ಅನ್ನದಾತರ ಟ್ರ್ಯಾಕ್ಟರ್ ರ್ಯಾಲಿ ತಡೆಯಲು ನಗರದ ಪ್ರಮುಖ ದಿಕ್ಕುಗಳಲ್ಲಿ ‘ಖಾಕಿ ಚಕ್ರವ್ಯೂಹ’
ಬೆಂಗಳೂರು: ರಾಜ್ಯದಲ್ಲೂ ಟ್ರ್ಯಾಕ್ಟರ್ ರ್ಯಾಲಿ ನಡೆಯುತ್ತಿದೆ. ರೈತರ ಪ್ರತಿಭಟನೆ ಜೋರಾಗಿದೆ. ಇದರ ನಡುವೆ ರೈತರ ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ನಗರದಲ್ಲಿ ಪೊಲೀಸ್ ಚಕ್ರವ್ಯೂಹ ರಚಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ದೇಶಾದ್ಯಂತ ರೈತರು ಇಂದು ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದು, ನಗರದ ಆರು ಮಾರ್ಗಗಳ ಮೂಲಕ ರೈತರು ಫ್ರೀಡಂ ಪಾರ್ಕ್ ತಲುಪುತ್ತಿದ್ದಾರೆ. ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಬೆಂಗಳೂರು ಪೊಲೀಸರು ಅವಕಾಶ ನಿರಾಕರಿಸಿದ್ದು, ಹೊರ ವಲಯಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಿ ಟ್ರಾಕ್ಟರ್ ಜೊತೆ ಆಗಮಿಸುವ ರೈತರನ್ನು ಗಡಿಯಲ್ಲೇ ತಡೆಯಲಾಗುತ್ತಿದೆ.
ಪೊಲೀಸರನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು : VIDEO
ಇತ್ತ ಮಾಗಡಿ ರಸ್ತೆಯ ದೊಡ್ಡಗೊಲ್ಲರಹಟ್ಟಿ ನೈಸ್ ವೃತ್ತದಲ್ಲಿ ಹೆಚ್ಚು ಪೊಲೀಸರು ಹಾಗೂ ಗೃಹರಕ್ಷದ ದಳದ ಸಿಬ್ಬಂದಿಗಳನ್ನು ನಿಯೋಜಿಲಾಗಿದ್ದು, ಎರಡು ಖಾಲಿ ಬಸ್ ಮತ್ತು ಕ್ರೇನ್ ಸಿದ್ದಪಡಿಸಿಕೊಳ್ಳಲಾಗಿದೆ. ಇತ್ತ ಮೈಸೂರು ಸುತ್ತಮುತ್ತಲಿನಿಂದ ಆಗಮಿಸುವ ರೈತರನ್ನು ತಡೆಯಲು ಕೆಂಗೇರಿ ಸಮೀಪದ ನೈಸ್ ರಸ್ತೆ ಜಂಕ್ಷನ್ನಲ್ಲಿ 200 ಹೋಂಗಾಡ್ರ್ಸ್ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿ ಕೃಷ್ಣಕುಮಾರ್ ನೇತೃತ್ವದಲ್ಲಿ ಉಪವಿಭಾಗದ ಎಲ್ಲಾ ಇನ್ಸ್ಪೇಕ್ಟರ್ಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಜೊತೆಗೆ 3 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಐದು ಖಾಲಿ ಬಸ್ ಹಾಗೂ ಎರಡು ಕ್ರೇನ್ಗಳನ್ನು ಇರಿಸಲಾಗಿದ್ದು, ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ.
ದಿಲ್ಲಿ ಟ್ರ್ಯಾಕ್ಟರ್ ದಂಗೆ : ಭುಗಿಲೆದ್ದ ರೈತರು, ರಣರಂಗವಾದ ರಾಜಧಾನಿ
ಇನ್ನೂ ತುಮಕೂರು ರಸ್ತೆಯಲ್ಲಿ ರೈತರ ಟ್ರಾಕ್ಟರ್ಗಳನ್ನು ತಡೆಹಿಡಿಯಲು ನೆಲಮಂಗಲದ ನವಯುಗ ಟೋಲ್ ಸಮೀಪ ಯಶವಂತಪುರ ಮತ್ತು ಜೆಸಿನಗರ ಉಪವಿಭಾಗಗಳ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ಭಾರಿ ಭದ್ರತೆ ಮಾಡಿಕೊಳ್ಳಲಾಗಿದೆ. 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 5 ಖಾಲಿ ಬಸ್ ಹಾಗೂ ಕ್ರೇನ್ ಇರಿಸಲಾಗಿದೆ. ಅಷ್ಟೇ ಅಲ್ಲದೇ ಹೊಸೂರು ರಸ್ತೆಯಲ್ಲಿ ವೀರಸಂದ್ರ ಚೆಕ್ಪೊಸ್ಟ್ ಹತ್ತಿರ 300 ಪೊಲೀಸರು ಹಾಗೂ ಓರ್ವ ಎಸಿಪಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇತ್ತ ಬನ್ನೇರುಘಟ್ಟ ರಸ್ತೆಯ ಕೋಳಿಫಾರಂ ಗೇಟ್ ಬಳಿ ಓರ್ವ ಎಸಿಪಿ ಹಾಗೂ 250ಪೊಲೀಸರ ನಿಯೋಜನೆ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








