ವಿಮಾನ ಅಪಘಾತಗಳಿಗೆ ಕೇಂದ್ರಬಿಂದುವಾಗಿದೆಯೇ ಆ ದೇಶ?
ಜಕಾರ್ತಾ : ಇಂಡೋನೇಷ್ಯಾದಲ್ಲಿ ವಿಮಾನ ಅಪಘಾತಗಳು ಏಕೆ ಸಂಭವಿಸುತ್ತಿವೆ..?
ಇಂಡೋನೇಷ್ಯಾದಲ್ಲಿ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ 62 ಮಂದಿ ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಮತ್ತೊಮ್ಮೆ ಆ ದೇಶದ ವಾಯುಯಾನ ಉದ್ಯಮದ ಸುರಕ್ಷತೆಯ ಬಗ್ಗೆ ಚರ್ಚಿಸುವಂತೆ ಮಾಡಿದೆ. ವಾಸ್ತವವಾಗಿ, ಇಂಡೋನೇಷ್ಯಾದಲ್ಲಿಯೇ ಯಾಕೆ ಪದೇ ಪದೇ ವಿಮಾನ ದುರಂತಗಳು ಸಂಭವಿಸುತ್ತವೆ ಅನ್ನೋ ಪ್ರಶ್ನೆಯನ್ನ ಈ ಘಟನೆ ಮತ್ತೆ ಹುಟ್ಟುಹಾಕಿದೆ.
1945 ರಿಂದ ಬೇರೆಯಾವ ದೇಶದಲ್ಲಿ ಸಂಭವಿಸದ ವಿಮಾನ ಪ್ರಮಾದಗಳು ಇಂಡೋನೇಷ್ಯಾದಲ್ಲಿ ಸಂಭವಿಸಿವೆ. ಹಿಂದಿನ ಎಲ್ಲಾ ಅಪಘಾತಗಳು ಪೈಲಟ್ ತರಬೇತಿ ದೋಷದಿಂದ ಸಂಭವಿಸಿವೆ. ಇನ್ನೂ ಕೆಲವು ತಾಂತ್ರಿಕ ತೊಂದರೆ, ವಾಯು ಸಂಚಾರ ನಿಯಂತ್ರಣ ಸಮಸ್ಯೆ ಅಥವಾ ಸರಿಯಾದ ವಿಮಾನ ನಿರ್ವಹಣೆಯ ಕೊರತೆಯಿಂದ ವಿಮಾನ ಪ್ರಮಾದಗಳು ಸಂಭವಿಸಿವೆ.
ಇತ್ತೀಚಿನ ದಿನಗಳಲ್ಲಿ ಇಂಡೋನೇಷ್ಯಾದ ನಾಗರಿಕ ವಿಮಾನಯಾನ ಉದ್ಯಮದ ಪರಿಸ್ಥಿತಿ ಸುಧಾರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರೂ ಕೆಲ ದಿನಗಳಿಂದೆ ನಡೆದ ಘಟನೆಯು ಇಂಡೋನೇಷ್ಯಾದ ವಿಮಾನಯಾನ ನಿಯಂತ್ರಣ ಮತ್ತು ನಿಯಂತ್ರಣದಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ.
ಇಲ್ಲಿನ ಅಪಘಾತಗಳಿಗೆ ಕಾರಣವೇನು?
ಇಂಡೋನೇಷ್ಯಾದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗಲು ಕಾರಣವೇನು ಎಂಬುದು ಈಗ ಎಲ್ಲೆಡೆ, ಎಲ್ಲರನ್ನೂ ಮೂಡಿರುವ ಪ್ರಶ್ನೆಯಾಗಿದೆ. ಆದಾಗ್ಯೂ, ಆರ್ಥಿಕ, ಸಾಮಾಜಿಕ ಮತ್ತು ಭೌಗೋಳಿಕ ವಿಷಯಗಳೆ ಅಪಘಾತಗಳಿಗೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ. 1990 ರ ಕೊನೆಯಲ್ಲಿ ದಶಕಗಳ ಬಳಿಕ ನಿರಂಕುಶತ್ವ ಆನಂತರ ಸುಹಾರ್ತೊ ಸರಕಾರ ಪತನದ ಬಳಿಕ ವಿಮಾನಯಾನ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಥದತ್ತ ನಡೆಯಿತು. ಆದರೆ ನಂತರದ ಕಾಲ ಮಾನದಲ್ಲಿ ಈ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಲಿಲ್ಲ. ಇಂಡೋನೇಷ್ಯಾದ ಹೆಚ್ಚಿನ ಭಾಗಗಳಲ್ಲಿ ಗುಣಮಟ್ಟದ, ವಾಯುಯಾನ ಸ್ನೇಹಿ ಮೂಲಸೌಕರ್ಯಗಳ ಕೊರತೆಯ ಹೊರತಾಗಿಯೂ, ಕಡಿಮೆ-ವೆಚ್ಚದಲ್ಲಿ ಪ್ರಯಾಣಿಕರ ಸಾಗಣೆಯು ದೇಶದಲ್ಲಿ ಸಾಮಾನ್ಯ ಸಾರಿಗೆ ವಿಧಾನವಾಯಿತು. ಇದೇ ಕಾರಣಕ್ಕೆ ಇಲ್ಲಿ ಹೆಚ್ಚು ವಿಮಾನ ದುರಂತಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತಿದೆ.
ವಾಯು ಭದ್ರತಾ ಜಾಲ ಅಂಕಿಅಂಶಗಳ ಮಾಹಿತಿ ಪ್ರಕಾರ ಇಂಡೋನೇಷ್ಯಾದಲ್ಲಿ 104 ನಾಗರಿಕ ವಿಮಾನಯಾನ ಅಪಘಾತಗಳು ಸಂಭವಿಸಿವೆ. 1945 ರಿಂದ ಇಲ್ಲಿಯವರೆಗೆ 13,000 ನಾಗರಿಕರು ವಿಮಾನ ಪ್ರಮಾದಗಳಲ್ಲಿ ಸಾವನ್ನಪ್ಪಿದ್ದಾರೆ.
ಇಂಡೋನೇಷಿಯಾದಲ್ಲಿ ಪರಿಸ್ಥಿತಿಗಳು ಸುಧಾರಿಸಿದೆಯೇ?
ವಿಮಾನಯಾನ ವಿಚಾರವಾಗಿ ಪರಿಸ್ಥಿತಿ ಸುಧಾರಿಸಿದೆ ಮತ್ತು ಮೇಲ್ವಿಚಾರಣೆಯನ್ನು ಬಿಗಿಗೊಳಿಸಲಾಗಿದೆ ಎಂದು ವಿಮಾನಯಾನ ತಜ್ಞರು ಜೆಫ್ರಿ ಥಾಮಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ ನಿಖರವಾದ ನಿಯಂತ್ರಣ ವಿಧಾನಗಳು, ವಿಮಾನಗಳ ಕಾರ್ಯಕ್ಷಮತೆಯನ್ನು ಆಗಾಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಪೈಲಟ್ ತರಬೇತಿಯ ಸುಧಾರಣೆ ಮುಂತಾದ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೀಗಿದ್ದರೂ ಇತ್ತೀಚಿನ ಅಪಘಾತ ಏಕೆ ಸಂಭವಿಸಿತು?
ಅಂದು ವಿಮಾನ ಜಕಾರ್ತಾದಿಂದ ಭಾರಿ ಮಳೆಯ ನಡುವೆ ಟೇಕ್ ಆಫ್ ಆಗಿದೆ. ಆದ್ರೆ ವಿಮಾನ ಪತನಗೊಳ್ಳಲು ಇದೇ ಪ್ರಮುಖ ಕಾರಣ ಅಂತ ಹೇಳಲಾಗುವುದಿಲ್ಲ. ಯಾಕೆಂದ್ರೆ ಫ್ಲೈಟ್ ಕಂಡೀಷನ್, ಕೆಲ ದೋಷಗಳಲ್ಲಿ ಹವಾಮಾನ ಪರಿಸ್ಥಿತಿಗಳು ಒಂದಷ್ಟೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಿಖರ ಕಾರಣ ಯಾವಾಗ / ಹೇಗೆ ತಿಳಿಯುತ್ತದೆ
ನೀರಿನಿಂದ ಹೊರತೆಗೆಯಲಾದ ವಿಮಾನ ಅವಶೇಷಗಳಿಂದ ಒಂದಿಷ್ಟು ಮಾಹಿತಿ ತಿಳಿಯುತ್ತದೆ. ಸಮುದ್ರತಳದಲ್ಲಿ ಬ್ಲಾಕ್ ಬಾಕ್ಸ್ ಗಳನ್ನು ಕಂಡುಬಂದಿವೆ. ಫ್ಲೈಟ್ ಡೇಟಾ ರೆಕಾರ್ಡರ್, ಕಾಕ್ಪಿಟ್ ಧ್ವನಿ ರೆಕಾರ್ಡರ್ನಿಂದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ. ಆದಾಗ್ಯೂ ತನಿಖೆಗೆ ಕೆಲವು ವಾರಗಳು ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









