ADVERTISEMENT
Thursday, July 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

saakshatv film – ಬೆಂಗಳೂರಿಗೆ ಆಗಮಿಸಿದ ‘ಚೆನ್ನೈ ಲವ್‌ ಸ್ಟೋರಿ’ ಚಿತ್ರತಂಡ: ಜುಲೈ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

admin by admin
July 23, 2026
in Crime, Newsbeat, ಮನರಂಜನೆ
chennai-love-story-movie-kiran-abbavaram-bangalore-visit-saakshattv

chennai-love-story-movie-kiran-abbavaram-bangalore-visit-saakshattv

Share on FacebookShare on TwitterShare on WhatsappShare on Telegram

ಬೆಂಗಳೂರು: ಬಹುನಿರೀಕ್ಷಿತ ‘ಚೆನ್ನೈ ಲವ್‌ ಸ್ಟೋರಿ’ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಚಾರ ಕಾರ್ಯದ ಭಾಗವಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದೆ. ಜುಲೈ 24 ರಂದು ಚಿತ್ರವು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದ್ದು, ಜುಲೈ 23ರಂದೇ ಬೆಂಗಳೂರಿನಲ್ಲಿ ವಿಶೇಷ ಪ್ರೀಮಿಯರ್ ಶೋಗಳು ಆಯೋಜನೆಗೊಂಡಿವೆ.
ಕನ್ನಡದಲ್ಲೂ ಉತ್ತಮ ಮಾರುಕಟ್ಟೆ ನಿರೀಕ್ಷೆಯಲ್ಲಿರುವ ಈ ಚಿತ್ರವನ್ನು ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ವಿತರಕ ಕುಮಾರ್ ಅವರು ಬಿಡುಗಡೆ ಮಾಡುತ್ತಿದ್ದಾರೆ.

ಬೆಂಗಳೂರಿನ ಹಳೆಯ ದಿನಗಳನ್ನು ನೆನೆದ ನಟ ಕಿರಣ್ ಅಬ್ಬಾವರಂ
ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ನಟ ಕಿರಣ್ ಅಬ್ಬಾವರಂ, ತಮ್ಮ ಸಾಫ್ಟ್‌ವೇರ್ ಉದ್ಯೋಗದ ದಿನಗಳನ್ನು ಹಾಗೂ ಬೆಂಗಳೂರಿನೊಂದಿಗಿನ ಅವಿನಾಭಾವ ಸಂಬಂಧವನ್ನು ಹಂಚಿಕೊಂಡರು. “ನನ್ನ ತವರು ರಾಯಚೋಟಿ ಇಲ್ಲಿಗೆ ಹತ್ತಿರದಲ್ಲೇ ಇದೆ. ಬಿ.ಟೆಕ್ ಮುಗಿದ ಮೇಲೆ ಮೊದಲ ಕೆಲಸ ಸಿಕ್ಕಿದ್ದು ಬೆಂಗಳೂರಿನಲ್ಲೇ. ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್ ಹಾಗೂ ಮಾರತಹಳ್ಳಿಯಲ್ಲಿ ಸುಮಾರು 3 ವರ್ಷ ವಾಸವಿದ್ದೆ” ಎಂದು ಅವರು ನೆನೆದರು.

Related posts

devara hesaralli pramana madutthene.. nagendra prasad kannada film

Saakshafilm – ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್!

July 23, 2026
Astro – ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

Astro – ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

July 23, 2026

ಸಾಫ್ಟ್‌ವೇರ್ ಹಿನ್ನೆಲೆಯಿಂದ ಬಂದು ಚಿತ್ರರಂಗದಲ್ಲಿ ಸಾಧನೆ ಮಾಡಿದ ರಕ್ಷಿತ್ ಶೆಟ್ಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ತಮಗೆ ದೊಡ್ಡ ಸ್ಪೂರ್ತಿ ಎಂದ ಕಿರಣ್, “ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗುವಾಗ ಐಟಿ ಕೆಲಸ ಬಿಡಬೇಕೋ ಬೇಡವೋ ಎಂದು ದಿನವೂ ಯೋಚಿಸುತ್ತಿದ್ದೆ. ಕೊನೆಗೆ ಸಿನಿಮಾ ಕನಸಿಗಾಗಿ ಕೆಲಸ ಬಿಟ್ಟು ಬಂದೆ. ಕಳೆದ 5 ವರ್ಷಗಳಲ್ಲಿ 12 ಸಿನಿಮಾಗಳನ್ನು ಮಾಡಿದ್ದು, ಹಲವು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದೇನೆ. ನನ್ನ ಚೆನ್ನೈ ಲವ್‌ ಸ್ಟೋರಿ ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ” ಎಂದರು.

ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ
ಚಿತ್ರದ ನಾಯಕಿ ಶ್ರೀ ಗೌರಿ ಪ್ರಿಯ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಮಹಿಳೆಯೊಬ್ಬರಿಗೆ ಈ ಮಟ್ಟದ ಸವಾಲಿನ ಹಾಗೂ ದೊಡ್ಡ ಪಾತ್ರ ಸಿಗುವುದು ವಿರಳ. ಸಾಮಾನ್ಯವಾಗಿ ಪ್ರೇಮಕಥೆಗಳು ಹುಡುಗನ ದೃಷ್ಟಿಕೋನದಲ್ಲೇ ಇರುತ್ತವೆ. ಆದರೆ ‘ಚೆನ್ನೈ ಲವ್ ಸ್ಟೋರಿ’ಯಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರ ದೃಷ್ಟಿಕೋನಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗಿದೆ” ಎಂದರು.

“ಇದು ಸಾಕಷ್ಟು ಟ್ವಿಸ್ಟ್, ಸಸ್ಪೆನ್ಸ್ ಹಾಗೂ ಅತ್ಯಂತ ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡ ಪ್ರಾಮಾಣಿಕ ಪ್ರಯತ್ನ. ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿಸುವಂತಹ ಸವಾಲಿನ ಪಾತ್ರ ಇದಾಗಿದ್ದು, ನನ್ನ ಅಭಿನಯದ ಕೆರಿಯರ್‌ನಲ್ಲೇ ಇದು ಅತ್ಯುತ್ತಮ ಪಾತ್ರ ಎಂದು ಧೈರ್ಯವಾಗಿ ಹೇಳಬಲ್ಲೆ” ಎಂದರು. ಜೊತೆಗೆ, ‘ಲವರ್’ ಹಾಗೂ ‘ಹ್ಯಾಪಿ ರಾಜ್’ ಚಿತ್ರಗಳ ಶೂಟಿಂಗ್‌ಗಾಗಿ ಗೋಕರ್ಣ ಹಾಗೂ ಬೆಂಗಳೂರಿನಲ್ಲಿ ಕಾಲಕಳೆದ ಕ್ಷಣಗಳನ್ನು ಮೆಲಕುಹಾಕಿದರು ಶ್ರೀ ಗೌರಿ ಪ್ರಿಯ.

‘ಬೇಬಿ’ ಚಿತ್ರದಂತೆ ಹೊಸ ತನದ ಪ್ರೇಮಕಥೆ
ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದಿರುವ ಕುಮಾರ್ ಮಾತನಾಡಿ, “ಇತ್ತೀಚೆಗೆ ಬಂದ ‘ಬೇಬಿ’ ಸಿನಿಮಾದಂತೆ ಈ ಚಿತ್ರದಲ್ಲೂ ಅತ್ಯುತ್ತಮ ಫ್ರೆಶ್‌ನೆಸ್ ಇದೆ. ಕಿರಣ್ ಅವರ ಲುಕ್ ಹಾಗೂ ನಟನೆ ಟ್ರೇಲರ್‌ನಲ್ಲೇ ಭರವಸೆ ಮೂಡಿಸಿದೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಈ ಫ್ರೆಶ್ ಲವ್ ಸ್ಟೋರಿಯನ್ನು ಕರ್ನಾಟಕದ ಪ್ರೇಕ್ಷಕರು ಖಂಡಿತವಾಗಿಯೂ ಮೆಚ್ಚಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags: #ChennaiLoveStory #KiranAbbavaram #SriGouriPriya #ChennaiLoveStoryKannada #SaakshatTV #SanathRai #SandalwoodNews #TollywoodNews #KiranAbbavaramMovies #NewReleaseJuly24 #BangaloreMovieNews #SouthCinema#saakshatv
ShareTweetSendShare
Join us on:

Related Posts

devara hesaralli pramana madutthene.. nagendra prasad kannada film

Saakshafilm – ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್!

by admin
July 23, 2026
0

ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್! ಬೆಂಗಳೂರು: ಖ್ಯಾತ ಸಾಹಿತಿ ಹಾಗೂ ನಟ ಡಾ. ವಿ. ನಾಗೇಂದ್ರ ಪ್ರಸಾದ್...

