ದಂಪತಿ ತಮ್ಮ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಳವನೂರಿನಲ್ಲಿ ಈ ದಾರುಣ ಘಟನೆ ನಡೆದಿದೆ.
ಹೆಂಡತಿ ಹುಡುಗಾಟಕ್ಕೆ ಬಲಿಯಾದ ಪತಿ: ಅಸಲಿಗೆ ಆಗಿದ್ದೇನು..!
ಮೋಹನ್ ಮತ್ತು ವಿಮಲೇಶ್ವರಿ ದಂಪತಿ ತಮ್ಮ 8 ವರ್ಷದ ರಾಜಶ್ರೀ, 5 ವರ್ಷದ ನಿತ್ಯಶ್ರೀ ಮತ್ತು 4 ವರ್ಷದ ಶಿವಪಾಲ ಎಂಬ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ವ್ಯವಹಾರ ವೃದ್ಧಿಗಾಗಿ ಸಾಲ ಪಡೆದ ಕುಟುಂಬ ಕೊನೆಗೆ ಬರೀ ನಷ್ಟವೇ ಅನುಭವಿಸಿ ಸಾಲದ ಮೇಲೆ ಸಾಲ ಪಡೆದು ತೀರಿಸಲಾಗದ ಸ್ಥಿತಿ ತಲುಪಿದ್ದರು. ಇತ್ತ ಸಾಲದವರು ಪದೇ ಪದೇ ಮನೆ ಬಳಿ ಬಂದು ಹಿಂಸಿಸಲು ಶುರು ಮಾಡಿದ್ದರು.
ಮಿಸ್ ಆಗಿ ಮತ್ತೊಬ್ಬರ ಖಾತೆಗೆ 18.60 ಲಕ್ಷ ರೂ : ದುಡ್ಡು ವಾಪಸ್ ಕೇಳಿದ ಮಹಿಳೆಗೆ ಕಾದಿತ್ತು ಶಾಕ್..!
ಇದ್ರಿಂದ ಮನನೊಂದ ಮೋಹನ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ರು. ಆದ್ರೆ ತಾನು ಸತ್ತರೆ ಮನೆಮಂದಿಗೆ ಹಿಂಸೆ ಕೊಡ್ತಾರೆ ಅನ್ನೋ ಕಾರಣಕ್ಕೆ ಹೆಂಡತಿ, ಮಕ್ಕಳನ್ನ ಜೊತೆ ನೇಣಿಗೆ ಶರಣಾಗಿದ್ದಾರೆ. ಇತ್ತ ಎಷ್ಟೋದಾರೂ ಮನೆ ಮಂದಿ ಆಚೆ ಬರದನ್ನ ಅರಿತ ನೆರೆಹೊರೆಯವರು ಬಾಗಿಲೂ ಬಡೆದಿದ್ದಾರೆ. ಯಾವಾಗ ಬಾಗಿಲು ತೆಗೆಯಲಿಲ್ಲವೋ ಆಗ ಬಾಗಿಲು ಒಡೆದಿದ್ದಾರೆ. ಬಳಿಕ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
ಸದ್ಯ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮೃತದೇಹಗಳನ್ನ ವಿಲ್ಲುಪುರಂ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದು, ಸಾಲ ಕೊಟ್ಟವರಿಗಾಗಿ ಹುಡುಕಾಟ ನಡೆಸ್ತಾಯಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








