ಸಿಎಂ ಬಿಎಸ್ ವೈ ಅವರ ಅವಧಿಯಲ್ಲಿ ಮೀಸಲಾತಿ ಸಿಗುವ ವಿಶ್ವಾಸವಿದೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ..!
ಕೊಪ್ಪಳ : ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಿಎಂ ಅವರು ವಿಧಾನಸೌಧದಲ್ಲಿ ನಮಗೆ ಮಾತು ಕೊಟ್ಟಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ ಸದನದ ಒಳಗೇ ಸಮುದಾಯದ ಪರ ಹೋರಾಟ ಮಾಡಿದ್ದಾರೆ. ಮೀಸಲಾತಿಗಾಗಿ ಸಮಾಜ ಒಗ್ಗಟ್ಟಾಗಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕೊಪ್ಪಳದಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇನ್ನೂ ಮಂತ್ರಿ ಸ್ಥಾನ ನೀಡಿದ ನಂತರ ಪಾದಯಾತ್ರೆ ನಿಲ್ಲಿಸುತ್ತೇನೆ ಅಂತಾ ನಿರಾಣಿ ಸಿಎಂಗೆ ಹೇಳಿದ್ದರು ಅದರಂತೆ ನಿರಾಣಿ ಅವರು ಸಚಿವರಾಗುತ್ತಿದ್ದಂತೆ ಪಾದಯಾತ್ರೆ ನಿಲ್ಲಿಸಲು ಹೇಳಿದರು. ನಾವು ಮೀಸಲಾತಿ ಗಾಗಿ ಹೋರಾಟ ನಿಲ್ಲಿಸಲಿಲ್ಲ ಎಂದಿದ್ದಾರೆ.
ಇದೇ ವೇಳೆ ಪಾದಯಾತ್ರೆ ಲೆಕ್ಕ ಕೊಡಿ ಎಂದು ಸಚಿವ ನಿರಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ನಾವು ಯಾರು ಕೇಳಿದ್ರೂ ಲೆಕ್ಕ ಕೊಡೋದಕ್ಕೆ ಸಿದ್ದಸಿದ್ದೇವೆ. ನಮ್ಮ ಹೋರಾಟಕ್ಕೆ ಸಚಿವ ಮುರಿಗೇಶ ನಿರಾಣಿ ಒಂದೂ ಪೈಸ ಕೊಟ್ಟಿಲ್ಲ. ಹೋರಾಟಕ್ಕೆ ಒಂದಷ್ಟು ವಾಹನ ವ್ಯವಸ್ಥೆ ಮಾಡಿರಬಹುದಷ್ಟೇ. ಇದರ ಹೊರತಾಗಿ ಇತರೇ ಶಾಸಕರು- ಸಚಿವರಂತೆ ಹೋರಾಟಕ್ಕೆ ಹಣ ಕೊಟ್ಟಿಲ್ಲ.
ಈವರೆಗಂತೂ ಮುರುಗೇಶ ನಿರಾಣಿ ಹೋರಾಟದ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಿಲ್ಲ. ಮುಂದೆ ಸಹಾಯ ಮಾಡಬಹುದು ಕೇಳುತ್ತೇವೆ. ಕುತಂತ್ರಿಗಳು ಎಲ್ಲ ಸಮುದಾಯದಲ್ಲಿ ಇದ್ದಾರೆ. ಆ ಕುತಂತ್ರಿಗಳ ಬಗ್ಗೆ ಮಾತನಾಡಿದರೆ ಯಾರೂ ನಮ್ಮ ಬಗ್ಗೆ ಮಾತಾಡಿದ್ರು ಅಂತಾ ತಿಳಕೋಬಾರದು. ಯಾವುದೇ ಸಮುದಾಯ ನಮಗೆ ಅಂದಿದ್ದಾರೆ ಅಂತಾ ಯಾಕೆ ತಿಳಿದುಕೊಳ್ಳಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ.
ಕೋಲಾರ : ಟೈಯರ್ ಅಂಗಡಿಯಲ್ಲಿ ಅಗ್ನಿ ಅನಾಹುತ
ಸಿಡಿ ಕೇಸ್ : ಡಿಕೆಶಿ ಕಡೆಯವರ ಭಯದಿಂದ ಪೊಲೀಸ್ ಭದ್ರತೆ ಪಡೆದುಕೊಂಡಿದ್ದೇವೆ – ಯುವತಿ ಸಹೋದರ..!