Astro – ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

Astro – ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

by admin
July 23, 2026
0

ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಪ್ರಮುಖ ಎತ್ತರದ ಶಿವಲಿಂಗವಿದು. ನಮ್ಮ ಈ ಭರತಖಂಡವು ಕೋಟ್ಯಾನು ಕೋಟಿ ದೇವಾನುದೇವತೆಗಳ...

The King of Branding: How David Beckham Built an Empire Beyond Football!

David Beckham – ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!

by admin
July 23, 2026
0

 ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!  ಆತ ಫುಟ್‍ಬಾಲ್ ಮೈದಾನದಲ್ಲಿ ಕಾಮನಬಿಲ್ಲಿನಂತೆ ಚಿತ್ತಾರ ಬಿಡಿಸುತ್ತಿದ್ದ ಕಲೆಗಾರ. ಕಾಲಿನ ಸ್ಪರ್ಶದಿಂದಲೇ ಚೆಂಡನ್ನು...

Enemy Issue Remedy

Astro- ಶತ್ರು  ಸಮಸ್ಯೆ ಸರ್ವನಾಶವಾಗಲು ಕೇರಳಿಯ ತಾಂತ್ರಿಕ ಈ ಬೀಜ ಮಂತ್ರವನ್ನು ಪಠಣೆ ಮಾಡಿ…!

by admin
July 23, 2026
0

ಕೆಲವರ ಮನೆಯಲ್ಲಿ ಮತ್ತು ಕೇಲಸದಲ್ಲಿ ಅಂದ್ರೆ ಕೆಲವರಿಗೆ ಶತ್ರುಗಳು ಹೆಚ್ಚಾಗಿ ಇರುತ್ತಾರೆ ಹಾಗೆಯೆ ಅವರು ಏನೇ ಮಾಡಿದರೂ ಕೂಡ ಅವರನ್ನು ನೋಡಿ ಕೆಲವೊಬ್ಬರು ಸಹಿಸಿಕೊಳ್ಳುವುದಿಲ್ಲ ಹಾಗಾಗಿ ಅವರ...

ನುಡಿದಂತೆ ನಡೆಯಿರಿ ಸಿಎಂ ಅವರೇ- ಎನ್ ಪಿ ಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತನ್ನಿ:ಸಂಕಷ್ಟದಲ್ಲಿ ನಿಮ್ಮ ಜೊತೆಗಿದ್ದೆವು ಈಗ ನಮ್ಮ ಕೈ ಹಿಡಿಯಿರಿ ಷಡಕ್ಷರಿ ಪತ್ರಕ್ಕೆ ಸಿಎಂ ಅಸ್ತು ಎನ್ನುತ್ತಾರಾ!?

ನುಡಿದಂತೆ ನಡೆಯಿರಿ ಸಿಎಂ ಅವರೇ- ಎನ್ ಪಿ ಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತನ್ನಿ:ಸಂಕಷ್ಟದಲ್ಲಿ ನಿಮ್ಮ ಜೊತೆಗಿದ್ದೆವು ಈಗ ನಮ್ಮ ಕೈ ಹಿಡಿಯಿರಿ ಷಡಕ್ಷರಿ ಪತ್ರಕ್ಕೆ ಸಿಎಂ ಅಸ್ತು ಎನ್ನುತ್ತಾರಾ!?

by Shwetha
July 23, 2026
0

ಬೆಂಗಳೂರು: ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ಅಲಿಯಾಸ್ ಎನ್ ಪಿ ಎಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಅಥವಾ ಒಪಿಎಸ್ ಅನ್ನು ಮರು ಜಾರಿಗೊಳಿಸುವಂತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram