ಅಂದು ಅಹಿಂದ, ಇಂದು ಹಿಂದ: `ತಂತ್ರ’ರಾಮಯ್ಯನ ಹೊಸ ಆಟ ಶುರು
ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚತುರ ಚಾಣಾಕ್ಯನ ಚದುರಂಗದಾಟ ಶುರುವಾಗಿದೆ. ಕೇಸರಿಕೋಟೆ ಛಿದ್ರ ಛಿದ್ರ ಮಾಡಲು ರಾಜಕೀಯ ಪೈಲ್ವಾನ ಸಿದ್ದರಾಮಯ್ಯ ಹೊಸ ವ್ಯೂಹ ರಚಿಸಿದ್ದಾರೆ. 2023 ಚುನಾವಣೆಗೆ ಹುಲಿಯಾ ಜಬರ್ದಸ್ತ್ ಪ್ಲಾನ್ ಮಾಡಿಕೊಂಡಿದ್ದಾರೆ.
ಹೌದು…! ರಾಜ್ಯ ರಾಜಕಾರಣದ ಚಾಣಾಕ್ಷ, ರಾಜ್ಯದ ಮಾಸ್ ಲೀಡರ್, ಮಾಜಿ ಸಿಎಂ ಸಿದ್ದರಾಮಯ್ಯ 2023ರ ಚುನಾವಣಕ್ಕೆ ಹೊಸ ರಾಜ ನೀತಿಯ ರೋಚಕ ತಂತ್ರದೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ. ಇದು ಅಂತಿಂಥಾ ತಂತ್ರವಲ್ಲ, ಈ ಹಿಂದೆ ಸಿದ್ದರಾಮಯ್ಯರನ್ನ ಸಿಎಂ ಪಟ್ಟಕ್ಕೇರಿಸಿದ್ದ ತಂತ್ರ.
ಅಂದು ಸಿದ್ದರಾಮಯ್ಯರ ಬತ್ತಳಿಕೆಯಿಂದ ಸಿಡಿದಿದ್ದ ಅಹಿಂದ ಅಸ್ತ್ರ ಅವರನ್ನು ರಾಜ್ಯದ ಮಾಸ್ ಲೀಡರ್ ಮಾಡ್ತು. ಅದೇ ಅಸ್ತ್ರ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರ ತಂದುಕೊಡ್ತು. ಅದೇ ಅಸ್ತ್ರ ಟಗರು ಸಿದ್ದರಾಮಯ್ಯ ಅವರನ್ನ ಪವರ್ ಫುಲ್ ಸಿಎಂಯನ್ನಾಗಿ ಮಾಡ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅಂತಹದ್ದೆ ಅಸ್ತ್ರವನ್ನ ಪ್ರಯೋಗಿಸೋಕೆ ಸಜ್ಜಾಗಿದ್ದಾರೆ. ಆ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವ ಪಣತೊಟ್ಟಿದ್ದಾರೆ ತಂತ್ರ ರಾಮಯ್ಯ.
ಅಂದು ಅಹಿಂದ ಇಂದು ಹಿಂದ..!
ಎಸ್..! 2005ರಲ್ಲಿ ಸಿದ್ದರಾಮಯ್ಯ ಭತ್ತಳಿಕೆಯಿಂದ ಬೆಂಕಿಯಂತೆ ಸಿಡಿದಿದ್ದ ಅಹಿಂದ ಅಸ್ತ್ರ, ಎದುರಾಳಿಗಳ ನಿದ್ದೆಗೆಡಿಸಿತ್ತು. ರಾಜ್ಯ ರಾಜಕೀಯದ ದುರೀಣ, ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ನಿಸ್ಸೀಮಾ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನೂ ಸಿದ್ದು ತಂತ್ರ ಕಂಗಾಲು ಮಾಡಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯರನ್ನ ಜೆಡಿಎಸ್ ನಿಂದ ಹೊರಹಾಕಲಾಯ್ತು. ಇದರಿಂದ ಕುಗ್ಗದ ಸಿದ್ದರಾಮಯ್ಯ, ತಮ್ಮ ಹೋರಾಟದ ಮೇಲೆ ನಂಬಿಕೆ ಇರಿಸಿ ರಾಜ್ಯದಾದ್ಯಂತ ಅಹಿಂದ ಸಂಘಟನೆ ಮಾಡಿದ್ರು. ಅದು ಅತ್ಯಂತ ಯಶಸ್ವಿಯೂ ಆಯ್ತು.. ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರ ಮನೆಮನದಲ್ಲಿ ಸ್ಥಾನ ಪಡೆದುಕೊಂಡರು. ಸಿದ್ದರಾಮಯ್ಯ ಅಹಿಂದ ವರ್ಗದ ಅನಭಿಶಕ್ತ ದೊರೆಯಾದರು. ಅಹಿಂದ ಸಂಘಟನೆ ಸಿದ್ದರಾಮಯ್ಯ ರಾಜಕೀಯ ಬದುಕಿನ ಟರ್ನಿಂಗ್ ಪಾಯಿಂಟ್. ಅವತ್ತು ಸಿದ್ದರಾಮಯ್ಯ ಅಹಿಂದ ಸಂಘಟನೆ ಮಾಡದೇ ಇದ್ದಿದ್ದರೇ ಸಿದ್ದರಾಮಯ್ಯ ರಾಜ್ಯ ಚುಕ್ಕಾಣಿ ಹಿಡಿಯುತ್ತಿರಲಿಲ್ಲ. ಸಿದ್ದರಾಮಯ್ಯರ ಅಹಿಂದ ಅಸ್ತ್ರವೇ 2013ರಲ್ಲಿ ಕಾಂಗ್ರೆಸ್ ಗೆ ಅಧಿಕಾರ ತಂದುಕೊಡ್ತು.
ಇದೀಗ ಕಾಂಗ್ರೆಸ್ ಸಾಲು ಸಾಲು ಸೋಲುಗಳಿಂದ ಕಂಗಾಲಾಗಿದೆ. ಈ ಹಿಂದೆ ಯಾವತ್ತೂ ಕಾಂಗ್ರೆಸ್ ಗೆ ರಾಜ್ಯದಲ್ಲಿ ಈ ಸ್ಥಿತಿ ಬಂದಿರಲಿಲ್ಲ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದೆ. ಇದೇ ಕಾರಣಕ್ಕಾಗಿ ಹುಲಿಯಾ ಸಿದ್ದರಾಮಯ್ಯ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಆ ಅಸ್ತ್ರದ ಹೆಸರೇ ಹಿಂದ…!
ಹಿಂದ ಅಸ್ತ್ರ ಹಿಡಿದು ಅಖಾಡದಲ್ಲಿ ಅಬ್ಬರಿಸಲಿದ್ದಾರೆ ಸಿದ್ದರಾಮಯ್ಯ
ಹೌದು..! ದೊಡ್ಡಗೌಡರ ಗರಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಸಿದ್ದರಾಮಯ್ಯರ ತಂತ್ರಗಾರಿಕೆಯಲ್ಲಿ ಅವರದ್ದೇಯಾದ ಒಂದು ಲೆಕ್ಕ ಇದೆ. ಆ ಲೆಕ್ಕ ದಲ್ಲಿ ಲೆಕ್ಕ ರಾಮಯ್ಯ ಎಂದೂ ಎಡವಿದ್ದಿಲ್ಲ. ಹಾಗೇ ಈಗ 2023ರ ಚುನಾವಣೆಯಲ್ಲಿ ಟಾರ್ಗೆಟ್ ಮಾಡಿಕೊಂಡಿರುವ ಸಿದ್ದರಾಮಯ್ಯ ಹಿಂದ ರಣತಂತ್ರದೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿದ್ದಾರೆ.
ಹಿಂದ ಹೋರಾಟದಲ್ಲಿ ಕುರುಬ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಶೋಷಿತ ಸಮುದಾಯಗಳಾದಂತಹ ಉಪ್ಪಾರ, ನಾಯಕ, ತಿಗಳ, ಈಡಿಗದಂತಹ ಸಮುದಾಯಕ್ಕೂ ಜನಸಂಖ್ಯಾ ಆಧಾರದಲ್ಲಿ ಮೀಸಲಾತಿಯನ್ನ ಕಲ್ಪಿಸಿಕೊಡಬೇಕು ಎಂದು ಹೋರಾಟ ಮಾಡಲಿದ್ದಾರೆ. ಈ ಮೂಲಕ ಕುರುಬ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡುತ್ತಿರುವ ಎದುರಾಳಿಗಳಿಗೆ ಚೆಕ್ ಮೇಟ್ ಇಟ್ಟು, ಹಿಂದುಳಿದ ವರ್ಗಗಳ ಬಲದೊಂದಿಗೆ 2023ರ ಚುನಾವಣೆಯಲ್ಲಿ ಸಮರರಾಮಯ್ಯ ಅಬ್ಬರಿಸಲು ಪ್ಲಾನ್ ಮಾಡಿದ್ದಾರೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಒಟ್ಟಾರೆ ಈ ಹಿಂದೆ ಅಹಿಂದ ಸಂಘಟನೆ ಸಿದ್ದರಾಮಯ್ಯಗೆ ಆನೆಬಲ ನೀಡುತ್ತು. ಇದೀಗ ಹಿಂದ ಹೋರಾಟ ಸಿದ್ದು ಕೈ ಹಿಡಿಯುತ್ತಾ..? ಇದಕ್ಕೆ ಕಾಲವೇ ಉತ್ತರಿಸಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel