ADVERTISEMENT
Tuesday, May 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ

Shwetha by Shwetha
March 19, 2021
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
IPS officer pledges
Share on FacebookShare on TwitterShare on WhatsappShare on Telegram

ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ

ಹೈದರಾಬಾದ್, ಮಾರ್ಚ್19: ತೆಲಂಗಾಣ ಹಿರಿಯ ಐಪಿಎಸ್ ಅಧಿಕಾರಿ ಆರ್.ಎಸ್.ಪ್ರವೀಣ್ ಕುಮಾರ್ ಅವರ ವಿವಾದಾತ್ಮಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಅವರು ಭವಿಷ್ಯದಲ್ಲಿ ಯಾವುದೇ ಹಿಂದೂ ಧರ್ಮ ಮತ್ತು ಸಂಪ್ರದಾಯವನ್ನು ಅನುಸರಿಸುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಹಿಂದೂ ವಿರೋಧಿ ಪ್ರಮಾಣ ವಚನ ಬೋಧಿಸುವುದು ಕಾಣುತ್ತದೆ.
IPS officer pledges
ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಅಧಿಕಾರಿಗಳು ಪ್ರಸ್ತುತ ತೆಲಂಗಾಣ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆ ಸೊಸೈಟಿಯ (ಟಿಎಸ್‌ಡಬ್ಲ್ಯುಆರ್‌ಇಎಸ್) ಕಾರ್ಯದರ್ಶಿಗಳಾಗಿದ್ದಾರೆ. ಈ ಆಕ್ಷೇಪಾರ್ಹ ವೀಡಿಯೊ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಜನರು ಇದನ್ನು ಹಿಂದೂ ವಿರೋಧಿ ಪ್ರಚಾರದ ಭಾಗವೆಂದು ಪರಿಗಣಿಸಿದ್ದಾರೆ.

Related posts

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

May 19, 2026
ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

May 19, 2026

ಮಾಹಿತಿಯ ಪ್ರಕಾರ, ತೆಲಂಗಾಣದ ಪೆದ್ದಪಳ್ಳಿ ಜಿಲ್ಲೆಯ ಧುಲಿಕಟ್ಟಾ ಪ್ರದೇಶದ ಬೌದ್ಧ ದೇವಾಲಯವೊಂದರಲ್ಲಿ ಪ್ರಾರಂಭವಾದ ‘ಸ್ವರೋ ಹೋಲಿ ಮಾಸ’ ಸಮಾರಂಭದಲ್ಲಿ ಐಪಿಎಸ್ ಅಧಿಕಾರಿ ವಿದ್ಯಾರ್ಥಿಗಳಿಗೆ ಹಿಂದೂ ವಿರೋಧಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯವನ್ನು ನಿರ್ವಹಿಸಿದರು.

https://twitter.com/Srikanth4Bharat/status/1371496217092399104?s=19

ಆ ಕಿರು ವೀಡಿಯೊದಲ್ಲಿ, ಮಕ್ಕಳಿಗೆ ಪ್ರಮಾಣವಚನ ಬೋಧಿಸುವ ಪ್ರವೀಣ್ ಕುಮಾರ್, ನಾನು ಗೌರಿ, ಗಣಪತಿ ಮತ್ತು ಇತರ ಹಿಂದೂ ದೇವರುಗಳನ್ನು ನಂಬುವುದಿಲ್ಲ. ನಾನು ಅವರನ್ನು ಎಂದಿಗೂ ಪೂಜಿಸುವುದಿಲ್ಲ. ಅವರನ್ನು ದೇವರ ಸಾಕಾರವೆಂದು ಪರಿಗಣಿಸಿ ನಾನು ಹಾಗೆ ಮಾಡುವುದಿಲ್ಲ.‌ ನಾನು ಶಾದ್ಧ ಕರ್ಮವನ್ನು ಮಾಡುವುದಿಲ್ಲ ಅಥವಾ ದೇಹವನ್ನು ದಾನ ಮಾಡುವುದಿಲ್ಲ. ಬುದ್ಧನು ತೋರಿಸಿದ ಮಾರ್ಗ ಮತ್ತು ತತ್ವಗಳಿಗಿಂತ ಭಿನ್ನವಾದ ಯಾವುದನ್ನೂ ನಾನು ಮಾಡುವುದಿಲ್ಲ.ನಾನು ಎಂದಿಗೂ ಮದ್ಯಪಾನ ಮಾಡುವುದಿಲ್ಲ. ನಾನು ರಾಮನನ್ನು ಮತ್ತು ಕೃಷ್ಣನನ್ನು ಕೂಡ ನಂಬುವುದಿಲ್ಲ ಎಂದು ಹೇಳಿದ್ದಾರೆ.
IPS officer pledges

ನಿರ್ಗತಿಕ ಮತ್ತು ವಂಚಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು, ತೆಲಂಗಾಣ ರಾಜ್ಯ ಸರ್ಕಾರವು ನಡೆಸುತ್ತಿರುವ ವಿವಿಧ ಶಾಲೆಗಳು, ಕಾಲೇಜುಗಳು ಮತ್ತು ಹಾಸ್ಟೆಲ್‌ಗಳನ್ನು ನಿರ್ವಹಿಸಲು ತೆಲಂಗಾಣ ಸರ್ಕಾರ 2014 ರಲ್ಲಿ ಟಿಎಸ್‌ಡಬ್ಲ್ಯುಆರ್‌ಇಎಸ್ ಸ್ಥಾಪಿಸಿತ್ತು. ಅದರ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಅವರು ಇಂದು ಆ ಹುದ್ದೆಯನ್ನು ಅಲಂಕರಿಸಿದ್ದಾರೆ.

https://twitter.com/SaakshaTv/status/1370931426573479936?s=19

https://twitter.com/SaakshaTv/status/1370953799855136771?s=19

https://twitter.com/SaakshaTv/status/1370941291241046016?s=19

Tags: hindu godIPS officer pledges
ShareTweetSendShare
Join us on:

Related Posts

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

by Shwetha
May 19, 2026
0

ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಪೋಷಕರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇತ್ತೀಚಿನ ತೈಲ ಬೆಲೆ ಏರಿಕೆಯು ನೇರವಾಗಿ ಶಾಲಾ ಮಕ್ಕಳ ಸಾರಿಗೆಯ ಮೇಲೆ...

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

by Shwetha
May 19, 2026
0

ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಆತಂಕಕಾರಿ ಹೇಳಿಕೆ ನೀಡಿ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ. ಇರಾನ್ ಜೊತೆಗಿನ ಅಣು ಒಪ್ಪಂದದ ಸಾಧ್ಯತೆಗಳು ಹಾಗೂ ಹೊಸ ಸಂಘರ್ಷದ ಭೀತಿಯ...

ವಿಸ್ಕಿ ರಮ್ ಬಿಯರ್ ಪ್ರಿಯರಿಗೆ ಬಂಪರ್ ಆಫರ್ ರಾಜ್ಯ ಸರ್ಕಾರದಿಂದ ಮದ್ಯದ ದರದಲ್ಲಿ ಭಾರಿ ಇಳಿಕೆ ಹೊಸ MRP ಲಿಸ್ಟ್ ಇಲ್ಲಿದೆ

ವಿಸ್ಕಿ ರಮ್ ಬಿಯರ್ ಪ್ರಿಯರಿಗೆ ಬಂಪರ್ ಆಫರ್ ರಾಜ್ಯ ಸರ್ಕಾರದಿಂದ ಮದ್ಯದ ದರದಲ್ಲಿ ಭಾರಿ ಇಳಿಕೆ ಹೊಸ MRP ಲಿಸ್ಟ್ ಇಲ್ಲಿದೆ

by Shwetha
May 19, 2026
0

ಬೆಂಗಳೂರು ಕರ್ನಾಟಕದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರವು ಒಂದು ದೊಡ್ಡ ಸಿಹಿಸುದ್ದಿ ನೀಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026 27 ರ ರಾಜ್ಯ ಬಜೆಟ್...

ಕೇರಳ: 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ UDF ಸಂಪುಟ ಪ್ರಮಾಣ ವಚನ

ಕೇರಳ: 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ UDF ಸಂಪುಟ ಪ್ರಮಾಣ ವಚನ

by Shwetha
May 19, 2026
0

ವಿ.ಡಿ. ಸತೀಶನ್ ಅವರು ಕೇರಳದ ನೂತನ ಮುಖ್ಯಮಂತ್ರಿಯಾಗಿ ಭರ್ಜರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಕೇರಳದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ವಿಶೇಷವೆಂದರೆ, ಕಳೆದ...

ಮುಷ್ಕರಕ್ಕೆ ಸಜ್ಜಾದ ನೌಕರರಿಗೆ ಬಿಗ್ ಶಾಕ್: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತಂದ ಕೆಎಸ್ಆರ್ಟಿಸಿ

ಮುಷ್ಕರಕ್ಕೆ ಸಜ್ಜಾದ ನೌಕರರಿಗೆ ಬಿಗ್ ಶಾಕ್: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತಂದ ಕೆಎಸ್ಆರ್ಟಿಸಿ

by Shwetha
May 19, 2026
0

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿರುವ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram