ಮೋದಿ ಅವರ ದುರಹಂಕಾರದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ : ಪ್ರಿಯಾಂಕಾ ವಾದ್ರಾ..!
ಉತ್ತರ ಪ್ರದೇಶ : ಮೋದಿ ಅವರ ದುರಹಂಕಾರ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಪ್ರಯಾಂಕಾ ವಾದ್ರಾ ಕಿಸಾನ್ ಪಂಚಾಯತ್ನಲ್ಲಿ ಭಾಗಿಯಾಗಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಮುಖ ತೋರಿಸಲಾಗದೇ ಗಡ್ಡ ಬೆಳೆಸಿದ್ದಾರೆ : ಸಿದ್ದರಾಮಯ್ಯ
ಹಳೆಯ ಕಥೆಗಳಲ್ಲಿ ರಾಜ ಮತ್ತು ರಾಣಿ ತಮ್ಮ ಗೆಲುವಿನ ಬಳಿಕ ದುರಹಂಕಾರಿಗಳಾಗಿರುತ್ತಿದ್ದರು. ಇದೀಗ ಪ್ರಧಾನಿ ಮೋದಿ 2ನೇ ಬಾರಿ ಅಧಿಕಾರಕ್ಕೇರಿದ ಬಳಿಕ ದುರಹಂಕಾರ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ರೈತರನ್ನು ಗೌರವಿಸಬೇಕು, ಅವರಿಗೆ ಮತ ನೀಡಿದ ರೈತರ ಜೊತೆ ಯಾಕೆ ಮಾತನಾಡಲು ಮುಂದಾಗುತ್ತಿಲ್ಲ. ಮಾತುಕತೆಯ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ. ಪ್ರಧಾನಿ ಮೋದಿ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಮುಂದಾಗುವ ಬದಲು 2 ಅತ್ಯಾಧುನಿಕ ವಿಮಾನ ಖರೀದಿಸಿದ್ದಾರೆ. ಅವರು ಕಬ್ಬು ಬೆಳೆಗಾರರ ಬಾಕಿ ಪಾವತಿಸುವುದಾಗಿ ಈ ಮೊದಲು ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಿಸಿಲ್ಲ. ಆದರೆ ಹೊಸ ಸಂಸತ್ತು ಭವನಕ್ಕೆ 20 ಸಾವಿರ ಕೋಟಿ ರೂಪಾಯಿ ವ್ಯಯಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.