ಉತ್ತರಕಾಂಡ್ ನಲ್ಲಿ ಹಿಮಕುಸಿತ : ಹೆಡ್ ಕಾನ್ಸ್ ಟೇಬಲ್ ಮೃತದೇಹ ಪತ್ತೆ
ಉತ್ತರಖಂಡ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮಸ್ಪೋಟದಲ್ಲಿ ಈಗಾಗಲೇ 33ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. 160 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ರಕ್ಷಾಣ ಕಾರ್ಯಾಚರಣೆ ಜಾರಿಯಲ್ಲಿದೆ. ಈ ನಡುವೆಯೇ ಇದೇ ಅವಘಡದಲ್ಲಿ ನಾಪತ್ತೆಯಾಗಿದ್ದ ಉತ್ತರಖಂಡದನ ಹೆಡ್ ಕಾನ್ಸ್ ಟೇಬಲ್ ಮೃತದೇಹ ಪತ್ತೆಯಾಗಿದೆ.
ಫಾಸ್ಟ್ಯಾಗ್ ವ್ಯಾಲೆಟ್ ನಲ್ಲಿ ಮಿನಿಮಮ್ ಬಾಲೆನ್ಸ್ ಅಗತ್ಯವಿಲ್ಲ
ಚಮೋಲಿಯ ರಿಷಿ ಗಂಗಾ ಪವರ್ ಯೋಜನೆಯ ಸ್ಥಳದಲ್ಲಿ ಸಂಭವಿಸಿದ ಅನಾಹುತದಲ್ಲಿ ಕಾಣೆಯಾಗಿದ್ದ 42 ವರ್ಷದ ಚಮೋಲಿ ಜಿಲ್ಲೆಯ ಕಾನ್ಸ್ ಸ್ಟೇಬಲ್ ಮನೋಜ್ ಚೌಢರಿ ಮೃತದೇಹವು ಪತ್ತೆಯಾಗಿದೆ. ಇನ್ನೂ ಕೆಲ ಪೊಲೀಸ್ ಸಿಬ್ಬಂದಿಗಳು ಸಹ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಎಲ್ಲರ ರಕ್ಷಣೆಗಾಗಿ ಕಾರ್ಯಾಚರಣೆ ಭರದಿಂದ ಸಾಗಿದೆ.
ಈಗ ಕೋ-ವಿನ್ ವ್ಯಾಕ್ಸಿನ್ ವಿವರಗಳು ಆರೋಗ್ಯ ಸೇತು ಆ್ಯಪ್ ನಲ್ಲಿ ಲಭ್ಯ
ಘಟನೆ ನಡೆದ ಪ್ರದೇಶದಿಂದ 110 km ದೂರದಲ್ಲಿ ಅಲಕಾನಂದ ಪಿಂಡಾ ನದಿ ಪ್ರದೇಶದಲ್ಲಿ ಅವರ ಮೃತದೇಹವು ಪತ್ತೆಯಾಗಿದೆ. ಚೌಧರಿ 20 ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಪೊಲೀಸ್ ವೃತ್ತಿಗೆ ಸೇರ್ಪಡೆಯಾಗಿದ್ದರು. ಬಳಿಕ ಉತ್ತರಖಂಡ ಪ್ರತ್ಯೇಕ ರಾಜ್ಯವಾದಾಗ ಅವರು ಉತ್ತರಖಂಡದಲ್ಲಿ ವೃತ್ತಿ ಜೀವನ ಮುಂದುವರೆಸಿದ್ದರು. ರಿಷಿ ಗಂಗಾ ಪವರ್ ಯೋಜನೆ ಬಳಿ 15 ದಿನಗಳ ಹಿಂದೆ ಚೌಧರಿ ಅವರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇದೀಗ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಹಲವು ಪೊಲೀಸ್ ಸಿಬ್ಬಂದಿ ಈ ಘಟನೆಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಸ್ಥಳದಲ್ಲಿ NDRF ರಕ್ಷಣಾ ಪಡೆ ಮೊಕ್ಕಾಂ ಹೂಡಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಪಂದ್ಯಗಳಿಗೆ ರವೀಂದ್ರ ಜಡೇಜಾ ಅನುಮಾನ…!
ಇಂದಿನ ಪುಷ್ಯಾಮಾಸ ಅಮಾವಾಸ್ಯೆಯಲ್ಲಿ ಈ ಏಳು ರಾಶಿಯವರಿಗೆ ಜೀವನದಲ್ಲಿ ಶುಕ್ರನಿಂದ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಪ್ರಾಪ್ತಿ..!!
ಯಾವತ್ತಿಗೂ ಸಚಿನ್.. ಸಚಿನ್ನೇ… ಕ್ರಿಕೆಟ್ ದೇವ್ರ ಬೆಂಬಲಕ್ಕೆ ನಿಂತ ಅಭಿಮಾನಿಗಳು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel