ಕಂಗನಾ ರಣಾವತ್ ಗೆ ಟಾಂಗ್ ಕೊಟ್ಟ ರಮ್ಯಾ ಹೇಳಿದ್ದೇನು…?
ರೈತ ಪ್ರತಿಭಟನೆ ಬಗ್ಗೆ ನಾವ್ಯಾಕೆ ಧ್ವನಿ ಎತ್ತಬಾರದು ಎಂದು ಕಮೆಂಟ್ ಮಾಡಿದ್ದ ಪಾಪ್ ಸಿಂಗ್ ರಿಹಾನಾಗೆ ಬಾಲಿವುಡ್ ನಟಿ ಕಂಗನಾ ರಣೌತ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ರು. ಈ ವೇಳೆ ಅವರೆಲ್ಲಾ ರೈತರಲ್ಲ ಭಯೋತ್ಪಾದಕರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ರು. ‘ಇವರ್ಯಾರೂ ರೈತರಲ್ಲ, ಇವರೆಲ್ಲಾ ಭಾರತವನ್ನು ಇಬ್ಭಾಗ ಮಾಡಲು ನೋಡುತ್ತಿರುವ ಭಯೋತ್ಪಾದಕರು. ಇದರಿಂದ ದುರ್ಬಲಗೊಳ್ಳುವ ಭಾರತವನ್ನು ಚೀನಾ ಸ್ವಾಧೀನಪಡಿಸಿಕೊಂಡು ಅಮೆರಿಕದಂತೆ ಚೀನಿ ವಸಾಹತು ಮಾಡಬಹುದು’ ಎಂದು ಕಿಡಿ ಕಾರಿದ್ದರು. ಇದಕ್ಕೆ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಟಾಂಗ್ ಕೊಟ್ಟಿದ್ದಾರೆ. ‘ಹಾಗಿದ್ದರೆ ನಮ್ಮ ಪ್ರಧಾನಿ ದುರ್ಬಲರು ಎಂದು ಒಪ್ಪಿಕೊಂಡಿರಾ?’ ಎಂದು ವ್ಯಂಗ್ಯ ಮಾಡಿದ್ದಾರೆ.
ಫೇಸ್ ಬುಕ್ ಬಳಕೆ ಮ್ಯಾನ್ಮಾರ್ ನಲ್ಲಿ ನಿರ್ಬಂಧ : ನೂತನ ಸೇನಾ ಸರ್ಕಾರದ ಆದೇಶ..!
ಸಿಎಂ ಯಡಿಯೂರಪ್ಪನವರಿಗೆ ಮಾನ ಮರ್ಯಾದೆ ಗೌರವ ಯಾವುದೂ ಇಲ್ಲ : ವಾಟಾಳ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel