ಎಳ್ಳು ಬೆಲ್ಲ ಹಂಚಿ ಖುಷಿ ಹಂಚುವ ಹಬ್ಬ… ವರ್ಷದ ಮೊದಲನೇಯ ಹಬ್ಬ… ಮಕರ ಸಂಕ್ರಾತಿ ಹಬ್ಬ..!
ವರ್ಷದ ಮೊದಲನೇಯ ಹಬ್ಬ ಸಂಕ್ರಾಂತಿ ಹಬ್ಬದ ಸಂಭ್ರಮ ಇಂದು ದೇಶಾದ್ಯಂತ ಮನೆ ಮಾಡಿದೆ. ಎಳ್ಳು – ಬೆಲ್ಲ ತಿಂದು ಸಿಹಿಯಾದ ಮಾತುಗಳನ್ನಾಡುವ, ಎಳ್ಳು – ಬೆಲ್ಲ ಹಂಚಿ ಸಂತೋಷವನ್ನು ನೀಡುವ ಸುಗ್ಗಿ ಸಂಭ್ರಮ ಮಕರ ಸಂಕ್ರಾಂತಿ. ಮಕರ ಸಕ್ರಾಂತಿ ವಾರ್ಷಿಕ ಹಿಂದೂ ಹಬ್ಬವಾಗಿದ್ದು, ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮ, ಶ್ರದ್ಧಾ ಭಕ್ತಿಯಿಂದ ಪ್ರತಿ ಮನೆಗಳಲ್ಲೂ ಆಚರಣೆ ಮಾಡಿ ಬಳಿಕ ಮನೆಮಂದಿಯಲ್ಲು ಎಳ್ಳು ಬೆಲ್ಲ ತಿಂದು ನೆರೆಹೊರೆಯವರಿಗೂ ಹಂಚುವುದು ಹಬ್ಬದ ಸಂಪ್ರದಾಯ.
ಪ್ರತಿವರ್ಷ ಜನವರಿ ತಿಂಗಳಲ್ಲಿ ಮಕರ ರಾಶಿ ಅಥವಾ ರಾಶಿ ಚಿಹ್ನೆ ಮಕರಕ್ಕೆ ಸೂರ್ಯನು ಪ್ರವೇಶಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಆಚರಣೆ ಮಾಡಲಾಗುತ್ತೆ. ಮಕರ ರಾಶಿಗೆ ಸೂರ್ಯನ ಪ್ರವೇಶವು ಇರುಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಈ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೂ ಸಹಕರಿಸುತ್ತದೆ. ವೇದಶಾಸ್ತ್ರದ ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತದೆ. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಈ ಕಾಲವು ಸ್ವರ್ಗದ ಬಾಗಿಲು ತೆರೆದಿರುವ ಕಾಲವೆಂದು ಚಾಲ್ತಿಯಲ್ಲಿದ್ದು, ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಐತಿಹ್ಯವಿದೆ.
ಗುರು ಸಾರ್ವಭೌಮ ಶ್ರೀ ಮಂತ್ರಾಲಯ ಗುರುಗಳನ್ನು ನೆನೆದು ಈ ದಿನದ ರಾಶಿ ಫಲ ತಿಳಿಯಿರಿ
ಈ ಹಬ್ಬವನ್ನ ದಕ್ಷಿಣ ಭಾರತದಲ್ಲಿ ಅತಿ ಅ್ಧೂರಿಯಾಗಿ ಆಚರಣೆ ಮಾಡಲಾಗುತ್ತೆ. ಅದ್ರಲ್ಲೂ ತಮಿಳುನಾಡಿನಲ್ಲಿ ಈ ಹಬ್ಬವನ್ನ ಪೊಂಗಲ್ ಎಂದೇ 3 – 5 ದಿನಗಳ ವರೆಗೂ ವಿವಿಧ ಆಚರಣೆಗಳ ಮೂಕ ಆಚರಣೆ ಮಾಡಲಾಗುತ್ತೆ.
ಮಕರ ಸಂಕ್ರಾಂತಿಯು ರಾಶಿಚಕ್ರದ ಅಧಿಪತಿಯಾದ ಸೂರ್ಯನಿಗೆ ಅರ್ಪಿತವಾದ ಪ್ರಮುಖ ಸುಗ್ಗಿ ಹಬ್ಬವಾಗಿದೆ. ಇನ್ನೂ ಸಂಕ್ರಾಂತಿ ಹಬ್ಬದಲ್ಲಿ ಕಡಲೆ ಕಾಯಿ, ಗೆಣಸು, ಅವರೇಕಾಯಿ, ಸಿಹಿಗೆಣಸನ್ನ ಸೇವನೆ ಮಾಡಲಾಗುತ್ತೆ. ಇದನ್ನ ಪೂಜೆ ನೈವೇದ್ಯದ ರೂಪದಲ್ಲಿ ದೇವರಿಗೆ ಅರ್ಪಿಸಲಾಗುತ್ತೆ. ಮನೆಯಲ್ಲಿ ತಯಾರಿಸಿ ಇತರರಿಗೆ ಕಬ್ಬು ಗೆಣಸು ಇವನ್ನೆಲ್ಲ ಹಂಚಲಾಗುತ್ತೆ. ಇನ್ನೂ ಇವುಗಳು ವರ್ಷದ ಮೊದಲ ಬೆಳೆಯಾಗಿರೋದರಿಂದ ಪರಪಂರೆಯಿಂದಲೂ ಮೊದಲ ಬೆಳೆಯ ಸಂತಸದಲ್ಲಿ ರೈತರು ಬೆಳೆಗಳನ್ನ ಪೂಜಿಸಿ ಹಂಚಿ ಪರಸ್ಪರ ಸಂಭ್ರಮಿಸುತ್ತಾರೆ.
ಇನ್ನೂ ಸುಗ್ಗಿ ಅಂದ್ರೆ ಸಿಹಿ ಪೊಂಗಲ್… ಹೆಸರು ಬೇಳೆ, ಅಕ್ಕಿ ಅಂತಹ ಶ್ರೇಷ್ಠ ಬೆಳೆಗಳನ್ನ ಹಾಕಿ ಬೆಲ್ಲ ಹಾಕಿ ಅವೆಲ್ಲದರ ಮಿಶ್ರಣದಿಂದ ತಯಾರಿಸಿ ದೇವರಿಗೆ ನೈವೇದ್ಯವಿಟ್ಟ ಬಳಿಕ ಸೇವಿಸಲಾಗುತ್ತೆ. ಇನ್ನೂ ಸಂಕ್ರಾಂತಿ ಹಬ್ಬದಲ್ಲಿ ಸುಗ್ಗಿಗೆ ಅದರದ್ದೇ ಆದ ಮಹತ್ವವಿದ್ದು, ಪ್ರತಿ ಮನೆಯಲ್ಲೂ ಸುಗ್ಗಿಯನ್ನ ತಪ್ಪದೇ ಮಾಡಲಾಗುತ್ತೆ.
ಇನ್ನೂ ಈ ಹಬ್ಬದದಲ್ಲಿ ಅನೇಕ ವಿಶೇಷತೆಗಳಿವೆ. ಮನೆ ಮಂದಿ ಸ್ನೇಹಿತರೊಂದಿಗೆ ಸೇರಿ ಗಾಳಿ ಪಟ ಹಾರಿಸೋ ಸಂಭ್ರಮ, ರಾತ್ರಿ ಊರಮುಂದೆ ಬೆಂಕಿ ಹಚ್ಚಿ ಕುರಿ , ಮೇಕೆ, ಹಸುಗಳನ್ನ ಕಿಚ್ಚಾಯಿಸೋ ಸಂಭ್ರಮ , ಹಳೆಯ ವಸ್ತುಗಳನ್ನ ಸುಟ್ಟುಹಾಕಿ ಹೊಸತನವನ್ನ ವೆಲ್ ಕಮ್ ಮಾಡೋ ರಿವಾಜುಗಳು ಮಕರ ಸಂಕ್ರಾಂತಿಯನ್ನ ಮತ್ತಷ್ಟು ಮೆರಗುಗೊಳಿಸುತ್ತೆ. ಜಾನಪದ ಸೊಗಡಲ್ಲಿ ಹಳ್ಳಿಗಳಲ್ಲಿ ಆಚರಣೆ ಮಾಡೋ ಸಂಕ್ರಾತಿ ಇನ್ನೂ ಸೊಗಸಾಗಿರುತ್ತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








