ಉತ್ತರಖಂಡದಲ್ಲಿ ಹಿಮಕುಸಿತ : ಮೃತರ ಸಂಖ್ಯೆ 50ಕ್ಕೇರಿಕೆ : ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತದ ತೀವ್ರತೆಗೆ ಸಿಲುಕಿದ್ದ, ತಪೋವನ ಸುರಂಗ ಮತ್ತು ರೈನಿ ವಿದ್ಯುತ್ ಯೋಜನೆ ಸ್ಥಳದಿಂದ ಮತ್ತೆ 12 ಮೃತದೇಹಗಳನ್ನ ಹೊರತೆಗೆಯಲಾಗಿದೆ.
ಈ ಮೂಲಕ ಇದುವರೆಗೂ ಹಿಮದುರಂತದಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೇಯಾಗಿದ್ದು, ಇನ್ನೂ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನೂ 154 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಹಾಗೂ ಸಿಲುಕಿಕೊಂಡವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಎನ್ಟಿಪಿಸಿಯ 520 ಮೆಗಾ ವಾಟ್ನ ತಪೋವನ್ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ ಕೆಸರು ತೆರವು ಕಾರ್ಯಾಚರಣೆ ವೇಳೆ ಐವರ ಶವಪತ್ತೆಯಾದವು. ಉಳಿದಂತೆ ಆರು ಶವಗಳು 13.2 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆ ರೈನಿ ಹಾಗೂ ಒಂದು ಶವ ರುದ್ರಪ್ರಯಾಗ ನದಿ ಪಾತ್ರದಲ್ಲಿ ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗ ಮಾರ್ಗದಲ್ಲಿ ತುಂಬಿರುವ ಕೆಸರು ತೆರವುಗೊಳಿಸುವ ಕಾರ್ಯದಲ್ಲಿ ರಕ್ಷಣಾ ತಂಡಗಳು ಕಾರ್ಯತತ್ಪರವಾಗಿವೆ.
ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಹೀಗೆ ಮಾಡಿದರೆ ಅಷ್ಟಐಶ್ವರ್ಯ ನಿಮ್ಮ ಹಿಂದೆ ಸಾಲುಸಾಲಾಗಿ ಪ್ರಾಪ್ತಿಯಾಗುತ್ತದೆ..!!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel