ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ ಅಪರೂಪದ ಕರಿ ಚಿರತೆ ಸ್ಥಳದಲ್ಲೇ ಸಾವು..!
ಚಲಿಸುತ್ತಿದ್ದ ರೈಲಿಗೆ ಆಕಸ್ಮಿಕವಾಗಿ ಸಿಕ್ಕ ಅಪರೂಪದಕರಿಚಿರತೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಅರಣ್ಯ ವಲಯದಲ್ಲಿ ನಡೆದಿದೆ. ಬೈಂದೂರು ಸಮೀಪದ ಬಾಡಾ ಗ್ರಾಮದ ಬಡಕೆರೆ ರೈಲು ಹಳಿಯ ಬಳಿ ಆಹಾರ ಅರಸಲು ಬಂದಿದ್ದ ಕರಿ ಚಿರತೆ ಅಪಘಾತಕ್ಕೀಡಾಗಿದೆ. ಮೃತ ಚಿರತೆ ನಾಲ್ಕು ವರ್ಷ ವಯಸ್ಸಿನದ್ದಾಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಮಂಗಳೂರು – ಮುಂಬೈ ಮಾರ್ಗದ ರೈಲು ಹಳಿಯಲ್ಲಿ ಕಪ್ಪು ಬಣ್ಣದ ಚಿರತೆಯ ಶವ ಸಿಕ್ಕಿದೆ. ರೈಲ್ವೆ ಇಲಾಖೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಸಿಗಲ್ಲ ಸರ್ಕಾರಿ ಉದ್ಯೋಗ, ಜಾಲತಾಣದಲ್ಲಿ ಪೋಸ್ಟ್ ಹಾಕಿದ್ರೆ ಸಿಗಲ್ಲ ಪಾಸ್ ಪೋರ್ಟ್..!
ಕರಿ ಚಿರತೆಗಳು ಕುಂದಾಪುರ ಅರಣ್ಯ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರೋದಿಲ್ಲ. ಇವು ತುಂಬಾನೇ ಅಪರೂಪ. ಈ ತರಹದ ಸುಮಾರು 10 ಚಿರತೆಗಳು ಈ ಅರಣ್ಯವಲಯದಲ್ಲಿ ಇರಬಹುದು ಅಷ್ಟೇ. ಕೆಲ ಸಮಯದ ಹಿಂದಷ್ಟೇ ಬಾವಿಯಲ್ಲಿ ಬಿದ್ದಿದ್ದ ಎರಡು ಚಿರತೆಗಳನ್ನ ರಕ್ಷಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ರೈಲು ಅಪಘಾತದಲ್ಲಿ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಪ್ರಭಾಕರ್ ಕುಲಾಲ್ ಮಾಹಿತಿ ನೀಡಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ : ನಾಯಿಗಳ ದಾಳಿಗೆ 10 ಮಂದಿ ಗಂಭೀರ ಗಾಯ..!
ಇನ್ನು ಐಎಫ್ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಕೂಡ ಅಪಘಾತದ ದೃಶ್ಯಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಭಗೀರಾ ತನ್ನ ಸ್ವಂತ ಭೂಮಿಯ ಮೇಲಿದ್ದ. ಆದರೆ ಅನ್ಯಗ್ರಹದ ಯಂತ್ರವೊಂದು ಆತನನ್ನ ಕೊಲೆ ಮಾಡಿದೆ ಎಂದು ಕ್ಯಾಪ್ಷನ್ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೆ ಏರಿಕೆ ಕಂಡ ಪೆಟ್ರೋಲ್, ಡಿಸೇಲ್ ಬೆಲೆ | ಯಾರು ಧ್ವನಿ ಎತ್ತುತ್ತಿಲ್ಲವೇಕೆ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







