ADVERTISEMENT
Tuesday, May 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿರಾಟ್ ಕೊಹ್ಲಿ…ಟೀಮ್ ಇಂಡಿಯಾದ ಯಶಸ್ವಿ ನಾಯಕ.. ಆದ್ರೆ ಟಾಸ್ ವಿಚಾರದಲ್ಲಿ ನತದೃಷ್ಟ ..!

admin by admin
April 1, 2021
in Newsbeat, Sports, ಕ್ರೀಡೆ
virat kohli team india saakshatv
Share on FacebookShare on TwitterShare on WhatsappShare on Telegram

Related posts

ತಮಿಳುನಾಡು ಕಬ್ಜ ಮಾಡಿದ ದಳಪತಿ ಈಗ ಬೆಂಗಳೂರು ಟಾರ್ಗೆಟ್: GBA ಚುನಾವಣೆಗೆ ದಳಪತಿ ವಿಜಯ್ ಎಂಟ್ರಿ ಫಿಕ್ಸ್?

ತಮಿಳುನಾಡು ಕಬ್ಜ ಮಾಡಿದ ದಳಪತಿ ಈಗ ಬೆಂಗಳೂರು ಟಾರ್ಗೆಟ್: GBA ಚುನಾವಣೆಗೆ ದಳಪತಿ ವಿಜಯ್ ಎಂಟ್ರಿ ಫಿಕ್ಸ್?

May 26, 2026
ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ತೈಲ ದರ ಏರಿಕೆಯಿಂದ ರಾಜ್ಯಕ್ಕೇ ಹೆಚ್ಚು ಲಾಭ: ಆರ್ ಅಶೋಕ್

May 26, 2026

ಟೀಮ್ ಇಂಡಿಯಾದ ಯಶಸ್ವಿ ನಾಯಕ.. ಆದ್ರೆ ಟಾಸ್ ವಿಚಾರದಲ್ಲಿ ನತದೃಷ್ಟ ವಿರಾಟ್ ಕೊಹ್ಲಿ..! 

Virat Kohli the unluckiest captain ever in terms of toss record

ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ಆಕ್ರಮಣಕಾರಿ ಪ್ರವೃತ್ತಿಯ ನಾಯಕ. ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್. ಸಹ ಆಟಗಾರರ ನೆಚ್ಚಿನ ಸಾರಥಿ.. ವಿಶ್ವ ಕ್ರಿಕೆಟ್ ನ ರನ್ ಮೇಷಿನ್. ಚೇಸಿಂಗ್ ಗಾಡ್.. ದಾಖಲೆಗಳ ಸರದಾರ.. ಆಧುನಿಕ ಕ್ರಿಕೆಟ್ ನ ಅತ್ಯಬ್ಧುತ ಆಟಗಾರ. ಹೀಗೆ ವಿರಾಟ್ ಕೊಹ್ಲಿಯವರನ್ನು ಬಣ್ಣಿಸಲು ಹೊರಟ್ರೆ ಸಾಕಷ್ಟಿದೆ.
ಆದ್ರೆ ವಿರಾಟ್ ಕೆಲವು ವಿಚಾರದಲ್ಲಿ ನತದೃಷ್ಟ.. ನಾಯಕನಾಗಿ ಐಪಿಎಲ್ ನಲ್ಲಿ ಆರ್ ಸಿಬಿ ಪರ 13 ವರ್ಷಗಳಿಂದ ಆಡಿದ್ರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಐಸಿಸಿ ಮಹತ್ವದ ಟೂರ್ನಿಗಳಲ್ಲೂ ಪ್ರಶಸ್ತಿ ಗೆದ್ದಿಲ್ಲ.
ಇದನ್ನು ಹೊರತುಪಡಿಸಿ ಈ ಒಂದು ವಿಚಾರದಲ್ಲೂ ನತದೃಷ್ಟ. ಹೌದು, ಕ್ರಿಕೆಟ್ ಪಂದ್ಯದ ಮಹತ್ವದ ಟಾಸ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಅದೃಷ್ಟವೇ ಒಲಿದು ಬಂದಿಲ್ಲ. ಹಾಗಂತ ಟಾಸ್ ಸೋತ್ರೂ ಪಂದ್ಯವನ್ನು ಗೆದ್ದುಕೊಂಡು ಟೀಮ್ ಇಂಡಿಯಾವನ್ನು ಗೆಲುವಿನ ಅಲೆಯಲ್ಲಿ ತೇಲಾಡುವಂತೆ ಮಾಡಿದ್ದಾರೆ.
ಹೌದು, ನಾಯಕನಾಗಿ ವಿರಾಟ್ ಕೊಹ್ಲಿ ಟಾಸ್ ಸೋತಿರುವ ನಾಯಕರ ಪಟ್ಟಿಯಲ್ಲೂ ಮುಂಚೂಣಿಯಲ್ಲಿದ್ದಾರೆ.
ಅಂದ ಹಾಗೇ ಇತ್ತೀಚೆಗೆ ನಡೆದ 12 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಟಾಸ್ ಗೆದ್ದಿದ್ದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ ಹತ್ತು ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 200 ಬಾರಿ ಮುನ್ನಡೆಸಿದ್ದಾರೆ. ಇದ್ರಲ್ಲಿ ವಿರಾಟ್ ಕೊಹ್ಲಿ 85 ಪಂದ್ಯಗಳಲ್ಲಿ ಟಾಸ್ ಗೆದ್ರೆ, 115 ಬಾರಿ ಟಾಸ್ ಸೋತಿದ್ದಾರೆ.
ಹಾಗೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 332 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 158 ಬಾರಿ ಟಾಸ್ ಗೆದ್ರೆ, 174 ಬಾರಿ ಟಾಸ್ ಸೋತಿದ್ದಾರೆ.
ಇನ್ನೊಬ್ಬ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ 221 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದ್ರಲ್ಲಿ ICC Test Matchಅಜರುದ್ದೀನ್ 125 ಬಾರಿ ಟಾಸ್ ಗೆದ್ರೆ, 96 ಬಾರಿ ಟಾಸ್ ಸೋತಿದ್ದಾರೆ.
ಟೀಮ್ ಇಂಡಿಯಾದ ರೂವಾರಿ ಸೌರವ್ ಗಂಗೂಲಿ 195 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 95 ಬಾರಿ ಟಾಸ್ ಗೆದ್ರೆ, 100 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.
ಮಾಜಿ ನಾಯಕ 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ 108 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 54 ಬಾರಿ ಟಾಸ್ ಗೆದ್ರೆ, 54 ಬಾರಿ ಟಾಸ್ ಸೋತಿದ್ದಾರೆ.
ಹಾಗೇ ನಮ್ಮ ರಾಹುಲ್ ದ್ರಾವಿಡ್ 104 ಬಾರಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 61 ಬಾರಿ ಟಾಸ್ ಗೆದ್ದಿದ್ರೆ, 43 ಬಾರಿ ಟಾಸ್ ಸೋತಿದ್ದಾರೆ. ಈ ಪೈಕಿ ಟಾಸ್ ವಿಚಾರದಲ್ಲಿ ರಾಹುಲ್ ದ್ರಾವಿಡ್ ಅದೃಷ್ಟದ ನಾಯಕನಾದ್ರೆ, ಸರಾಸರಿ ಲೆಕ್ಕಚಾರದಲ್ಲಿ ವಿರಾಟ್ ಕೊಹ್ಲಿ ನತದೃಷ್ಟ. ಹಾಗೇ ನೋಡಿದ್ರೆ, ಟಾಸ್ ಸೋಲು ಗೆಲುವಿನ ಲೆಕ್ಕಚಾರದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರು ಅಷ್ಟೊಂದು ಅದೃಷ್ಟವಂತರಲ್ಲ.
ಇನ್ನು ವಿರಾಟ್ ಕೊಹ್ಲಿಯವರ ಮೂರು ಮಾದರಿಯ ಕ್ರಿಕೆಟ್ ನ ಟಾಸ್ ಗೆಲುವು- ಸೋಲಿನ ಅಂಕಿ ಅಂಶಗಳು ಹೀಗಿವೆ.
ಟೆಸ್ಟ್ ಕ್ರಿಕೆಟ್ ನಲ್ಲಿ 60 ಪಂದ್ಯಗಳಲ್ಲಿ 27 ಬಾರಿ ಟಾಸ್ ಗೆದ್ರೆ, 33 ಬಾರಿ ಟಾಸ್ ಸೋತಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ 95 ಪಂದ್ಯಗಳಲ್ಲಿ 40 ಬಾರಿ ಟಾಸ್ ಗೆದ್ರೆ, 55 ಬಾರಿ ಸೋತಿದ್ದಾರೆ.
ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 45 ಪಂದ್ಯಗಳಲ್ಲಿ 18 ಬಾರಿ ಗೆದ್ರೆ, 27 ಬಾರಿ ಟಾಸ್ ಸೋತಿದ್ದಾರೆ.
ಟಾಸ್ ಸೋಲು ಗೆಲುವಿನ ಐದು ನಾಯಕರಲ್ಲಿ ವಿರಾಟ್ ಗೆ ಕೊನೆಯ ಸ್ಥಾನ

ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಟಾಸ್ ಗೆಲುವು ಹಾಗೂ ಸೋತಿರುವ ನಾಯಕರ ಸಾಲಿನ ಟಾಪ್ ಫೈವ್ ನಲ್ಲಿ ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲಿ ನಿಲ್ಲುತ್ತಾರೆ.
ವೆಸ್ಟ್ ಇಂಡೀಸ್ ನ ಕಿರಾನ್ ಪೊಲಾರ್ಡ್ 34 ಪಂದ್ಯಗಳಲ್ಲಿ 18 ಬಾರಿ ಟಾಸ್ ಗೆದ್ರೆ, 16 ಬಾರಿ ಟಾಸ್ ಸೋತಿದ್ದಾರೆ.
ಇಂಗ್ಲೆಂಡ್ ನ ಇಯಾನ್ ಮೊರ್ಗಾನ್ 180 ಪಂದ್ಯಗಳಲ್ಲಿ 91 ಬಾರಿ ಟಾಸ್ ಗೆದ್ರೆ, 89 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.
ಆಸ್ಟ್ರೇಲಿಯಾದ ಆರೋನ್ ಫಿಂಚ್ 85 ಪಂದ್ಯಗಳಲ್ಲಿ 42 ಬಾರಿ ಟಾಸ್ ಗೆದ್ರೆ, 43 ಬಾರಿ ಟಾಸ್ ಸೋತಿದ್ದಾರೆ.
ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ 161 ಪಂದ್ಯಗಳಲ್ಲಿ 75 ಬಾರಿ ಟಾಸ್ ಗೆದ್ರೆ, 86 ಬಾರಿ ಟಾಸ್ ಸೋತಿದ್ದಾರೆ.
ಶ್ರೀಲಂಕಾದ ಕರುಣರತ್ನೆ 28 ಪಂದ್ಯಗಳಲ್ಲಿ 13 ಬಾರಿ ಟಾಸ್ ಗೆದ್ರೆ, 15 ಬಾರಿ ಟಾಸ್ ಸೋತಿದ್ದಾರೆ.
ವಿರಾಟ್ ಕೊಹ್ಲಿ 200 ಪಂದ್ಯಗಳಲ್ಲಿ 85 ಬಾರಿ ಟಾಸ್ ಗೆದ್ರೆ, 115 ಬಾರಿ ಟಾಸ್ ಸೋತಿದ್ದಾರೆ.

ಇನ್ನು ಅಂಕಿ ಅಂಶಗಳ ಪ್ರಕಾರ ವಿಶ್ವ ಕ್ರಿಕೆಟ್‍ನಲ್ಲಿ ಟಾಸ್ ಸೋತಿರುವ ನತದೃಷ್ಟದ ನಾಯಕರ ಸಾಲಿನಲ್ಲೂ ವಿರಾಟ್ ಕೊಹ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.
ವಿರಾಟ್ ಕೊಹ್ಲಿ 200 ಪಂದ್ಯಗಳಲ್ಲಿ 115 ಬಾರಿ ಟಾಸ್ ಸೋತ್ರೆ, 85 ಬಾರಿ ಟಸ್ ಗೆದ್ದಿದ್ದಾರೆ.
ವೆಸ್ಟ್ ಇಂಡೀಸ್ ನ ರಿಚಿ ರಿಚರ್ಡಸನ್ 155 ಪಂದ್ಯಗಳಲ್ಲಿ 66 ಬಾರಿ ಟಾಸ್ ಗೆದ್ದಿದ್ದು, 89 ಬಾರಿ ಟಾಸ್ ಸೋತಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ 139 ಪಂದ್ಯಗಳಲ್ಲಿ 77 ಬಾರಿ ಟಾಸ್ ಸೋತ್ರೆ, 62 ಬಾರಿ ಟಾಸ್ ಗೆದ್ದಿದ್ದಾರೆ.
ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ 172 ಪಂದ್ಯಗಳಲ್ಲಿ 77 ಬಾರಿ ಟಾಸ್ ಗೆದ್ರೆ, 95 ಬಾರಿ ಟಾಸ್ ಸೋತಿದ್ದಾರೆ.

Tags: #saakshatvbcciCricketKapil DevM.S Dhonimohammad azaruddinRahul DravidsaakshatvsportsSourav Gangulyteam indiavirat kohliworld circket
ShareTweetSendShare
Join us on:

Related Posts

ತಮಿಳುನಾಡು ಕಬ್ಜ ಮಾಡಿದ ದಳಪತಿ ಈಗ ಬೆಂಗಳೂರು ಟಾರ್ಗೆಟ್: GBA ಚುನಾವಣೆಗೆ ದಳಪತಿ ವಿಜಯ್ ಎಂಟ್ರಿ ಫಿಕ್ಸ್?

ತಮಿಳುನಾಡು ಕಬ್ಜ ಮಾಡಿದ ದಳಪತಿ ಈಗ ಬೆಂಗಳೂರು ಟಾರ್ಗೆಟ್: GBA ಚುನಾವಣೆಗೆ ದಳಪತಿ ವಿಜಯ್ ಎಂಟ್ರಿ ಫಿಕ್ಸ್?

by Shwetha
May 26, 2026
0

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ದಳಪತಿ ವಿಜಯ್ ಈಗ ಪಕ್ಕದ ರಾಜ್ಯ ಕರ್ನಾಟಕದ ಮೇಲೂ ಕಣ್ಣಿಟ್ಟಿದ್ದಾರಾ? ಹೌದು, ಇಂಥದೊಂದು ಬಿಸಿ ಬಿಸಿ ಚರ್ಚೆ ಈಗ ರಾಜಧಾನಿ...

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ತೈಲ ದರ ಏರಿಕೆಯಿಂದ ರಾಜ್ಯಕ್ಕೇ ಹೆಚ್ಚು ಲಾಭ: ಆರ್ ಅಶೋಕ್

by Shwetha
May 26, 2026
0

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಕ್ಕೇ ಹೆಚ್ಚು ಲಾಭವಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ...

ರಾಜ್ಯಸಭೆ ಅಖಾಡದಲ್ಲಿ ಹಿರಿಯ ನಾಯಕರ ಜಿದ್ದಾಜಿದ್ದಿ: ದೇವೇಗೌಡ್ರು ವರ್ಸಸ್ ಸದಾನಂದ ಗೌಡ – ಅಮಿತ್ ಶಾಗೆ ಅಗ್ನಿಪರೀಕ್ಷೆ

ರಾಜ್ಯಸಭೆ ಅಖಾಡದಲ್ಲಿ ಹಿರಿಯ ನಾಯಕರ ಜಿದ್ದಾಜಿದ್ದಿ: ದೇವೇಗೌಡ್ರು ವರ್ಸಸ್ ಸದಾನಂದ ಗೌಡ – ಅಮಿತ್ ಶಾಗೆ ಅಗ್ನಿಪರೀಕ್ಷೆ

by Shwetha
May 26, 2026
0

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಈಗ ರಾಜ್ಯಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜ್ಯದಿಂದ ತೆರವಾಗುತ್ತಿರುವ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಕಾಂಗ್ರೆಸ್ ಸುಲಭವಾಗಿ ಗೆಲ್ಲುವ...

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಸರ್ಕಾರದ ಮಹತ್ವದ ನಿರ್ಧಾರ..!

by Shwetha
May 26, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಹಾಗೂ ‘ಗೃಹಜ್ಯೋತಿ’ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಸರ್ಕಾರ ಮುಂದಾಗಿದೆ. ನಿನ್ನೆ ನಡೆದ SIR ಸಭೆಯಲ್ಲಿ ಈ ಕುರಿತು ಮಹತ್ವದ...

ಕೈ ಕೊಟ್ಟ ಕಾಂಗ್ರೆಸ್ ಅಂದಕಾಲತ್ತಿಲ್ ಗೆಳೆಯರ ನಡುವೆ ಮಹಾ ಸಮರ ತಮಿಳುನಾಡಿನಲ್ಲಿ ದೋಸ್ತಿ ಅಂತ್ಯ ವಿಜಯ್ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಸಾಥ್

ಕೈ ಕೊಟ್ಟ ಕಾಂಗ್ರೆಸ್ ಅಂದಕಾಲತ್ತಿಲ್ ಗೆಳೆಯರ ನಡುವೆ ಮಹಾ ಸಮರ ತಮಿಳುನಾಡಿನಲ್ಲಿ ದೋಸ್ತಿ ಅಂತ್ಯ ವಿಜಯ್ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಸಾಥ್

by Shwetha
May 26, 2026
0

ತಮಿಳುನಾಡು ರಾಜಕೀಯದ ಇತಿಹಾಸದಲ್ಲಿ ಎಂದೂ ಕಾಣದಂತಹ ದೊಡ್ಡ ಬದಲಾವಣೆ ಈಗ ಸಂಭವಿಸಿದೆ. ದಶಕಗಳ ಕಾಲ ಪರಸ್ಪರ ಕೈ ಹಿಡಿದು ನಡೆದಿದ್ದ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಈಗ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram